3 ತಿಂಗಳಿಂದ ವೇತನವಿಲ್ಲ:‘ಸರ್ಕಾರ ಕೆ.2 ಮೂಲಕ ವೇತನ ಪಾವತಿಗೆ ಅಣಿಯಾಗಿದ್ದು, ಅಂಗನವಾಡಿ ಕಾರ್ಯಕರ್ತರ ವೇತನ 3 ತಿಂಗಳಿಂದ ಬಾಕಿ ಇದೆ.
ಮಕ್ಕಳಿಗೆ ಬೆಳಿಗ್ಗೆ ಮೊಳಕೆ ಕಾಳು, ಮಧ್ಯಾಹ್ನ ಊಟ, ಸಂಜೆ ಹಾಲು ಹಾಗೂ ವಾರಕ್ಕೆ 2 ದಿನ ಮೊಟ್ಟೆ ವಿತರಿಸುತ್ತಿದ್ದೇವೆ. ಗರ್ಭಿಣಿಯರಿಗೂ ಇಲ್ಲಿ ಅಡುಗೆ ಮಾಡಬೇಕು. ಸರ್ಕಾರ ಪ್ರತಿ ಮಗುವಿಗೆ ಕಾಯಿಪಲ್ಯ ಬಳಕೆಗೆ 50 ಪೈಸೆ, ಗರ್ಭಿಣಿಯರು–ಬಾಣಂತಿಯರಿಗೆ ₹ 2 ನೀಡುತ್ತಿದೆ. ಸದ್ಯಕ್ಕೆ ಯಾವ ಅನುದಾನವೂ ಬಂದಿಲ್ಲ. ಎಲ್ಲವನ್ನು ಸ್ವಂತ ಖರ್ಚಿನಿಂದ ಮಾಡುತ್ತಿದ್ದೇನೆ’ ಎಂದು ಅಂಗನವಾಡಿ ಕಾರ್ಯಕರ್ತೆ ಧನಲಕ್ಷ್ಮಿ ಸಮಸ್ಯೆ ಬಿಚ್ಚಿಟ್ಟರು. ಸಮೀಪದ ಆಕಾಶ ಮಕ್ಕಿಯಲ್ಲಿ ಅಂಗನವಾಡಿ ಕೇಂದ್ರದಲ್ಲಿ ಹಾವು ಕಚ್ಚಿ ಮಗು ಸಾವನ್ನಪ್ಪಿ ವರ್ಷ ಕಳೆದಿಲ್ಲ. ಈ ಅಂಗನವಾಡಿ ಕಟ್ಟಡವೂ ಇಂತಹ ಜಾಗದಲ್ಲಿರುವ ಕಾರಣ ಇನ್ನೊಂದು ಅವಘಡ ಸಂಭವಿಸುವ ಮುನ್ನ ಜನಪ್ರತಿನಿಧಿಗಳು ಹೊಸ ಕಟ್ಟಡ ಉದ್ಘಾಟಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.