ಸಾಗರದ ಶ್ರೀಧರ್ ನಗರದ ಸಮೀರ್, ಇಮ್ರಾನ್, ಅಕ್ರಂ, ಶಿವರಾಜ್ ಬಂಧಿತರು. ಇಮ್ರಾನ್, ಅಕ್ರಂ, ಶಿವರಾಜ್ ಆನಂದಪುರ ಸಮೀಪದ ಯಡೇಹಳ್ಳಿಯಲ್ಲಿ ಕಾರ್ಯಕ್ರಮ ಒಂದಕ್ಕೆ ಬಂದಿದ್ದರು. ನಂತರ ಆನಂದಪುರದ ಅಂಗಡಿಯೊಂದರಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಈ ಗಲಾಟೆ ಹಿನ್ನೆಲೆಯಲ್ಲಿ ಇನ್ನೊಬ್ಬ ಯುವಕ ಸಮೀರ್ ಸಾಗರದಿಂದ ಬಂದಿದ್ದಾನೆ. ಸಮೀರ್ ಆನಂದಪುರದಲ್ಲಿ ಮಾರಟಕ್ಕಿಟ್ಟಿದ್ದ ಲಾಂಗ್ ತೆಗೆದುಕೊಂಡು ಹೆದ್ದಾರಿಯಲ್ಲಿ ವಾಹನಗಳನ್ನು ನಿಲ್ಲಿಸಿ ಎಂದು ಕೂಗಾಡುತ್ತಾ ಲಾಂಗ್ ಬಿಸುತ್ತಾ ಓಡಿದ್ದಾನೆ.