ಸಾಗುವಳಿ ಜಮೀನು ಹಚ್ಚಹಸಿರಿನಿಂದ ಕಂಗೊಳಿಸುವ ಸಮಯದಲ್ಲಿ ದೀಪಾವಳಿಯ ಸಂಭ್ರಮ ಕಳೆಗಟ್ಟುತ್ತದೆ. ಬೂರೆ, ಸ್ನಾನ, ಪಾಡ್ಯ, ಕರಿ, ಗೋಪೂಜೆ, ಬೆರಕೆ ಸೊಪ್ಪು ಸಂಗ್ರಹ, ಕೃಷಿ ಪರಿಕರಗಳ ದುರಸ್ತಿ ಪ್ರಮುಖವಾಗಿದೆ. ಇದು ಭೂಮಿಯ ಪಾಠವನ್ನು ವಿಶೇಷವಾಗಿ ರೈತ ಕುಟುಂಬಕ್ಕೆ ತಿಳಿಸಿಕೊಡುವ ಆಚರಣೆ. ಭೂಮಿ ಹುಣ್ಣಿಮೆಯೂ ಇದರ ಒಂದು ಭಾಗ. ಹಣತೆಗಳಿಂದ ಮೂಡುವ ದೀಪ ಜ್ಞಾನದ ಸಂಕೇತ ಎಂದು ಹೇಳಿದರು.