ತಾಲ್ಲೂಕಿನ ಮುತ್ತಿನಕೊಪ್ಪದ ಪವಿತ್ರಾ ರಾಮಯ್ಯ ರೈತ ಹೋರಾಟಗಾರ್ತಿ. ರೈತ ಪರ ಹೋರಾಟಗಳ ಜತೆ ಜನ ಸಾಮಾನ್ಯರ ಕಷ್ಟಗಳಿಗೂ ಧ್ವನಿಯಾದವರು. ಪತಿಯ ಗ್ರಾಮ ಕಾಚನಕಟ್ಟೆಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಸಹಕಾರಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಅವರು, ಜೆಡಿಎಸ್ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು. ನಂತರ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದರು.