ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಾನ್ನದಲ್ಲಿ ವಿಷ ಬೆರೆಸಿ ಕೊಲೆಗೆ ಯತ್ನ: ದೂರು

Last Updated 23 ಫೆಬ್ರುವರಿ 2021, 4:28 IST
ಅಕ್ಷರ ಗಾತ್ರ

ಸಾಗರ: ತಾಲ್ಲೂಕಿನ ಹೊಸಗುಂದ ಗ್ರಾಮದಲ್ಲಿ ಚಿತ್ರಾನ್ನ ಹಾಗೂ ಚಹಾದಲ್ಲಿ ವಿಷ ಬೆರೆಸಿ ಇಂದಿರಮ್ಮ ಎಂಬುವವರನ್ನು ಕೊಲೆ ಮಾಡಲು ಪ್ರಯತ್ನ ನಡೆಸಲಾಗಿದೆ ಎಂದು ಆರೋಪಿಸಿ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಾಗಿದೆ.

‘ಮನೆಯಲ್ಲಿ ಚಿತ್ರಾನ್ನ, ಚಹಾ ತಯಾರಿಸಿ ದೇವರಿಗೆ ಕೈಮುಗಿದು ಸ್ವಲ್ಪ ಹೊತ್ತಿನ ನಂತರ ಅಡುಗೆ ಮನೆಗೆ ಮರಳಿ, ಚಿತ್ರಾನ್ನ ಹಾಗೂ ಚಹಾ ಸೇವಿಸಿದ ತಕ್ಷಣ ಅಸ್ವಸ್ಥಗೊಂಡೆ.ಪುತ್ರಿಭದ್ರಮ್ಮ ಬಂದು ಪರಿಶೀಲಿಸಿದಾಗ ಚಿತ್ರಾನ್ನ ಹಾಗೂ ಚಹಾದಲ್ಲಿ ವಿಷ ಬೆರೆಸಿರುವುದು ಬೆಳಕಿಗೆ ಬಂದಿದೆ’ ಎಂದುಇಂದಿರಮ್ಮ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಇಂದಿರಮ್ಮ ಚೇತರಿಸಿಕೊಂಡಿದ್ದಾರೆ. ಗ್ರಾಮಾಂತರ ಠಾಣೆಗೆ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT