‘ಪದವಿ ಕಾಲೇಜು ಅಧ್ಯಾಪಕರ ಬಹುದಿನಗಳ ಕನಸು ನನಸಾಗಿದೆ. ಇಂತಹ ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಕುಲಪತಿ ಬಿ.ಪಿ.ವೀರಭದ್ರಪ್ಪ, ಕುಲಸಚಿವೆ ಅನುರಾಧಾ, ನಿಕಟಪೂರ್ವ ಕುಲಸಚಿವ ಎಸ್.ಎಸ್.ಪಾಟೀಲ್ ಅವರಿಗೂ ಹಾಗೂ ಸಿಂಡಿಕೇಟ್ ಸದಸ್ಯರು ಅಭಿನಂದನಾರ್ಹರು ಎಂದು ಸಹ್ಯಾದ್ರಿ ಕಲಾ ಕಾಲೇಜಿನ ಅಧ್ಯಾಪಕರ ಸಂಘದ ಕಾರ್ಯದರ್ಶಿ ಪ್ರೊ.ಎಂ.ಎಚ್.ಪ್ರಹ್ಲಾದಪ್ಪ, ಪ್ರಮುಖರಾದ ಪ್ರೊ.ಸಿ.ಕೆ.ರಮೇಶ್, ಪ್ರೊ.ಪರಮೇಶ್ವರ ನಾಯ್ಕ, ಪ್ರೊ.ರಮೇಶ್ ಬಾಬು ಶ್ಲಾಘಿಸಿದ್ದಾರೆ.