ಬಿಜೆಪಿ ಪ್ರಣಾಳಿಕೆಯಲ್ಲಿ ದೇಶದ ಅಭಿವೃದ್ಧಿಯ ದೂರದೃಷ್ಟಿ ಅನಾವರಣ ಮಾಡಿದೆ. ರೈತರು, ಬಡವರು, ಮಹಿಳೆಯರು, ಯುವಕರ ಶ್ರೇಯಕ್ಕೆ ಆದ್ಯತೆ ನೀಡಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಡವರಿಗೆ ₨ 72 ಸಾವಿರ ನೀಡುವುದಾಗಿ ಭರವಸೆ ನೀಡಿದೆ. ಆದರೆ, ಅದು ಎಷ್ಟು ದಿನಕ್ಕೆ ಒಮ್ಮೆ ಎಂದು ಖಚಿತಪಡಿಸಿಲ್ಲ. ಈ ಕುರಿತು ಎಐಸಿಸಿ ಅಧ್ಯಕ್ಷರಲ್ಲೇ ಗೊಂದಲವಿದೆ ಎಂದು ಕುಟುಕಿದರು.