<p><strong>ಶಿವಮೊಗ್ಗ: </strong>ನಗರದ ಯಕ್ಷ ಸಂವರ್ಧನಾ ಸಂಸ್ಥೆ ಯಕ್ಷಗಾನ ಕಲೆಯ ಉಳಿವಿಗಾಗಿ ಕಲಿಕಾ ತರಬೇತಿ ಆರಂಭಿಸಿದೆ</p>.<p>ಹತ್ತು ವರ್ಷಗಳ ಹಿಂದೆ ರವೀಂದ್ರ ನಗರದಲ್ಲಿ ಆರಂಭವಾದ ಸಂಸ್ಥೆ ಯಕ್ಷಗಾನ ಕಲೆಯ ಉಳಿವಿಗಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನೀಡಿದೆ ಎಂದು ಸಂಸ್ಥೆಯ ಮುಖ್ಯಸ್ಥ ಭಾಗವತ ಪರಮೇಶ್ವರ ಹೆಗಡೆ ಬುಧವಾರ ಪತ್ರಿಕಾಗೊಷ್ಠಿಯಲ್ಲಿ ಮಾಹಿತಿ ನೀಡಿದರು.<br /><br />ಈ ವರ್ಷದ ಕಲಿಕಾ ತರಬೇತಿಗಳು ಜೂನ್ 9ರಿಂದ ಆರಂಭವಾಗುತ್ತವೆ. ಪ್ರತಿ ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನರವರೆಗೆ ಪೊಲೀಸ್ ಚೌಕಿ ಹತ್ತಿರವಿರುವ ಕ್ರಿಯೇಟಿವ್ ರೆಡ್ಸ್ ಶಾಲೆಯಲ್ಲಿ ಆರಂಭವಾಗುತ್ತವೆ ಎಂದು ವಿವರ ನೀಡಿದರು.</p>.<p>ಯಕ್ಷಗಾನ ಕಲೆ ಕೇವಲ ಗಂಡು ಮಕ್ಕಳಿಗೆ ಸೀಮಿತವಲ್ಲ. ಹೆಣ್ಣುಮಕ್ಕಳೂ ಕಲಿಯಬಹುದು. ಈ ಸಂಸ್ಥೆ ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಕಲೆ ಕಲಿಸಿಕೊಟ್ಟಿದೆ. ಪುರುಷರು ಮತ್ತು ಮಹಿಳೆಯರ ಸಾಕಷ್ಟು ತಂಡಗಳು ರೂಪುಗೊಂಡಿವೆ ಎಂದರು.</p>.<p>ಪೋಷಕರು ಮಕ್ಕಳನ್ನು ಯಕ್ಷಗಾನ ತರಗತಿಗಳಿಗೆ ಕಳಿಸಿಕೊಡಬೇಕು. ಇಲ್ಲಿ ಯಕ್ಷಗಾನದ ಹೆಜ್ಜೆ, ವೇಷಭೂಷಣ, ಭಾಗವತಿಕೆ, ಮದ್ದಳೆವಾದನ ಮತ್ತು ಚಂಡೆ ವಾದನ ಕಲಿಸಿಕೊಡಲಾಗುವುದು ಎಂದು ಹೇಳಿದರು.</p>.<p>ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ ಆಚಾರ್ಯ ಮಾತನಾಡಿ, ರವೀಂದ್ರನಗರದ ಗಣಪತಿ ದೇವಸ್ಥಾನದ ಅ.ಪ. ರಾಮಭಟ್ಟ ಹಾಗೂ ಐನಬೈಲು ಪರಮೇಶ್ವರ ಹೆಗಡೆ ಅವರ ಸಹಕಾರದ ಫಲವಾಗಿ ಈ ಯಕ್ಷಗಾನ ಸಂಸ್ಥೆ ಪ್ರತಿಷ್ಠಿತವಾಗಿ ಬೆಳೆದುಬರುತ್ತಿದೆ. ಮಕ್ಕಳಲ್ಲಿ ಇರುವ ಕಲಾ ಪ್ರೌಢಿಮೆ ಹೊರಜಗತ್ತಿಗೆ ಕಲಿಸಿಕೊಡುತ್ತಿದೆ. ಯಕ್ಷಗಾನದ ಜತೆಗೆ, ಮಕ್ಕಳಲ್ಲಿ ಪುರಾಣದ ಜ್ಞಾನ ಮೂಡಿಸಲಾಗುತ್ತಿದೆ ಎಂದರು.</p>.<p>ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಆನಂದ ಶೆಟ್ಟಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ: </strong>ನಗರದ ಯಕ್ಷ ಸಂವರ್ಧನಾ ಸಂಸ್ಥೆ ಯಕ್ಷಗಾನ ಕಲೆಯ ಉಳಿವಿಗಾಗಿ ಕಲಿಕಾ ತರಬೇತಿ ಆರಂಭಿಸಿದೆ</p>.<p>ಹತ್ತು ವರ್ಷಗಳ ಹಿಂದೆ ರವೀಂದ್ರ ನಗರದಲ್ಲಿ ಆರಂಭವಾದ ಸಂಸ್ಥೆ ಯಕ್ಷಗಾನ ಕಲೆಯ ಉಳಿವಿಗಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನೀಡಿದೆ ಎಂದು ಸಂಸ್ಥೆಯ ಮುಖ್ಯಸ್ಥ ಭಾಗವತ ಪರಮೇಶ್ವರ ಹೆಗಡೆ ಬುಧವಾರ ಪತ್ರಿಕಾಗೊಷ್ಠಿಯಲ್ಲಿ ಮಾಹಿತಿ ನೀಡಿದರು.<br /><br />ಈ ವರ್ಷದ ಕಲಿಕಾ ತರಬೇತಿಗಳು ಜೂನ್ 9ರಿಂದ ಆರಂಭವಾಗುತ್ತವೆ. ಪ್ರತಿ ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನರವರೆಗೆ ಪೊಲೀಸ್ ಚೌಕಿ ಹತ್ತಿರವಿರುವ ಕ್ರಿಯೇಟಿವ್ ರೆಡ್ಸ್ ಶಾಲೆಯಲ್ಲಿ ಆರಂಭವಾಗುತ್ತವೆ ಎಂದು ವಿವರ ನೀಡಿದರು.</p>.<p>ಯಕ್ಷಗಾನ ಕಲೆ ಕೇವಲ ಗಂಡು ಮಕ್ಕಳಿಗೆ ಸೀಮಿತವಲ್ಲ. ಹೆಣ್ಣುಮಕ್ಕಳೂ ಕಲಿಯಬಹುದು. ಈ ಸಂಸ್ಥೆ ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಕಲೆ ಕಲಿಸಿಕೊಟ್ಟಿದೆ. ಪುರುಷರು ಮತ್ತು ಮಹಿಳೆಯರ ಸಾಕಷ್ಟು ತಂಡಗಳು ರೂಪುಗೊಂಡಿವೆ ಎಂದರು.</p>.<p>ಪೋಷಕರು ಮಕ್ಕಳನ್ನು ಯಕ್ಷಗಾನ ತರಗತಿಗಳಿಗೆ ಕಳಿಸಿಕೊಡಬೇಕು. ಇಲ್ಲಿ ಯಕ್ಷಗಾನದ ಹೆಜ್ಜೆ, ವೇಷಭೂಷಣ, ಭಾಗವತಿಕೆ, ಮದ್ದಳೆವಾದನ ಮತ್ತು ಚಂಡೆ ವಾದನ ಕಲಿಸಿಕೊಡಲಾಗುವುದು ಎಂದು ಹೇಳಿದರು.</p>.<p>ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ ಆಚಾರ್ಯ ಮಾತನಾಡಿ, ರವೀಂದ್ರನಗರದ ಗಣಪತಿ ದೇವಸ್ಥಾನದ ಅ.ಪ. ರಾಮಭಟ್ಟ ಹಾಗೂ ಐನಬೈಲು ಪರಮೇಶ್ವರ ಹೆಗಡೆ ಅವರ ಸಹಕಾರದ ಫಲವಾಗಿ ಈ ಯಕ್ಷಗಾನ ಸಂಸ್ಥೆ ಪ್ರತಿಷ್ಠಿತವಾಗಿ ಬೆಳೆದುಬರುತ್ತಿದೆ. ಮಕ್ಕಳಲ್ಲಿ ಇರುವ ಕಲಾ ಪ್ರೌಢಿಮೆ ಹೊರಜಗತ್ತಿಗೆ ಕಲಿಸಿಕೊಡುತ್ತಿದೆ. ಯಕ್ಷಗಾನದ ಜತೆಗೆ, ಮಕ್ಕಳಲ್ಲಿ ಪುರಾಣದ ಜ್ಞಾನ ಮೂಡಿಸಲಾಗುತ್ತಿದೆ ಎಂದರು.</p>.<p>ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಆನಂದ ಶೆಟ್ಟಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>