ಶಿವಮೊಗ್ಗ:ರೈತ ಚಳವಳಿಗೆ ಹೊಸ ರೂಪ ಕೊಡಲುಪ್ರತಿ ತಾಲ್ಲೂಕಿನಲ್ಲೂ 100 ಯುವಕರ ತಂಡ ರಚಿಸಲಾಗುತ್ತಿದೆ ಎಂದು ರಾಜ್ಯ ರೈತ ಸಂಘದಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ಇಂದಿಗೂ ರೈತರ ಬವಣೆ ತಪ್ಪಿಲ್ಲ,ವೈಜ್ಞಾನಕ ಬೆಲೆ ನಿರೀಕ್ಷೆ ಈಡೇರಿಲ್ಲ. ವಿದೇಶಿ ಒಪ್ಪಂದಗಳು ರೈತರ ಕುತ್ತಿಗೆ ಹಿಚುಕುತ್ತಿವೆ. ಇಂಡೊ–ಅಮೆರಿಕಒಪ್ಪಂದ ಮಾಡಿಕೊಳ್ಳಬಾರದು. ಬೀಜ ಕಾಯ್ದೆಯಲ್ಲಿ ರೈತರ ಹಕ್ಕು ರಕ್ಷಿಸಬೇಕು. ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಬೇಕು. ಇಂತಹ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲುಡಿ.23 ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿಯ ಭಾರತೀ ನಗರದಲ್ಲಿ ರೈತ ಚೇತನ ಎನ್.ಡಿ.ಸುಂದರೇಶ್, ಕೆ.ಎಸ್.ಪುಟ್ಟಣ್ಣಯ್ಯ ಅವರ ನೆನಪಿನ ದಿನಾಚರಣೆ, ಕಾಯಕ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೆ.ಎಸ್.ಪುಟ್ಟಣ್ಣಯ್ಯ, ಎನ್.ಡಿ.ಸುಂದರೇಶ್ ರೈತ ಚೇತನಗಳು.ರೈತ ಹೋರಾಟಕ್ಕೆ, ಚಳವಳಿ ಕಟ್ಟಿ ಬೆಳೆಸಲು ಅವರ ಕೊಡುಗೆ ಅಪಾರವಾಗಿದೆ. ಡಿ.23 ವಿಶ್ವ ರೈತ ದಿನಾಚರಣೆ, ಚೌದರಿ ಚರಣ್ ಸಿಂಗ್ ಜನ್ಮದಿನ. ಈ ಕಾರ್ಯಕ್ರಮದಲ್ಲಿಸ್ವರಾಜ್ ಇಂಡಿಯಾ ಪಕ್ಷ ಭಾಗವಹಿಸುವುದು ವಿಶೇಷ.ಅಂದು ಅಂತರರಾಷ್ಟ್ರೀಯ ಒಪ್ಪಂದಗಳ ವಿರುದ್ದ ಹೋರಾಟ ರೂಪಿಸಲು ನಿರ್ಣಯ ಕೈಗೊಳ್ಳಲಾಗುವುದು. ರೈತ ಚಳವಳಿಗೆ ಹೊಸ ರೂಪ ಕೊಡುವ ಪ್ರಯತ್ನಮಾಡಲಾಗುವುದು. 10 ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸುವರು ಎಂದು ವಿವರ ನೀಡಿದರು.
ಬ್ರೆಜಿಲ್ ಪ್ರಧಾನಿ ಗಣರಾಜ್ಯೋತ್ಸವಕ್ಕೆ ಬರಲು ರೈತರ ವಿರೋಧವಿದೆ. ಡಿ.21ರಿಂದ 27ರವರೆಗೆ ದೇಶದ ಎಲ್ಲೆಡೆ ಪ್ರತಿಭಟನೆಗಳು ನಡೆಯಲಿವೆ.ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆನಡೆಸಿ, ಧಾನ ಮಂತ್ರಿಗೆ ಮನವಿಮಾಡಲಾಗುವುದು ಎಂದರು.