ಶಿವಮೊಗ್ಗ: ಕೊರೊನಾ ನಿರ್ಮೂಲನೆಗಾಗಿಕಾಂಗ್ರೆಸ್ರೂಪಿಸಿದ‘ಆರೋಗ್ಯ ಅಭಯ ಹಸ್ತ’ ಕಾರ್ಯಕ್ರಮ ಜಿಲ್ಲೆಯಲ್ಲಿ ಎರಡನೇ ಹಂತದತ್ತಸಾಗಿದೆಎಂದು ಕಾಂಗ್ರೆಸ್ ಜಿಲ್ಲಾ ಘಟಕದಅಧ್ಯಕ್ಷ ಎಚ್.ಎಸ್.ಸುಂದರೇಶ್ಹೇಳಿದರು.
ಪಕ್ಷದ ಕಾರ್ಯಕರ್ತರು ಕೊರೊನಾ ವಾರಿಯರ್ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜನರ ಮನೆಗಳಿಗೆತೆರಳಿ ಆರೋಗ್ಯ ಪರೀಕ್ಷೆ, ಸೋಂಕಿತರನ್ನುಆಸ್ಪತ್ರೆಗೆ ದಾಖಲಿಸುವುದು, ಮುಂಜಾಗ್ರತಾ ಕ್ರಮ ಕೈಗೊಳ್ಳುವುದು,ಜಾಗೃತಿ ಮೂಡಿಸುವ ಕೆಲಸಮಾಡುತ್ತಿದ್ದಾರೆ.ಆರೋಗ್ಯ ಅಭಯ ಹಸ್ತದಲ್ಲಿ ಸೇವೆ ಸಲ್ಲಿಸುತ್ತಿರುವ ವಾರಿಯರ್ಗಳಿಗೆಕೆಪಿಸಿಸಿಯಿಂದ ವಿಮೆ ನೀಡಲಾಗುತ್ತಿದೆ. ಜಿಲ್ಲೆಗೆ800ವಿಮಾಪಾಲಿಸಿಗಳು ಬಂದಿವೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ಜಿಲ್ಲೆಯ7 ವಿಧಾನಸಭಾ ಕ್ಷೇತ್ರಗಳಲ್ಲಿ14 ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವ್ಯಾಪ್ತಿಯಲ್ಲಿ ಕೋವಿಡ್ ನಿಯುಕ್ತಿಗೊಳಿಸಲು ಕಾಂಗ್ರೆಸ್ಪಣ ತೊಟ್ಟಿದೆ. ಕೋವಿಡ್ ವಿರುದ್ಧ ಜಾಗೃತಿ ಮೂಡಿಸುವುದು, ಜನರಿಗೆ ಅಗತ್ಯ, ಸುರಕ್ಷತಾ ಸಾಮಾಗ್ರಿ, ಔಷಧ ವಸ್ತುಗಳನ್ನು ಒದಗಿಸಲಾಗುತ್ತಿದೆ ಎಂದರು.
ವಾರಿಯರ್ಗಳಿಗೆ ₹1ಲಕ್ಷ ಮೊತ್ತದ ಆರೋಗ್ಯ ವಿಮಾಪಾಲಿಸಿಗಳನ್ನು ನೀಡಲಾಗುತ್ತಿದೆ. ಬ್ಲಾಕ್ಮಟ್ಟದಲ್ಲೂ ವಿತರಣೆ ಮಾಡಲಾಗುವುದು.ಮೊದಲ ಹಂತದ ಈ ಕಾರ್ಯಕ್ರಮ ಮುಕ್ತಾಯವಾಗಿದೆ. ಅ.18ರಿಂದ ಒಂದು ತಿಂಗಗಳು ಬೇರೆ ಬೇರೆ ಸ್ಥಳಗಳಲ್ಲಿ ಕಾರ್ಯಕ್ರಮಮುಂದುವರಿಯಲಿದೆಎಂದು ಮಾಹಿತಿ ನೀಡಿದರು.
ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್,ಕೊರೊನಾಹತೋಟಿಗೆ ರಾಜ್ಯ ಸರ್ಕಾರ ವಿಫಲವಾಗಿದೆ. ಡಿ.ಕೆ.ಶಿವಕುಮಾರ್ ಅವರು ಕೊರೊನಾತಡೆಗಟ್ಟಲು ಕಾಂಗ್ರೆಸ್ ಆರೋಗ್ಯ ಅಭಯ ಹಸ್ತ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ. ಪಕ್ಷದ ವಾರಿಯರ್ಗಳುಈ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ ಎಂದರು.
ಜಿಲ್ಲಾ ಬೂತ್ಮಟ್ಟದಏಜೆಂಟರ ನೇಮಕಾತಿ ಮುಖ್ಯಸ್ಥರಾಗಿಆರ್.ಪ್ರಸನ್ನಕುಮಾರ್ ಅವರನ್ನುಕೆಪಿಸಿಸಿ ಅಧ್ಯಕ್ಷರು ನೇಮಕ ಮಾಡಿದ್ದು, ಅವರನ್ನು ಪಕ್ಷದ ಮುಖಂಡರು ಅಭಿನಂದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಡಾ.ಶ್ರೀನಿವಾಸ್, ಪಂಡಿತ್ ವಿ. ವಿಶ್ವನಾಥ್, ನಾಗರಾಜ್, ಎಸ್.ರವಿಕುಮಾರ್, ಸಿ.ಎಸ್.ಚಂದ್ರಭೂಪಾಲ್, ಹನುಮಂತು, ಬಾಬುಇದ್ದರು.