’ಅವರು ನಮ್ಮ ಕಾಲೇಜಿನ ವಿದ್ಯಾರ್ಥಿಗಳಲ್ಲ. ಅವರು ಪ್ರವೇಶ ಪಡೆದಿದ್ದ ಕಾಲೇಜಿನ ಸಮಸ್ಯೆಯ ಕಾರಣ ಪರೀಕ್ಷೆ ಬರೆಯಲು ಇಲ್ಲಿಗೆ ಹಾಕಿದ್ದಾರೆ. ಅವರ ಪರೀಕ್ಷಾ ಪ್ರವೇಶ ಪತ್ರ ವಿಳಂಬವಾದ ಕಾರಣ ಸೋಮವಾರ ಅರ್ಧ ಗಂಟೆ ತಡವಾಯಿತು. ನಮ್ಮಲ್ಲಿ ನಕಲಿಗೆ ಅವಕಾಶ ಇಲ್ಲ. ಅದು ಆಕ್ರೋಶಕ್ಕೆ ಕಾರಣವಾಗಿರಬಹುದು. ನಾವು ಪರೀಕ್ಷಾ ಶುಲ್ಕ ಹೊರತುಪಡಿಸಿ ಹೆಚ್ಚುವರಿ ಹಣವನ್ನೂ ಪಡೆದಿಲ್ಲ’ ಎಂದು ಕಾಲೇಜಿನ ಪ್ರಾಂಶುಪಾಲರಾದ ವನಮಾಲ ಸತೀಶ್ ಪ್ರತಿಕ್ರಿಯಿಸಿದರು.