ಮೈಸೂರು ಕಾಗದ ಕಾರ್ಖಾನೆ ಅಸೋಸಿಯೇಷನ್ ಅಧ್ಯಕ್ಷ ಎಸ್. ಚಂದ್ರಶೇಖರ್, ‘ಕಾರ್ಖಾನೆಯ ಆಗಿನ ಹಾಗೂ ಈಗಿನ ಸ್ಥಿತಿಗತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಯಂತ್ರಗಳೂ ಸುಸ್ಥಿತಿಯಲ್ಲಿ ಇಲ್ಲ. ಇದರ ನಡುವೆ ಕಾರ್ಮಿಕ ಇಲಾಖೆಯ ಆದೇಶ ಸರ್ಕಾರ ಜಾರಿ ಮಾಡಿದರೆ ನಮ್ಮ ಬದುಕು ಅತಂತ್ರವಾಗಲಿದೆ. ಸ್ವಯಂ ನಿವೃತ್ತಿ ಪಡೆಯದ 214 ಕಾರ್ಮಿಕರಲ್ಲಿ 144 ಮಂದಿ ಈಗಾಗಲೇ ವಿವಿಧ ಇಲಾಖೆಯಲ್ಲಿ ನಿಯೋಜನೆ ಆಗಿದ್ದು, ಉಳಿದ 72 ಮಂದಿಗೆ ಅದೇ ರೀತಿ ವಿವಿಧ ಇಲಾಖೆ, ನಿಗಮ ಮಂಡಳಿಯಲ್ಲಿ ಖಾಲಿ ಇರುವ ಸ್ಥಳಗಳಿಗೆ ನಿಯೋಜನೆ ಮಾಡಿ ಸೇವಾ ಭದ್ರತೆ ಒದಗಿಸಬೇಕು’ ಎಂದು ಆಗ್ರಹಿಸಿದರು.