<p><strong>ಶಿವಮೊಗ್ಗ: </strong>ಖಾಸಗಿ ಶಾಲೆಗಳಿಗೆ ನೀಡಬೇಕಿರುವಆರ್ಟಿಇಶುಲ್ಕದ ಬಾಕಿಯನ್ನುಸರ್ಕಾರಶೀಘ್ರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್.ಸಿ.ಯೋಗೀಶ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರುಶುಕ್ರವಾರಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.</p>.<p>ಶಿಕ್ಷಣ ಹಕ್ಕು ಕಾಯ್ದೆಯ ಮೂಲಕಜಿಲ್ಲೆಯ ವಿವಿಧ ಖಾಸಗಿ ಶಾಲೆಗಳಲ್ಲಿ ಮಕ್ಕಳು ದಾಖಲಾತಿ ಪಡೆದಿದ್ದಾರೆ.ಸರ್ಕಾರವೇ ಈ ಶುಲ್ಕಪಾವತಿಸಬೇಕಿದೆ. 2018-19 ಹಾಗೂ2019-20ರಲ್ಲಿ ಜಿಲ್ಲೆಯ 269 ಶಾಲೆಗಳಿಗೆ 10,800 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 2018–19ರಲ್ಲಿ 4.35 ಲಕ್ಷ, 2019–20ನೇ ಸಾಲಿನಲ್ಲಿ ₨ 9.08ಕೋಟಿಬಾಕಿ ಇದೆ. ಈಗಾಗಲೇ ಶಾಲೆಗಳು ಮುಚ್ಚಿದ್ದರೂ ಶಿಕ್ಷಕರಿಗೆ, ಸಿಬ್ಬಂದಿಗೆ, ವಾಹನ ಚಾಲಕರಿಗೆ ವೇತನ ನೀಡಬೇಕಿದೆ.ಖಾಸಗಿ ಶಾಲೆಗಳು ಈಗ ಸಂಕಷ್ಟದಲ್ಲಿವೆ. ಹಾಗಾಗಿ,ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದುಆಗ್ರಹಿಸಿದರು.</p>.<p>ಕೇಂದ್ರ ಮತ್ತು ರಾಜ್ಯಸರ್ಕಾರಗಳುಲಾಕ್ಡೌನ್ಪರಿಸ್ಥಿತಿಯಲ್ಲಿ ಎಲ್ಲ ವರ್ಗಗಳಿಗೂ ನೆರವು ನೀಡುತ್ತಿವೆ.ವಿವಿಧ ಯೋಜನೆಗಳಮೂಲಕ ಹಣ ಬಿಡುಗಡೆ ಮಾಡಿವೆ. ಕೇಂದ್ರ ಸರ್ಕಾರ ₨ 20 ಲಕ್ಷ ಕೋಟಿ ನೆರವು ಘೋಷಿಸಿದೆ.ಆದರೆ, ಶಿಕ್ಷಣ ಕ್ಷೇತ್ರಕ್ಕೆಇದುವರೆಗೂ ಯಾವ ಪ್ಯಾಕೇಜ್ ಸಹಘೋಷಿಸಿಲ್ಲ. ನೆರವು ನೀಡುವುದಿರಲಿ,ಶಾಲೆಗಳಿಗೆ ಬರಬೇಕಾದ ಬಾಕಿ ಹಣವನ್ನಾದರೂಬಿಡುಗಡೆ ಮಾಡುವ ಮೂಲಕ ನೆರವಾಗಬೇಕು. ಇಲ್ಲದಿದ್ದರೆ ಪೋಷಕರಿಗೆ ಶುಲ್ಕಕಟ್ಟಿ ಎಂದು ಸಂದೇಶ ಕಳುಹಿಸುವಸನ್ನಿವೇಶ ನಿರ್ಮಾಣವಾಗಬಹುದು. ಇದರಿಂದ ಪೋಷಕರು ಆತಂಕಕ್ಕೆ ಒಳಗಾಗುತ್ತಾರೆ ಎಂದು ಎಚ್ಚರಿಸಿದರು.</p>.<p>ಕಾಂಗ್ರೆಸ್ ಮುಖಂಡರಾದ ರವಿಕುಮಾರ್, ದೇವೇಂದ್ರಪ್ಪ ಮತ್ತಿತರರು ಮನವಿ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ: </strong>ಖಾಸಗಿ ಶಾಲೆಗಳಿಗೆ ನೀಡಬೇಕಿರುವಆರ್ಟಿಇಶುಲ್ಕದ ಬಾಕಿಯನ್ನುಸರ್ಕಾರಶೀಘ್ರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್.ಸಿ.ಯೋಗೀಶ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರುಶುಕ್ರವಾರಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.</p>.<p>ಶಿಕ್ಷಣ ಹಕ್ಕು ಕಾಯ್ದೆಯ ಮೂಲಕಜಿಲ್ಲೆಯ ವಿವಿಧ ಖಾಸಗಿ ಶಾಲೆಗಳಲ್ಲಿ ಮಕ್ಕಳು ದಾಖಲಾತಿ ಪಡೆದಿದ್ದಾರೆ.ಸರ್ಕಾರವೇ ಈ ಶುಲ್ಕಪಾವತಿಸಬೇಕಿದೆ. 2018-19 ಹಾಗೂ2019-20ರಲ್ಲಿ ಜಿಲ್ಲೆಯ 269 ಶಾಲೆಗಳಿಗೆ 10,800 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 2018–19ರಲ್ಲಿ 4.35 ಲಕ್ಷ, 2019–20ನೇ ಸಾಲಿನಲ್ಲಿ ₨ 9.08ಕೋಟಿಬಾಕಿ ಇದೆ. ಈಗಾಗಲೇ ಶಾಲೆಗಳು ಮುಚ್ಚಿದ್ದರೂ ಶಿಕ್ಷಕರಿಗೆ, ಸಿಬ್ಬಂದಿಗೆ, ವಾಹನ ಚಾಲಕರಿಗೆ ವೇತನ ನೀಡಬೇಕಿದೆ.ಖಾಸಗಿ ಶಾಲೆಗಳು ಈಗ ಸಂಕಷ್ಟದಲ್ಲಿವೆ. ಹಾಗಾಗಿ,ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದುಆಗ್ರಹಿಸಿದರು.</p>.<p>ಕೇಂದ್ರ ಮತ್ತು ರಾಜ್ಯಸರ್ಕಾರಗಳುಲಾಕ್ಡೌನ್ಪರಿಸ್ಥಿತಿಯಲ್ಲಿ ಎಲ್ಲ ವರ್ಗಗಳಿಗೂ ನೆರವು ನೀಡುತ್ತಿವೆ.ವಿವಿಧ ಯೋಜನೆಗಳಮೂಲಕ ಹಣ ಬಿಡುಗಡೆ ಮಾಡಿವೆ. ಕೇಂದ್ರ ಸರ್ಕಾರ ₨ 20 ಲಕ್ಷ ಕೋಟಿ ನೆರವು ಘೋಷಿಸಿದೆ.ಆದರೆ, ಶಿಕ್ಷಣ ಕ್ಷೇತ್ರಕ್ಕೆಇದುವರೆಗೂ ಯಾವ ಪ್ಯಾಕೇಜ್ ಸಹಘೋಷಿಸಿಲ್ಲ. ನೆರವು ನೀಡುವುದಿರಲಿ,ಶಾಲೆಗಳಿಗೆ ಬರಬೇಕಾದ ಬಾಕಿ ಹಣವನ್ನಾದರೂಬಿಡುಗಡೆ ಮಾಡುವ ಮೂಲಕ ನೆರವಾಗಬೇಕು. ಇಲ್ಲದಿದ್ದರೆ ಪೋಷಕರಿಗೆ ಶುಲ್ಕಕಟ್ಟಿ ಎಂದು ಸಂದೇಶ ಕಳುಹಿಸುವಸನ್ನಿವೇಶ ನಿರ್ಮಾಣವಾಗಬಹುದು. ಇದರಿಂದ ಪೋಷಕರು ಆತಂಕಕ್ಕೆ ಒಳಗಾಗುತ್ತಾರೆ ಎಂದು ಎಚ್ಚರಿಸಿದರು.</p>.<p>ಕಾಂಗ್ರೆಸ್ ಮುಖಂಡರಾದ ರವಿಕುಮಾರ್, ದೇವೇಂದ್ರಪ್ಪ ಮತ್ತಿತರರು ಮನವಿ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>