<p><strong>ಸಾಗರ: </strong>ಇಲ್ಲಿನ ವಿಧಾನಸಭಾ ಕ್ಷೇತ್ರಕ್ಕೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಮೂಲಕ ಬಂದಿರುವ ಹಣವನ್ನು ಗ್ರಾಮೀಣ ರಸ್ತೆ ಹಾಗೂ ನಿರ್ಮಿತಿ ಕೇಂದ್ರದ ಮೂಲಕ ಕೈಗೊಳ್ಳುವ ಕಾಮಗಾರಿಗಳಿಗೆ ಬಳಸಲು ಒತ್ತು ನೀಡಲಾಗಿದೆ.</p>.<p>ಶಾಸಕರ ನಿಧಿಯಿಂದ ಇಲ್ಲಿನ ವಿಧಾನಸಭಾ ಕ್ಷೇತ್ರಕ್ಕೆ 2018-19, 2019-20ನೇ ಸಾಲಿನಲ್ಲಿ ತಲಾ ₹ 2 ಕೋಟಿ ಬಿಡುಗಡೆಯಾಗಿದ್ದು, ಅಷ್ಟೂ ಹಣವನ್ನು ಖರ್ಚು ಮಾಡಲಾಗಿದೆ. 2020-21ನೇ ಸಾಲಿನಲ್ಲಿ ₹ 2 ಕೋಟಿ ಪೈಕಿ 52.75 ಲಕ್ಷ ಖರ್ಚಾಗಿದ್ದು, ಉಳಿದ ಹಣಕ್ಕೆ ಕ್ರಿಯಾಯೋಜನೆ ಸಿದ್ಧವಾಗಿದೆ.</p>.<p>2018–19ನೇ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿ ಮೂಲಕ ಕ್ಷೇತ್ರದಲ್ಲಿ ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ₹ 74.40 ಲಕ್ಷ ಖರ್ಚು ಮಾಡಲಾಗಿದೆ. ನಿರ್ಮಿತಿ ಕೇಂದ್ರದ ಮೂಲಕ ₹ 1.17 ಕೋಟಿ ವೆಚ್ಚದಲ್ಲಿ ಅಡಿಕೆ ಸುಲಿಯುವ ಕೊಠಡಿ, ಪ್ರಯಾಣಿಕರ ತಂಗುದಾಣ, ಸಮುದಾಯ ಭವನ ನಿರ್ಮಿಸಲಾಗಿದೆ. ಹೈಮಾಸ್ಟ್ ದೀಪದ ಅಳವಡಿಕೆ, ಬೇದೂರು, ಪಡವಗೋಡು ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ಕ್ಲಾಸ್ ಆರಂಭಿಸಲಾಗಿದೆ. ತಾಲ್ಲೂಕು ಪಂಚಾಯಿತಿ ಮೂಲಕ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಲು ₹ 8.40 ಲಕ್ಷ ವ್ಯಯಿಸಲಾಗಿದೆ.</p>.<p>2019–20ರಲ್ಲಿ ಜಿಲ್ಲಾ ಪಂಚಾಯಿತಿ ಮೂಲಕ ಗ್ರಾಮೀಣ ರಸ್ತೆಗಾಗಿ ₹ 62.70 ಲಕ್ಷ ಖರ್ಚು ಮಾಡಲಾಗಿದೆ. ₹ 125.50 ಲಕ್ಷ ವೆಚ್ಚದಲ್ಲಿ ನಿರ್ಮಿತಿ ಕೇಂದ್ರದ ಮೂಲಕ ಸಾರ್ವಜನಿಕ ಸಮುದಾಯ ಭವನ, ಪ್ರಯಾಣಿಕರ ತಂಗುದಾಣ, ಅಡಿಕೆ ಸುಲಿಯುವ ಕೊಠಡಿಗಳನ್ನು ನಿರ್ಮಿಸಲಾಗಿದೆ. ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಲು, ಸ್ಮಾರ್ಟ್ಕ್ಲಾಸ್ಗಾಗಿ ₹ 11.80 ಲಕ್ಷ ವಿನಿಯೋಗಿಸಲಾಗಿದೆ.</p>.<p>2020-21ನೇ ಸಾಲಿನಲ್ಲಿ ಕೋವಿಡ್ ಕಾರಣ ₹ 2 ಕೋಟಿ ಅನುದಾನದ ಪೈಕಿ ಈವರೆಗೆ ₹ 52.75 ಲಕ್ಷ ಮಾತ್ರ ಖರ್ಚು ಮಾಡಲಾಗಿದೆ. ಉಳಿದ ಹಣಕ್ಕೆ ಕ್ರಿಯಾಯೋಜನೆ ಸಿದ್ಧವಾಗಿದೆ.</p>.<p>ಈ ಸಾಲಿನಲ್ಲಿ ನಗರದ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯ ಆಕ್ಸಿಜನ್ ಪ್ಲಾಂಟ್ಗೆ ಪೈಪ್ಲೈನ್ ಅಳವಡಿಸಲು ₹ 8 ಲಕ್ಷ, ಆಸ್ಪತ್ರೆಯ ಚಾವಣಿ ಕಾಮಗಾರಿಗೆ ₹ 11 ಲಕ್ಷ, ಆರೈಕೆ ಕೇಂದ್ರದ ನೆಲಹಾಸು ನಿರ್ಮಾಣಕ್ಕೆ ₹ 14 ಲಕ್ಷ ಸೇರಿ ಕೋವಿಡ್ ನಿರ್ವಹಣೆಗಾಗಿ ₹ 33 ಲಕ್ಷ ಖರ್ಚು ಮಾಡಲಾಗಿದೆ.</p>.<p>ಗ್ರಾಮೀಣ ರಸ್ತೆಗಾಗಿ ₹ 10 ಲಕ್ಷ ವಿನಿಯೋಗಿಸಲಾಗಿದೆ. ಕರೂರು–ಭಾರಂಗಿ ಹೋಬಳಿಯಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರಒದಗಿಸುವ ನಿಟ್ಟಿನಲ್ಲಿ ಆ ಭಾಗದ 17 ಸರ್ಕಾರಿ ಶಾಲೆಗಳಿಗೆ ಇಂಟರ್ ನೆಟ್ ಸೌಲಭ್ಯ ಕಲ್ಪಿಸಲು ₹ 9.75 ಲಕ್ಷ ಖರ್ಚು ಮಾಡಲಾಗುತ್ತಿದೆ.</p>.<p>***</p>.<p>ಶಾಸಕರ ನಿಧಿಯನ್ನು ರಸ್ತೆ ಮೊದಲಾದ ಕಾಮಗಾರಿಗಳಿಗಿಂತ ಶಾಲಾ–ಕಾಲೇಜುಗಳಿಗೆ ವಿನಿಯೋಗಿಸುವುದು ಸೂಕ್ತ ಎನಿಸುತ್ತಿದೆ. ಈ ಮೂಲಕ ಶಾಲಾ ಕಾಲೇಜುಗಳ ಅಭಿವೃದ್ಧಿ ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಿಗೆ ಪ್ರಾಮುಖ್ಯ ನೀಡಲಾಗುವುದು.</p>.<p><strong>ಎಚ್. ಹಾಲಪ್ಪ ಹರತಾಳು, ಶಾಸಕರು, ಸಾಗರ ವಿಧಾನಸಭಾ ಕ್ಷೇತ್ರ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ: </strong>ಇಲ್ಲಿನ ವಿಧಾನಸಭಾ ಕ್ಷೇತ್ರಕ್ಕೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಮೂಲಕ ಬಂದಿರುವ ಹಣವನ್ನು ಗ್ರಾಮೀಣ ರಸ್ತೆ ಹಾಗೂ ನಿರ್ಮಿತಿ ಕೇಂದ್ರದ ಮೂಲಕ ಕೈಗೊಳ್ಳುವ ಕಾಮಗಾರಿಗಳಿಗೆ ಬಳಸಲು ಒತ್ತು ನೀಡಲಾಗಿದೆ.</p>.<p>ಶಾಸಕರ ನಿಧಿಯಿಂದ ಇಲ್ಲಿನ ವಿಧಾನಸಭಾ ಕ್ಷೇತ್ರಕ್ಕೆ 2018-19, 2019-20ನೇ ಸಾಲಿನಲ್ಲಿ ತಲಾ ₹ 2 ಕೋಟಿ ಬಿಡುಗಡೆಯಾಗಿದ್ದು, ಅಷ್ಟೂ ಹಣವನ್ನು ಖರ್ಚು ಮಾಡಲಾಗಿದೆ. 2020-21ನೇ ಸಾಲಿನಲ್ಲಿ ₹ 2 ಕೋಟಿ ಪೈಕಿ 52.75 ಲಕ್ಷ ಖರ್ಚಾಗಿದ್ದು, ಉಳಿದ ಹಣಕ್ಕೆ ಕ್ರಿಯಾಯೋಜನೆ ಸಿದ್ಧವಾಗಿದೆ.</p>.<p>2018–19ನೇ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿ ಮೂಲಕ ಕ್ಷೇತ್ರದಲ್ಲಿ ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ₹ 74.40 ಲಕ್ಷ ಖರ್ಚು ಮಾಡಲಾಗಿದೆ. ನಿರ್ಮಿತಿ ಕೇಂದ್ರದ ಮೂಲಕ ₹ 1.17 ಕೋಟಿ ವೆಚ್ಚದಲ್ಲಿ ಅಡಿಕೆ ಸುಲಿಯುವ ಕೊಠಡಿ, ಪ್ರಯಾಣಿಕರ ತಂಗುದಾಣ, ಸಮುದಾಯ ಭವನ ನಿರ್ಮಿಸಲಾಗಿದೆ. ಹೈಮಾಸ್ಟ್ ದೀಪದ ಅಳವಡಿಕೆ, ಬೇದೂರು, ಪಡವಗೋಡು ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ಕ್ಲಾಸ್ ಆರಂಭಿಸಲಾಗಿದೆ. ತಾಲ್ಲೂಕು ಪಂಚಾಯಿತಿ ಮೂಲಕ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಲು ₹ 8.40 ಲಕ್ಷ ವ್ಯಯಿಸಲಾಗಿದೆ.</p>.<p>2019–20ರಲ್ಲಿ ಜಿಲ್ಲಾ ಪಂಚಾಯಿತಿ ಮೂಲಕ ಗ್ರಾಮೀಣ ರಸ್ತೆಗಾಗಿ ₹ 62.70 ಲಕ್ಷ ಖರ್ಚು ಮಾಡಲಾಗಿದೆ. ₹ 125.50 ಲಕ್ಷ ವೆಚ್ಚದಲ್ಲಿ ನಿರ್ಮಿತಿ ಕೇಂದ್ರದ ಮೂಲಕ ಸಾರ್ವಜನಿಕ ಸಮುದಾಯ ಭವನ, ಪ್ರಯಾಣಿಕರ ತಂಗುದಾಣ, ಅಡಿಕೆ ಸುಲಿಯುವ ಕೊಠಡಿಗಳನ್ನು ನಿರ್ಮಿಸಲಾಗಿದೆ. ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಲು, ಸ್ಮಾರ್ಟ್ಕ್ಲಾಸ್ಗಾಗಿ ₹ 11.80 ಲಕ್ಷ ವಿನಿಯೋಗಿಸಲಾಗಿದೆ.</p>.<p>2020-21ನೇ ಸಾಲಿನಲ್ಲಿ ಕೋವಿಡ್ ಕಾರಣ ₹ 2 ಕೋಟಿ ಅನುದಾನದ ಪೈಕಿ ಈವರೆಗೆ ₹ 52.75 ಲಕ್ಷ ಮಾತ್ರ ಖರ್ಚು ಮಾಡಲಾಗಿದೆ. ಉಳಿದ ಹಣಕ್ಕೆ ಕ್ರಿಯಾಯೋಜನೆ ಸಿದ್ಧವಾಗಿದೆ.</p>.<p>ಈ ಸಾಲಿನಲ್ಲಿ ನಗರದ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯ ಆಕ್ಸಿಜನ್ ಪ್ಲಾಂಟ್ಗೆ ಪೈಪ್ಲೈನ್ ಅಳವಡಿಸಲು ₹ 8 ಲಕ್ಷ, ಆಸ್ಪತ್ರೆಯ ಚಾವಣಿ ಕಾಮಗಾರಿಗೆ ₹ 11 ಲಕ್ಷ, ಆರೈಕೆ ಕೇಂದ್ರದ ನೆಲಹಾಸು ನಿರ್ಮಾಣಕ್ಕೆ ₹ 14 ಲಕ್ಷ ಸೇರಿ ಕೋವಿಡ್ ನಿರ್ವಹಣೆಗಾಗಿ ₹ 33 ಲಕ್ಷ ಖರ್ಚು ಮಾಡಲಾಗಿದೆ.</p>.<p>ಗ್ರಾಮೀಣ ರಸ್ತೆಗಾಗಿ ₹ 10 ಲಕ್ಷ ವಿನಿಯೋಗಿಸಲಾಗಿದೆ. ಕರೂರು–ಭಾರಂಗಿ ಹೋಬಳಿಯಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರಒದಗಿಸುವ ನಿಟ್ಟಿನಲ್ಲಿ ಆ ಭಾಗದ 17 ಸರ್ಕಾರಿ ಶಾಲೆಗಳಿಗೆ ಇಂಟರ್ ನೆಟ್ ಸೌಲಭ್ಯ ಕಲ್ಪಿಸಲು ₹ 9.75 ಲಕ್ಷ ಖರ್ಚು ಮಾಡಲಾಗುತ್ತಿದೆ.</p>.<p>***</p>.<p>ಶಾಸಕರ ನಿಧಿಯನ್ನು ರಸ್ತೆ ಮೊದಲಾದ ಕಾಮಗಾರಿಗಳಿಗಿಂತ ಶಾಲಾ–ಕಾಲೇಜುಗಳಿಗೆ ವಿನಿಯೋಗಿಸುವುದು ಸೂಕ್ತ ಎನಿಸುತ್ತಿದೆ. ಈ ಮೂಲಕ ಶಾಲಾ ಕಾಲೇಜುಗಳ ಅಭಿವೃದ್ಧಿ ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಿಗೆ ಪ್ರಾಮುಖ್ಯ ನೀಡಲಾಗುವುದು.</p>.<p><strong>ಎಚ್. ಹಾಲಪ್ಪ ಹರತಾಳು, ಶಾಸಕರು, ಸಾಗರ ವಿಧಾನಸಭಾ ಕ್ಷೇತ್ರ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>