<p><strong>ಸಾಗರ:</strong> ಸಮೀಪದ ಹೆಗ್ಗೋಡಿನ ನೀನಾಸಂ ಸಭಾಂಗಣದಲ್ಲಿ ಹೆಗ್ಗೋಡಿನ ಸತ್ಯಶೋಧನ ರಂಗ ಸಮುದಾಯ, ಜನಮನದಾಟ ತಂಡವು ಬಾನು ಮುಷ್ತಾಕ್ ಅವರ ಕತೆ ‘ಎದೆಯ ಹಣತೆ’, ಪೂರ್ಣ ತೇಜಸ್ವಿ ಅವರ ಕತೆ ‘ಮಾಯಾಮೃಗ’ ಆಧರಿಸಿದ ನಾಟಕ ಪ್ರದರ್ಶನವನ್ನು ಜುಲೈ 6ರಂದು ಸಂಜೆ 7ಕ್ಕೆ ಆಯೋಜಿಸಿದೆ.</p>.<p>ಎದೆಯ ಹಣತೆ ನಾಟಕವನ್ನು ಎಂ.ಗಣೇಶ್ ಹೆಗ್ಗೋಡು ನಿರ್ದೇಶಿಸಿದ್ದು, ಸಲ್ಮಾ ದಂಡಿನ್ ಅವರ ವಿನ್ಯಾಸವಿದೆ. ಮಾಯಾಮೃಗ ನಾಟಕವನ್ನು ರಂಜಿತ್ ಶೆಟ್ಟಿ ಕುಕ್ಕುಡೆ ನಿರ್ದೇಶಿಸಿದ್ದಾರೆ. ಎರಡೂ ನಾಟಕಗಳಿಗೆ ಭಾರ್ಗವ ಕೆ.ಎನ್. ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರೇಕ್ಷಕರಿಗೆ ಉಚಿತ ಪ್ರವೇಶವಿದೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ:</strong> ಸಮೀಪದ ಹೆಗ್ಗೋಡಿನ ನೀನಾಸಂ ಸಭಾಂಗಣದಲ್ಲಿ ಹೆಗ್ಗೋಡಿನ ಸತ್ಯಶೋಧನ ರಂಗ ಸಮುದಾಯ, ಜನಮನದಾಟ ತಂಡವು ಬಾನು ಮುಷ್ತಾಕ್ ಅವರ ಕತೆ ‘ಎದೆಯ ಹಣತೆ’, ಪೂರ್ಣ ತೇಜಸ್ವಿ ಅವರ ಕತೆ ‘ಮಾಯಾಮೃಗ’ ಆಧರಿಸಿದ ನಾಟಕ ಪ್ರದರ್ಶನವನ್ನು ಜುಲೈ 6ರಂದು ಸಂಜೆ 7ಕ್ಕೆ ಆಯೋಜಿಸಿದೆ.</p>.<p>ಎದೆಯ ಹಣತೆ ನಾಟಕವನ್ನು ಎಂ.ಗಣೇಶ್ ಹೆಗ್ಗೋಡು ನಿರ್ದೇಶಿಸಿದ್ದು, ಸಲ್ಮಾ ದಂಡಿನ್ ಅವರ ವಿನ್ಯಾಸವಿದೆ. ಮಾಯಾಮೃಗ ನಾಟಕವನ್ನು ರಂಜಿತ್ ಶೆಟ್ಟಿ ಕುಕ್ಕುಡೆ ನಿರ್ದೇಶಿಸಿದ್ದಾರೆ. ಎರಡೂ ನಾಟಕಗಳಿಗೆ ಭಾರ್ಗವ ಕೆ.ಎನ್. ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರೇಕ್ಷಕರಿಗೆ ಉಚಿತ ಪ್ರವೇಶವಿದೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>