52 ವರ್ಷದ ಸ್ವಾಮೀಜಿ ಕೋವಿಡ್ ರೋಗಿಯಾಗಿ ಇಲ್ಲಿನ ಮೆಗ್ಗಾನ್ ಅಸ್ಪತ್ರೆಗೆ ದಾಖಲಾದ ನಂತರ ಆಯುರ್ವೇದ ಚಿಕಿತ್ಸೆ ನೀಡುವಂತೆ ಪಟ್ಟು ಹಿಡಿದಿದ್ದರು. ಈ ಕುರಿತು ಅವರು ಪ್ರಧಾನಿ ನರೇಂದ್ರ ಮೋದಿಗೂ ಪತ್ರ ಬರೆದಿದ್ದರು. ಅವರ ಕೋರಿಕೆಯಂತೆ ಆಯುಷ್ ವೈದ್ಯರು ಜೀವರಕ್ಷಕ ಔಷಧ ನೀಡಿದ್ದರು.
‘ಆಯುರ್ವೆದ ಚಿಕಿತ್ಸೆಯ ಫಲವಾಗಿಯೇ ಕೊರೊನಾ ಸೋಂಕಿನಿಂದ ಬೇಗನೆ ಗುಣಮುಖನಾಗಿದ್ದೇನೆ’ ಎಂದು ಸ್ವಾಮೀಜಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.