ಜಾಮಿಯಾ ಮಸೀದಿ ಬಳಿಯ ರೂಪಶ್ರೀ ಬಂಗಾರದ ಅಂಗಡಿಗೆ ಬುಧವಾರ ಮಧ್ಯಾಹ್ನ ಇಬ್ಬರು ಮಹಿಳೆಯರು ಹಾಗೂ ಒಬ್ಬ ವ್ಯಕ್ತಿ ಬಂದಿದ್ದಾರೆ. ಮಹಿಳೆಯರು ಬುರ್ಕಾ ಧರಿಸಿದ್ದರು. ಈ ವೇಳೆ ಮೂವರು ಒಂದು ಉಂಗುರ ಹಾಗೂ ಎರಡು ಜೊತೆ ಓಲೆ ನೋಡಿದ್ದಾರೆ. ಈ ವೇಳೆ ಅಂಗಡಿ ಮಾಲೀಕ ದಿನೇಶಕುಮಾರ್ ಅವರ ಗಮನ ಬೇರೆಡೆ ಸೆಳೆದು ₹89 ಸಾವಿರ ಮೌಲ್ಯದ ಅಸಲಿ ಚಿನ್ನಾಭರಣ ದೋಚಿ ಅಲ್ಲಿ ನಕಲಿ ಆಭರಣ ಇಟ್ಟು ತೆರಳಿದ್ದಾರೆ. ಈ ಬಗ್ಗೆ ದಿನೇಶ್ಕುಮಾರ್ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.