<p><strong>ಶಿಕಾರಿಪುರ</strong>: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸರ್ವರ್ ಸಮಸ್ಯೆ ಕಾರಣಕ್ಕೆ ತಾಲ್ಲೂಕಿನಲ್ಲಿ ಪಡಿತರ ವಿತರಣೆ ವಿಳಂಭವಾಗುತ್ತಿದ್ದು, ಪಡಿತರ ಅಕ್ಕಿ ಪಡೆಯಲು ಜನಸಾಮಾನ್ಯರು ಸರತಿಯಲ್ಲಿ ಕಾಯುವ ಸ್ಥಿತಿ ನಿರ್ಮಾಣಗೊಂಡಿದೆ.</p>.<p>ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸರ್ವರ್ 15 ದಿನಗಳಿಂದ ಸ್ಲೋ ಆಗಿದೆ. ಪಟ್ಟಣದ ಪಡಿತರ ಅಂಗಡಿಯಲ್ಲಿ ಈ ಹಿಂದೆ ನಿತ್ಯ 200ಕ್ಕೂ ಹೆಚ್ಚು ಜನ ಅಕ್ಕಿ ಪಡೆಯುತ್ತಿದ್ದರೆ, ಇದೀಗ 50 ಜನಕ್ಕೆ ಮಾತ್ರ ಸಾಧ್ಯವಾಗುತ್ತಿದೆ. ಡಿಸೆಂಬರ್ ತಿಂಗಳ ಅಂತ್ಯಕ್ಕೆ ನಾಲ್ಕು ದಿನ ಬಾಕಿ ಇದ್ದು, ಎಲ್ಲರೂ ಪಡಿತರ ಪಡೆಯುವುದು ಅಸಾಧ್ಯ ಎನ್ನುವ ಸ್ಥಿತಿ ನಿರ್ಮಾಣಗೊಂಡಿದೆ.</p>.<p>ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸುತ್ತಿದ್ದ ವೆಬ್ಸೈಟ್ ಇದೀಗ ಸರ್ವರ್ ಸಮಸ್ಯೆ ಕಾರಣಕ್ಕೆ ಬೆಳಗ್ಗೆ 7 ರಿಂದ ರಾತ್ರಿ 10ರ ವರೆಗೆ ಸಮಯ ಬದಲಾವಣೆ ಮಾಡಲಾಗಿದೆ. ಬಯೋಮೆಟ್ರಿಕ್ ಮೂಲಕ ದಿನವೊಂದಕ್ಕೆ 50 ಜನರಿಗೆ ಅಕ್ಕಿ ನೀಡುವುದಕ್ಕೆ ಸಾಧ್ಯವಾದರೆ, ಐರಿಸ್ ಸ್ಕ್ಯಾನರ್ ಸಾಧನ ಬಳಸಿದರೆ 100 ಜನರಿಗೆ ಮಾತ್ರ ಪಡಿತರ ವಿತರಿಸಲು ಆಗುತ್ತಿದೆ.</p>.<p>ಪಡಿತರ ಪಡೆಯುವುದಕ್ಕೆ ಕೂಲಿ ಕೆಲಸ ಬಿಟ್ಟು ಸರತಿಯಲ್ಲಿ ನಿಲ್ಲುವಂತಾಗಿದೆ. ಕೂಲಿಯೂ ಇಲ್ಲ ಅಕ್ಕಿಯೂ ಸಿಗುತ್ತಿಲ್ಲ ಎಂದು ಶಿಲ್ಪಾ ಎಂಬುವರು ಅಳಲು ತೋಡಿಕೊಂಡರು.</p>.<div><blockquote>ರಾಜ್ಯಮಟ್ಟದ ಸಮಸ್ಯೆ ಇದಾಗಿದ್ದು ಸರಿಪಡಿಸುವ ಕೆಲಸ ನಿತ್ಯ ಆಗುತ್ತಿದೆ. ಸಮಸ್ಯೆ ಪರಿಹಾರಕ್ಕೆ ಸಮಯ ಬದಲಾವಣೆ ಮಾಡಿದ್ದು ಜನರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು. </blockquote><span class="attribution">- ಅವಿನ್ ಉಪನಿರ್ದೇಶಕರು ಆಹಾರ ಇಲಾಖೆ ಶಿವಮೊಗ್ಗ</span></div>.<div><blockquote>ನಿತ್ಯ ಮನೆ ಕೆಲಸಕ್ಕೆ ಹೋಗುತ್ತಿದ್ದು ಅರ್ಧದಿನದ ಕೂಲಿ ಬಿಟ್ಟು ಅಕ್ಕಿಗಾಗಿ ಕಾಯ್ದರೂ ಅಕ್ಕಿ ಸಿಗದೆ ವಾಪಸ್ ಆಗಿದ್ದು ರಾತ್ರಿ 9ಕ್ಕೆ ಅಕ್ಕಿ ಪಡೆದಿದ್ದೇನೆ. </blockquote><span class="attribution">ಭಾರತಿ ಚನ್ನಕೇಶವ ನಗರ ಶಿಕಾರಿಪುರ.</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಕಾರಿಪುರ</strong>: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸರ್ವರ್ ಸಮಸ್ಯೆ ಕಾರಣಕ್ಕೆ ತಾಲ್ಲೂಕಿನಲ್ಲಿ ಪಡಿತರ ವಿತರಣೆ ವಿಳಂಭವಾಗುತ್ತಿದ್ದು, ಪಡಿತರ ಅಕ್ಕಿ ಪಡೆಯಲು ಜನಸಾಮಾನ್ಯರು ಸರತಿಯಲ್ಲಿ ಕಾಯುವ ಸ್ಥಿತಿ ನಿರ್ಮಾಣಗೊಂಡಿದೆ.</p>.<p>ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸರ್ವರ್ 15 ದಿನಗಳಿಂದ ಸ್ಲೋ ಆಗಿದೆ. ಪಟ್ಟಣದ ಪಡಿತರ ಅಂಗಡಿಯಲ್ಲಿ ಈ ಹಿಂದೆ ನಿತ್ಯ 200ಕ್ಕೂ ಹೆಚ್ಚು ಜನ ಅಕ್ಕಿ ಪಡೆಯುತ್ತಿದ್ದರೆ, ಇದೀಗ 50 ಜನಕ್ಕೆ ಮಾತ್ರ ಸಾಧ್ಯವಾಗುತ್ತಿದೆ. ಡಿಸೆಂಬರ್ ತಿಂಗಳ ಅಂತ್ಯಕ್ಕೆ ನಾಲ್ಕು ದಿನ ಬಾಕಿ ಇದ್ದು, ಎಲ್ಲರೂ ಪಡಿತರ ಪಡೆಯುವುದು ಅಸಾಧ್ಯ ಎನ್ನುವ ಸ್ಥಿತಿ ನಿರ್ಮಾಣಗೊಂಡಿದೆ.</p>.<p>ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸುತ್ತಿದ್ದ ವೆಬ್ಸೈಟ್ ಇದೀಗ ಸರ್ವರ್ ಸಮಸ್ಯೆ ಕಾರಣಕ್ಕೆ ಬೆಳಗ್ಗೆ 7 ರಿಂದ ರಾತ್ರಿ 10ರ ವರೆಗೆ ಸಮಯ ಬದಲಾವಣೆ ಮಾಡಲಾಗಿದೆ. ಬಯೋಮೆಟ್ರಿಕ್ ಮೂಲಕ ದಿನವೊಂದಕ್ಕೆ 50 ಜನರಿಗೆ ಅಕ್ಕಿ ನೀಡುವುದಕ್ಕೆ ಸಾಧ್ಯವಾದರೆ, ಐರಿಸ್ ಸ್ಕ್ಯಾನರ್ ಸಾಧನ ಬಳಸಿದರೆ 100 ಜನರಿಗೆ ಮಾತ್ರ ಪಡಿತರ ವಿತರಿಸಲು ಆಗುತ್ತಿದೆ.</p>.<p>ಪಡಿತರ ಪಡೆಯುವುದಕ್ಕೆ ಕೂಲಿ ಕೆಲಸ ಬಿಟ್ಟು ಸರತಿಯಲ್ಲಿ ನಿಲ್ಲುವಂತಾಗಿದೆ. ಕೂಲಿಯೂ ಇಲ್ಲ ಅಕ್ಕಿಯೂ ಸಿಗುತ್ತಿಲ್ಲ ಎಂದು ಶಿಲ್ಪಾ ಎಂಬುವರು ಅಳಲು ತೋಡಿಕೊಂಡರು.</p>.<div><blockquote>ರಾಜ್ಯಮಟ್ಟದ ಸಮಸ್ಯೆ ಇದಾಗಿದ್ದು ಸರಿಪಡಿಸುವ ಕೆಲಸ ನಿತ್ಯ ಆಗುತ್ತಿದೆ. ಸಮಸ್ಯೆ ಪರಿಹಾರಕ್ಕೆ ಸಮಯ ಬದಲಾವಣೆ ಮಾಡಿದ್ದು ಜನರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು. </blockquote><span class="attribution">- ಅವಿನ್ ಉಪನಿರ್ದೇಶಕರು ಆಹಾರ ಇಲಾಖೆ ಶಿವಮೊಗ್ಗ</span></div>.<div><blockquote>ನಿತ್ಯ ಮನೆ ಕೆಲಸಕ್ಕೆ ಹೋಗುತ್ತಿದ್ದು ಅರ್ಧದಿನದ ಕೂಲಿ ಬಿಟ್ಟು ಅಕ್ಕಿಗಾಗಿ ಕಾಯ್ದರೂ ಅಕ್ಕಿ ಸಿಗದೆ ವಾಪಸ್ ಆಗಿದ್ದು ರಾತ್ರಿ 9ಕ್ಕೆ ಅಕ್ಕಿ ಪಡೆದಿದ್ದೇನೆ. </blockquote><span class="attribution">ಭಾರತಿ ಚನ್ನಕೇಶವ ನಗರ ಶಿಕಾರಿಪುರ.</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>