<p><strong>ಶಿವಮೊಗ್ಗ</strong>: ಅಡಿಕೆ ಬೆಳೆ ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿ ಸ್ಥಾಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ನೇಮಕ ಮಾಡಿದ್ದ ಪ್ರೊ.ಡಿ.ಎಲ್.ಮಹೇಶ್ವರ್ ನೇತೃತ್ವದ ಸಮಿತಿ ಕೊಟ್ಟಿದ್ದ ವರದಿಯ ಕಡತ ಕಳೆದೊಂದು ದಶಕದಿಂದ ದೂಳು ಹಿಡಿಯುತ್ತಿದೆ. ಈ ಬಾರಿಯ ಬಜೆಟ್ನಲ್ಲಿ ಅದಕ್ಕೆ ಮತ್ತೆ ಜೀವ ಸಿಗುವುದೇ ಎಂಬ ನಿರೀಕ್ಷೆ ಜಿಲ್ಲೆಯ ಅಡಿಕೆ ಬೆಳೆಗಾರರಲ್ಲಿ ಗರಿಗೆದರಿದೆ.</p>.<p>ತೆಂಗು, ಟೀ, ಕಾಫಿ, ರಬ್ಬರ್, ರೇಷ್ಮೆ, ಸಾಂಬಾರ್ ರೀತಿ ಅಡಿಕೆಗೂ ಪ್ರತ್ಯೇಕ ಮಂಡಳಿ ರಚನೆ ಆಗಬೇಕು ಎಂಬ ಬೆಳೆಗಾರರ ಒತ್ತಾಯಕ್ಕೆ ಮಣಿದಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2016ರ ಜೂನ್ 10ರಂದು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಅಂದಿನ ಕುಲಪತಿ ಪ್ರೊ.ಡಿ.ಎಲ್.ಮಹೇಶ್ವರ್ ನೇತೃತ್ವದಲ್ಲಿ 14 ಜನರ ಸಮಿತಿ ರಚಿಸಿತ್ತು. ತುರ್ತಾಗಿ ವರದಿ ನೀಡಬೇಕು ಎಂಬ ಸರ್ಕಾರದ ಸೂಚನೆಯ ಹಿನ್ನೆಲೆಯಲ್ಲಿ ಸಮಿತಿ ಕಾರ್ಯೋನ್ಮುಖವಾಗಿತ್ತು. ರಾಜ್ಯದ ವಿವಿಧೆಡೆ ಎಂಟು ಸಭೆಗಳನ್ನು ನಡೆಸಿ ಅದೇ ವರ್ಷದ ಆಗಸ್ಟ್ 27ರಂದು ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿತ್ತು.</p>.<p>‘ಸಮಿತಿ ರಚನೆ ಮಾಡುವಾಗ ಇದ್ದ ಸರ್ಕಾರದ ತರಾತುರಿ ವರದಿ ಸಲ್ಲಿಕೆ ಆದ ನಂತರ ಇರಲಿಲ್ಲ. ಹೀಗಾಗಿ ಅದು ಅನುಷ್ಠಾನಕ್ಕೆ ಬರಲಿಲ್ಲ. ವರದಿ ಆಗಿನಿಂದಲೂ ದೂಳು ಹಿಡಿಯುತ್ತಿದೆ. ಕಾಕತಾಳೀಯವೆಂಬಂತೆ ಸಿದ್ದರಾಮಯ್ಯ ಅವರೇ ಈಗ ಮುಖ್ಯಮಂತ್ರಿ ಆಗಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ವರದಿಗೆ ಸ್ಪಂದನೆ ದೊರೆಯಬಹುದು’ ಎಂದು ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎ.ರಮೇಶ ಹೆಗ್ಡೆ ಆಶಾಭಾವ ವ್ಯಕ್ತಪಡಿಸುತ್ತಾರೆ.</p>.<p><strong>ಐದು ದಶಕಗಳ ಹಿಂದಿನ ಕೂಗು</strong></p>.<p>‘ಅಡಿಕೆಗೆ ಪ್ರತ್ಯೇಕ ಮಂಡಳಿಯ ಕೂಗು ಈಗಿನದ್ದಲ್ಲ. ಅದು 50 ವರ್ಷಗಳಷ್ಟು ಹಳೆಯದು ಎಂದು ಹೇಳುವ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಡಿ.ಎಲ್.ಮಹೇಶ್ವರ್, ಮಂಡಳಿ ರಚನೆಯ ಉದ್ದೇಶದಿಂದ ಅಧ್ಯಯನಕ್ಕಾಗಿ 1973ರಿಂದ 2014ರ ವರೆಗೆ ಸರ್ಕಾರ ಎಂಟು ಸಮಿತಿಗಳನ್ನು ನೇಮಕ ಮಾಡಿದೆ. ನಮ್ಮದು 9ನೇ ಸಮಿತಿ’ ಎನ್ನುತ್ತಾರೆ.</p>.<p><strong>ವರದಿಯಲ್ಲಿ ಏನಿದೆ?</strong></p>.<p>‘ರಾಜ್ಯದಲ್ಲಿ ಅಡಿಕೆಯ ಉತ್ಪಾದಕತೆ, ವೆಚ್ಚ, ಬೆಲೆಯ ಏರಿಳಿತ, ರೋಗ–ರುಜಿನಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ಅಡಿಕೆಯ ಭವಿಷ್ಯದ ಹಾದಿಯಲ್ಲಿ ಮಂಡಳಿಯ ಅಗತ್ಯತೆಯನ್ನು ಒತ್ತಿ ಹೇಳಲಾಗಿತ್ತು. ಕಾಫಿ, ಟೀ ಸೇರಿದಂತೆ ಈಗಾಗಲೇ ಅಸ್ತಿತ್ವದಲ್ಲಿರುವ ಬೇರೆ ಬೇರೆ ಮಂಡಳಿಗಳ ಕಾರ್ಯವ್ಯಾಪ್ತಿಯಲ್ಲಿ ಆಗಿರುವ ಆಡಳಿತ ಸುಧಾರಣೆ, ಬದಲಾವಣೆಗಳು ಏನೇನು? ಈಗ ಅಸ್ತಿತ್ವದಲ್ಲಿರುವ ಅಡಿಕೆಗೆ ಸಂಬಂಧಿಸಿದ ಸಂಘ–ಸಂಸ್ಥೆಗಳ ನಡುವೆ ಮಂಡಳಿ ಹೇಗೆ ವಿಶೇಷವಾಗಿರಬೇಕು?, ಬೆಳೆಗಾರರಿಗೆ ಯಾವ ರೀತಿ ಅನುಕೂಲ ಮಾಡಿಕೊಡಬೇಕು ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು’ ಎಂದು ಪ್ರೊ.ಡಿ.ಎಲ್.ಮಹೇಶ್ವರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<p><strong>ಪ್ರತ್ಯೇಕ ಮಂಡಳಿ, ಕೇಂದ್ರದ ಮೌನ..</strong> </p>.<p>ಅಡಿಕೆ ಬೆಳೆಯುವ ಜಿಲ್ಲೆಗಳ ಪ್ರತಿನಿಧಿಗಳಿಂದ ಬಂದ ಬೇಡಿಕೆ ಹಿನ್ನೆಲೆಯಲ್ಲಿ ಅಡಿಕೆಗೆ ಪ್ರತ್ಯೇಕ ಮಂಡಳಿ ಸ್ಥಾಪಿಸುವಂತೆ 2019 ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಲು ರಾಷ್ಟ್ರಮಟ್ಟದಲ್ಲಿ ಅಡಿಕೆ ಅಭಿವೃದ್ಧಿ ಮಂಡಳಿ ರಚಿಸುವಂತೆ ಕೋರಿದ್ದರು.</p>.<p>‘ಕೇಂದ್ರ ಯಾವುದೇ ಕ್ರಮ ಕೈಗೊಳ್ಳದೇ ಮೌನ ವಹಿಸಿದೆ. ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರ ರಾಜ್ಯಪಟ್ಟಿಗೆ ಬರುತ್ತದೆ. ಹೀಗಾಗಿ ಅಡಿಕೆ ಅಭಿವೃದ್ಧಿ ಮಂಡಳಿ ರಚನೆಗೆ ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ಬೆಳೆಗಾರರ ಬೇಡಿಕೆಗೆ ಈ ಬಾರಿಯ ಬಜೆಟ್ನಲ್ಲಿ ಮನ್ನಣೆ ಸಿಗಲಿ’ ಎಂದು ರಮೇಶ ಹೆಗ್ಡೆ ಆಗ್ರಹಿಸುತ್ತಾರೆ.</p>.<p>ಮಂಡಳಿ ಸ್ಥಾಪನೆಗೆ ಸಂಬಂಧಿಸಿದಂತೆ ಪ್ರೊ.ಡಿ.ಎಲ್.ಮಹೇಶ್ವರ್ ಅವರ ವರದಿ ಅನುಷ್ಠಾನ ಮಾಡುವ ಜೊತೆಗೆ ಅಡಿಕೆ ಬೆಳೆ ಹಾಗೂ ಮಾರುಕಟ್ಟೆ ಎದುರಿಸುತ್ತಿರುವ ಸಮಸ್ಯೆಗಳಿಗೂ ಶಾಶ್ವತ ಪರಿಹಾರಕ್ಕೆ ಈ ಬಾರಿಯ ಬಜೆಟ್ನಲ್ಲಿ ಸರ್ಕಾರ ಸೂಕ್ತ ಅನುದಾನ ಮೀಸಲಿಡಲಿ</p><p><strong>–ಬಿ.ಎ.ರಮೇಶ ಹೆಗ್ಡೆ ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ</strong></p><p>––––</p>.<p>ಅಡಿಕೆ ಭವಿಷ್ಯದ ದೃಷ್ಟಿಯಿಂದ ಮಂಡಳಿ ರಚನೆ ವಿಚಾರದಲ್ಲಿ ನಾವು ಕೊಟ್ಟಿರುವ ವರದಿಯ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿಲ್ಲ. ವರದಿಗೆ ಬಜೆಟ್ನಲ್ಲಿ ಸ್ಪಂದನೆ ದೊರೆತರೆ ಅದು ಸ್ವಾಗತಾರ್ಹ</p><p><strong>–ಪ್ರೊ.ಡಿ.ಎಲ್.ಮಹೇಶ್ವರ್ ಅಡಿಕೆ ಮಂಡಳಿ ರಚನೆ ಅಧ್ಯಯನ ಸಮಿತಿ ಮುಖ್ಯಸ್ಥ</strong></p><p>––––</p>.<p><strong>ಪ್ರತ್ಯೇಕ ಮಂಡಳಿಯ ಅಗತ್ಯವೇನು?</strong></p><p>ದೇಶದ ಅಡಿಕೆ ಉತ್ಪಾದನೆಯ ಶೇ 70 ರಷ್ಟು ಪಾಲನ್ನು ಕರ್ನಾಟಕ ಹೊಂದಿದೆ. ಆದರೆ ಎಲೆಚುಕ್ಕಿ ರೋಗ ಕೊಳೆ ರೋಗ ತಂದಿಟ್ಟಿರುವ ಸಂಕಷ್ಟ ಬೆಲೆ ಏರಿಳಿತ ಹಾಗೂ ಕ್ಯಾನ್ಸರ್ಕಾರಕ ನೆಪದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಡಿಕೆ ಬೆಳೆ ನಿಷೇಧದ ತೂಗುಗತ್ತಿ ಬೆಳೆಗಾರರನ್ನು ಆತಂಕಕ್ಕೆ ದೂಡಿದೆ. ಈ ಹೊತ್ತಿನಲ್ಲಿ ಅಡಿಕೆಯ ಪರವಾಗಿ ದನಿ ಎತ್ತಲು ರೋಗ ನಿರ್ವಹಣೆಗೆ ಸರ್ಕಾರದ ನೆರವು ಕೋರಲು ಸರ್ಕಾರಿ ಸಂಸ್ಥೆಗಳನ್ನು ಸಹಭಾಗಿಯಾಗಿಸಿಕೊಳ್ಳಲು ಬೆಲೆಯ ಏರಿಳಿತ ನಿಭಾಯಿಸಿ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಪಾಡಿಕೊಂಡು ಬೆಳೆಗಾರರ ಹಿತ ಕಾಯಲು ಶಾಸನಬದ್ಧ ಸಂಸ್ಥೆಯೊಂದು ಮಂಡಳಿಯ ರೂಪದಲ್ಲಿ ಬೇಕಿದೆ ಎಂದು ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎ.ರಮೇಶ ಹೆಗ್ಡೆ ಒತ್ತಾಯಿಸುತ್ತಾರೆ. ಈಗ ಅಡಿಕೆಗೆ ಸಂಬಂಧಿಸಿದಂತೆ ಖಾಸಗಿ ಸಂಘ–ಸಂಸ್ಥೆಗಳು ರಾಜ್ಯದಲ್ಲಿ ಅಸ್ತಿತ್ವದಲ್ಲಿವೆ. ಅದರಲ್ಲಿ ಬಹುತೇಕರು ಸ್ವಯಂ ಘೋಷಿತವಾಗಿ ಅಡಿಕೆ ಬೆಳೆಗಾರರ ಸಂರಕ್ಷಕರು ಎಂಬಂತೆ ವರ್ತಿಸುತ್ತಾರೆ. ಶಾಸನಬದ್ಧ ಬೆಳೆಗಾರರ ಸಂಸ್ಥೆ ರಚನೆ ಆದರೆ ಅವರ ಅಸ್ತಿತ್ವಕ್ಕೆ ತೊಂದರೆ ಬರುತ್ತದೆ ಎಂಬ ಕಾರಣಕ್ಕೆ ಇವರಲ್ಲಿ ಹಲವರು ಪ್ರತ್ಯೇಕ ಮಂಡಳಿಯ ರಚನೆಗೆ ವಿರೋಧ ಮಾಡುತ್ತಾರೆ. ಸರ್ಕಾರ ಆ ಲಾಬಿಗೆ ಮಣಿಯದೇ ಮಂಡಳಿ ರಚನೆ ಮಾಡಲಿ ಎಂದು ಹೆಗ್ಡೆ ಆಗ್ರಹಿಸುತ್ತಾರೆ. </p>.<p><strong>ಪ್ರತ್ಯೇಕ ಮಂಡಳಿಯ ಅಗತ್ಯತೆ; ಚರ್ಚೆಯಾಗಲಿ..</strong></p><p>ಟೀ ಕಾಫಿ ರಬ್ಬರ್ ಸೇರಿದಂತೆ ಬೇರೆ ಬೇರೆ ಬೆಳೆಗೆ ಮಂಡಳಿಗಳು ಇವೆ. ಆ ಮಂಡಳಿಗಳಿಂದ ಬೆಳೆಗಾರರಿಗೆ ಏನು ಉಪಯೋಗ ಆಗುತ್ತಿದೆ ಎಂಬುದರ ಬಗ್ಗೆ ಚರ್ಚೆಯಾಗಲಿ ಎಂದು ರಾಜ್ಯ ಅಡಿಕೆ ಬೆಳೆಗಾರರ ಮಹಾಮಂಡಲದ ಅಧ್ಯಕ್ಷರೂ ಆದ ಶಾಸಕ ಆರಗ ಜ್ಞಾನೇಂದ್ರ ಒತ್ತಾಯಿಸುತ್ತಾರೆ. ಕಾಫಿಗೆ ರಬ್ಬರ್ ಸಾಂಬಾರ ಪದಾರ್ಥಕ್ಕೆ ಮೊದಲಿನಿಂದಲೂ ಸಹಕಾರ ಸಂಸ್ಥೆಗಳು ಇಲ್ಲ. ಇಲ್ಲಿ ಕ್ಯಾಂಪ್ಕೋನಂತಹ ಬಹುರಾಜ್ಯದ ವ್ಯಾಪ್ತಿಯ ಸಹಕಾರ ಸಂಸ್ಥೆ ಇದೆ. ಪ್ರಜಾಪ್ರಭುತ್ವದ ನೆಲೆಯಲ್ಲೇ ಅದು ರಚನೆಗೊಂಡಿದೆ. ಇಂತಹ ಸಹಕಾರಿ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಅಡಿಕೆ ನಿರ್ವಹಣೆ ಮಾಡಿ ರೈತರ ರಕ್ಷಣೆ ಮಾಡಿವೆ. ರೈತರ ಹಿತ ಎತ್ತಿ ಹಿಡಿದಿವೆ. ಆದರೆ ಮಂಡಳಿ ಮಾಡಿದರೆ ಅದು ಇನ್ನೊಂದು ಸರ್ಕಾರಿ ಸಂಸ್ಥೆ ಆಗಲಿದೆ ಅಷ್ಟೇ ಎನ್ನುತ್ತಾರೆ. ‘ಆದರೆ ಬೇರೆ ಬೆಳೆಗಳಿಗೆ ಇಂತಹ ಸಂಘ ಸಂಸ್ಥೆಗಳ ಬಲ ಇಲ್ಲ. ಹಾಗಾಗಿ ಮಂಡಳಿ ರಚನೆ ಆಗಿವೆ. ಅವು ನಿಷ್ಕ್ರಿಯಗೊಂಡಿವೆ. ರಬ್ಬರ್ಗೆ ಕೆ.ಜಿ ₹230 ಇದ್ದದ್ದು ₹130ಕ್ಕೆ ಕುಸಿದಿದೆ. ಬೆಳೆಗಾರರಿಗೆ ಯಾರು ರಕ್ಷಣೆ ಕೊಟ್ಟಿದ್ದಾರೆ. ಮಂಡಳಿ ಏನೂ ಮಾಡಿಲ್ಲ. ಅಡಿಕೆಗೆ ಪ್ರತ್ಯೇಕ ಮಂಡಳಿ ಬೇಡ ಎಂದು ನಾನು ಹೇಳುತ್ತಿಲ್ಲ. ನಾನು ಅದರ ವಿರೋಧಿಯೂ ಅಲ್ಲ. ಆದರೆ ಅದರಿಂದ ಏನು ಆಗುತ್ತದೆ. ಅಡಿಕೆಗೆ ಹೇಗೆ ರಕ್ಷಣೆ ಸಿಗುತ್ತದೆ ಎಂಬುದರ ಬಗ್ಗೆ ಚರ್ಚೆ ಆಗಬೇಕು’ ಎಂದು ಆರಗ ಒತ್ತಾಯಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ಅಡಿಕೆ ಬೆಳೆ ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿ ಸ್ಥಾಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ನೇಮಕ ಮಾಡಿದ್ದ ಪ್ರೊ.ಡಿ.ಎಲ್.ಮಹೇಶ್ವರ್ ನೇತೃತ್ವದ ಸಮಿತಿ ಕೊಟ್ಟಿದ್ದ ವರದಿಯ ಕಡತ ಕಳೆದೊಂದು ದಶಕದಿಂದ ದೂಳು ಹಿಡಿಯುತ್ತಿದೆ. ಈ ಬಾರಿಯ ಬಜೆಟ್ನಲ್ಲಿ ಅದಕ್ಕೆ ಮತ್ತೆ ಜೀವ ಸಿಗುವುದೇ ಎಂಬ ನಿರೀಕ್ಷೆ ಜಿಲ್ಲೆಯ ಅಡಿಕೆ ಬೆಳೆಗಾರರಲ್ಲಿ ಗರಿಗೆದರಿದೆ.</p>.<p>ತೆಂಗು, ಟೀ, ಕಾಫಿ, ರಬ್ಬರ್, ರೇಷ್ಮೆ, ಸಾಂಬಾರ್ ರೀತಿ ಅಡಿಕೆಗೂ ಪ್ರತ್ಯೇಕ ಮಂಡಳಿ ರಚನೆ ಆಗಬೇಕು ಎಂಬ ಬೆಳೆಗಾರರ ಒತ್ತಾಯಕ್ಕೆ ಮಣಿದಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2016ರ ಜೂನ್ 10ರಂದು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಅಂದಿನ ಕುಲಪತಿ ಪ್ರೊ.ಡಿ.ಎಲ್.ಮಹೇಶ್ವರ್ ನೇತೃತ್ವದಲ್ಲಿ 14 ಜನರ ಸಮಿತಿ ರಚಿಸಿತ್ತು. ತುರ್ತಾಗಿ ವರದಿ ನೀಡಬೇಕು ಎಂಬ ಸರ್ಕಾರದ ಸೂಚನೆಯ ಹಿನ್ನೆಲೆಯಲ್ಲಿ ಸಮಿತಿ ಕಾರ್ಯೋನ್ಮುಖವಾಗಿತ್ತು. ರಾಜ್ಯದ ವಿವಿಧೆಡೆ ಎಂಟು ಸಭೆಗಳನ್ನು ನಡೆಸಿ ಅದೇ ವರ್ಷದ ಆಗಸ್ಟ್ 27ರಂದು ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿತ್ತು.</p>.<p>‘ಸಮಿತಿ ರಚನೆ ಮಾಡುವಾಗ ಇದ್ದ ಸರ್ಕಾರದ ತರಾತುರಿ ವರದಿ ಸಲ್ಲಿಕೆ ಆದ ನಂತರ ಇರಲಿಲ್ಲ. ಹೀಗಾಗಿ ಅದು ಅನುಷ್ಠಾನಕ್ಕೆ ಬರಲಿಲ್ಲ. ವರದಿ ಆಗಿನಿಂದಲೂ ದೂಳು ಹಿಡಿಯುತ್ತಿದೆ. ಕಾಕತಾಳೀಯವೆಂಬಂತೆ ಸಿದ್ದರಾಮಯ್ಯ ಅವರೇ ಈಗ ಮುಖ್ಯಮಂತ್ರಿ ಆಗಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ವರದಿಗೆ ಸ್ಪಂದನೆ ದೊರೆಯಬಹುದು’ ಎಂದು ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎ.ರಮೇಶ ಹೆಗ್ಡೆ ಆಶಾಭಾವ ವ್ಯಕ್ತಪಡಿಸುತ್ತಾರೆ.</p>.<p><strong>ಐದು ದಶಕಗಳ ಹಿಂದಿನ ಕೂಗು</strong></p>.<p>‘ಅಡಿಕೆಗೆ ಪ್ರತ್ಯೇಕ ಮಂಡಳಿಯ ಕೂಗು ಈಗಿನದ್ದಲ್ಲ. ಅದು 50 ವರ್ಷಗಳಷ್ಟು ಹಳೆಯದು ಎಂದು ಹೇಳುವ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಡಿ.ಎಲ್.ಮಹೇಶ್ವರ್, ಮಂಡಳಿ ರಚನೆಯ ಉದ್ದೇಶದಿಂದ ಅಧ್ಯಯನಕ್ಕಾಗಿ 1973ರಿಂದ 2014ರ ವರೆಗೆ ಸರ್ಕಾರ ಎಂಟು ಸಮಿತಿಗಳನ್ನು ನೇಮಕ ಮಾಡಿದೆ. ನಮ್ಮದು 9ನೇ ಸಮಿತಿ’ ಎನ್ನುತ್ತಾರೆ.</p>.<p><strong>ವರದಿಯಲ್ಲಿ ಏನಿದೆ?</strong></p>.<p>‘ರಾಜ್ಯದಲ್ಲಿ ಅಡಿಕೆಯ ಉತ್ಪಾದಕತೆ, ವೆಚ್ಚ, ಬೆಲೆಯ ಏರಿಳಿತ, ರೋಗ–ರುಜಿನಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ಅಡಿಕೆಯ ಭವಿಷ್ಯದ ಹಾದಿಯಲ್ಲಿ ಮಂಡಳಿಯ ಅಗತ್ಯತೆಯನ್ನು ಒತ್ತಿ ಹೇಳಲಾಗಿತ್ತು. ಕಾಫಿ, ಟೀ ಸೇರಿದಂತೆ ಈಗಾಗಲೇ ಅಸ್ತಿತ್ವದಲ್ಲಿರುವ ಬೇರೆ ಬೇರೆ ಮಂಡಳಿಗಳ ಕಾರ್ಯವ್ಯಾಪ್ತಿಯಲ್ಲಿ ಆಗಿರುವ ಆಡಳಿತ ಸುಧಾರಣೆ, ಬದಲಾವಣೆಗಳು ಏನೇನು? ಈಗ ಅಸ್ತಿತ್ವದಲ್ಲಿರುವ ಅಡಿಕೆಗೆ ಸಂಬಂಧಿಸಿದ ಸಂಘ–ಸಂಸ್ಥೆಗಳ ನಡುವೆ ಮಂಡಳಿ ಹೇಗೆ ವಿಶೇಷವಾಗಿರಬೇಕು?, ಬೆಳೆಗಾರರಿಗೆ ಯಾವ ರೀತಿ ಅನುಕೂಲ ಮಾಡಿಕೊಡಬೇಕು ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು’ ಎಂದು ಪ್ರೊ.ಡಿ.ಎಲ್.ಮಹೇಶ್ವರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<p><strong>ಪ್ರತ್ಯೇಕ ಮಂಡಳಿ, ಕೇಂದ್ರದ ಮೌನ..</strong> </p>.<p>ಅಡಿಕೆ ಬೆಳೆಯುವ ಜಿಲ್ಲೆಗಳ ಪ್ರತಿನಿಧಿಗಳಿಂದ ಬಂದ ಬೇಡಿಕೆ ಹಿನ್ನೆಲೆಯಲ್ಲಿ ಅಡಿಕೆಗೆ ಪ್ರತ್ಯೇಕ ಮಂಡಳಿ ಸ್ಥಾಪಿಸುವಂತೆ 2019 ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಲು ರಾಷ್ಟ್ರಮಟ್ಟದಲ್ಲಿ ಅಡಿಕೆ ಅಭಿವೃದ್ಧಿ ಮಂಡಳಿ ರಚಿಸುವಂತೆ ಕೋರಿದ್ದರು.</p>.<p>‘ಕೇಂದ್ರ ಯಾವುದೇ ಕ್ರಮ ಕೈಗೊಳ್ಳದೇ ಮೌನ ವಹಿಸಿದೆ. ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರ ರಾಜ್ಯಪಟ್ಟಿಗೆ ಬರುತ್ತದೆ. ಹೀಗಾಗಿ ಅಡಿಕೆ ಅಭಿವೃದ್ಧಿ ಮಂಡಳಿ ರಚನೆಗೆ ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ಬೆಳೆಗಾರರ ಬೇಡಿಕೆಗೆ ಈ ಬಾರಿಯ ಬಜೆಟ್ನಲ್ಲಿ ಮನ್ನಣೆ ಸಿಗಲಿ’ ಎಂದು ರಮೇಶ ಹೆಗ್ಡೆ ಆಗ್ರಹಿಸುತ್ತಾರೆ.</p>.<p>ಮಂಡಳಿ ಸ್ಥಾಪನೆಗೆ ಸಂಬಂಧಿಸಿದಂತೆ ಪ್ರೊ.ಡಿ.ಎಲ್.ಮಹೇಶ್ವರ್ ಅವರ ವರದಿ ಅನುಷ್ಠಾನ ಮಾಡುವ ಜೊತೆಗೆ ಅಡಿಕೆ ಬೆಳೆ ಹಾಗೂ ಮಾರುಕಟ್ಟೆ ಎದುರಿಸುತ್ತಿರುವ ಸಮಸ್ಯೆಗಳಿಗೂ ಶಾಶ್ವತ ಪರಿಹಾರಕ್ಕೆ ಈ ಬಾರಿಯ ಬಜೆಟ್ನಲ್ಲಿ ಸರ್ಕಾರ ಸೂಕ್ತ ಅನುದಾನ ಮೀಸಲಿಡಲಿ</p><p><strong>–ಬಿ.ಎ.ರಮೇಶ ಹೆಗ್ಡೆ ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ</strong></p><p>––––</p>.<p>ಅಡಿಕೆ ಭವಿಷ್ಯದ ದೃಷ್ಟಿಯಿಂದ ಮಂಡಳಿ ರಚನೆ ವಿಚಾರದಲ್ಲಿ ನಾವು ಕೊಟ್ಟಿರುವ ವರದಿಯ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿಲ್ಲ. ವರದಿಗೆ ಬಜೆಟ್ನಲ್ಲಿ ಸ್ಪಂದನೆ ದೊರೆತರೆ ಅದು ಸ್ವಾಗತಾರ್ಹ</p><p><strong>–ಪ್ರೊ.ಡಿ.ಎಲ್.ಮಹೇಶ್ವರ್ ಅಡಿಕೆ ಮಂಡಳಿ ರಚನೆ ಅಧ್ಯಯನ ಸಮಿತಿ ಮುಖ್ಯಸ್ಥ</strong></p><p>––––</p>.<p><strong>ಪ್ರತ್ಯೇಕ ಮಂಡಳಿಯ ಅಗತ್ಯವೇನು?</strong></p><p>ದೇಶದ ಅಡಿಕೆ ಉತ್ಪಾದನೆಯ ಶೇ 70 ರಷ್ಟು ಪಾಲನ್ನು ಕರ್ನಾಟಕ ಹೊಂದಿದೆ. ಆದರೆ ಎಲೆಚುಕ್ಕಿ ರೋಗ ಕೊಳೆ ರೋಗ ತಂದಿಟ್ಟಿರುವ ಸಂಕಷ್ಟ ಬೆಲೆ ಏರಿಳಿತ ಹಾಗೂ ಕ್ಯಾನ್ಸರ್ಕಾರಕ ನೆಪದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಡಿಕೆ ಬೆಳೆ ನಿಷೇಧದ ತೂಗುಗತ್ತಿ ಬೆಳೆಗಾರರನ್ನು ಆತಂಕಕ್ಕೆ ದೂಡಿದೆ. ಈ ಹೊತ್ತಿನಲ್ಲಿ ಅಡಿಕೆಯ ಪರವಾಗಿ ದನಿ ಎತ್ತಲು ರೋಗ ನಿರ್ವಹಣೆಗೆ ಸರ್ಕಾರದ ನೆರವು ಕೋರಲು ಸರ್ಕಾರಿ ಸಂಸ್ಥೆಗಳನ್ನು ಸಹಭಾಗಿಯಾಗಿಸಿಕೊಳ್ಳಲು ಬೆಲೆಯ ಏರಿಳಿತ ನಿಭಾಯಿಸಿ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಪಾಡಿಕೊಂಡು ಬೆಳೆಗಾರರ ಹಿತ ಕಾಯಲು ಶಾಸನಬದ್ಧ ಸಂಸ್ಥೆಯೊಂದು ಮಂಡಳಿಯ ರೂಪದಲ್ಲಿ ಬೇಕಿದೆ ಎಂದು ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎ.ರಮೇಶ ಹೆಗ್ಡೆ ಒತ್ತಾಯಿಸುತ್ತಾರೆ. ಈಗ ಅಡಿಕೆಗೆ ಸಂಬಂಧಿಸಿದಂತೆ ಖಾಸಗಿ ಸಂಘ–ಸಂಸ್ಥೆಗಳು ರಾಜ್ಯದಲ್ಲಿ ಅಸ್ತಿತ್ವದಲ್ಲಿವೆ. ಅದರಲ್ಲಿ ಬಹುತೇಕರು ಸ್ವಯಂ ಘೋಷಿತವಾಗಿ ಅಡಿಕೆ ಬೆಳೆಗಾರರ ಸಂರಕ್ಷಕರು ಎಂಬಂತೆ ವರ್ತಿಸುತ್ತಾರೆ. ಶಾಸನಬದ್ಧ ಬೆಳೆಗಾರರ ಸಂಸ್ಥೆ ರಚನೆ ಆದರೆ ಅವರ ಅಸ್ತಿತ್ವಕ್ಕೆ ತೊಂದರೆ ಬರುತ್ತದೆ ಎಂಬ ಕಾರಣಕ್ಕೆ ಇವರಲ್ಲಿ ಹಲವರು ಪ್ರತ್ಯೇಕ ಮಂಡಳಿಯ ರಚನೆಗೆ ವಿರೋಧ ಮಾಡುತ್ತಾರೆ. ಸರ್ಕಾರ ಆ ಲಾಬಿಗೆ ಮಣಿಯದೇ ಮಂಡಳಿ ರಚನೆ ಮಾಡಲಿ ಎಂದು ಹೆಗ್ಡೆ ಆಗ್ರಹಿಸುತ್ತಾರೆ. </p>.<p><strong>ಪ್ರತ್ಯೇಕ ಮಂಡಳಿಯ ಅಗತ್ಯತೆ; ಚರ್ಚೆಯಾಗಲಿ..</strong></p><p>ಟೀ ಕಾಫಿ ರಬ್ಬರ್ ಸೇರಿದಂತೆ ಬೇರೆ ಬೇರೆ ಬೆಳೆಗೆ ಮಂಡಳಿಗಳು ಇವೆ. ಆ ಮಂಡಳಿಗಳಿಂದ ಬೆಳೆಗಾರರಿಗೆ ಏನು ಉಪಯೋಗ ಆಗುತ್ತಿದೆ ಎಂಬುದರ ಬಗ್ಗೆ ಚರ್ಚೆಯಾಗಲಿ ಎಂದು ರಾಜ್ಯ ಅಡಿಕೆ ಬೆಳೆಗಾರರ ಮಹಾಮಂಡಲದ ಅಧ್ಯಕ್ಷರೂ ಆದ ಶಾಸಕ ಆರಗ ಜ್ಞಾನೇಂದ್ರ ಒತ್ತಾಯಿಸುತ್ತಾರೆ. ಕಾಫಿಗೆ ರಬ್ಬರ್ ಸಾಂಬಾರ ಪದಾರ್ಥಕ್ಕೆ ಮೊದಲಿನಿಂದಲೂ ಸಹಕಾರ ಸಂಸ್ಥೆಗಳು ಇಲ್ಲ. ಇಲ್ಲಿ ಕ್ಯಾಂಪ್ಕೋನಂತಹ ಬಹುರಾಜ್ಯದ ವ್ಯಾಪ್ತಿಯ ಸಹಕಾರ ಸಂಸ್ಥೆ ಇದೆ. ಪ್ರಜಾಪ್ರಭುತ್ವದ ನೆಲೆಯಲ್ಲೇ ಅದು ರಚನೆಗೊಂಡಿದೆ. ಇಂತಹ ಸಹಕಾರಿ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಅಡಿಕೆ ನಿರ್ವಹಣೆ ಮಾಡಿ ರೈತರ ರಕ್ಷಣೆ ಮಾಡಿವೆ. ರೈತರ ಹಿತ ಎತ್ತಿ ಹಿಡಿದಿವೆ. ಆದರೆ ಮಂಡಳಿ ಮಾಡಿದರೆ ಅದು ಇನ್ನೊಂದು ಸರ್ಕಾರಿ ಸಂಸ್ಥೆ ಆಗಲಿದೆ ಅಷ್ಟೇ ಎನ್ನುತ್ತಾರೆ. ‘ಆದರೆ ಬೇರೆ ಬೆಳೆಗಳಿಗೆ ಇಂತಹ ಸಂಘ ಸಂಸ್ಥೆಗಳ ಬಲ ಇಲ್ಲ. ಹಾಗಾಗಿ ಮಂಡಳಿ ರಚನೆ ಆಗಿವೆ. ಅವು ನಿಷ್ಕ್ರಿಯಗೊಂಡಿವೆ. ರಬ್ಬರ್ಗೆ ಕೆ.ಜಿ ₹230 ಇದ್ದದ್ದು ₹130ಕ್ಕೆ ಕುಸಿದಿದೆ. ಬೆಳೆಗಾರರಿಗೆ ಯಾರು ರಕ್ಷಣೆ ಕೊಟ್ಟಿದ್ದಾರೆ. ಮಂಡಳಿ ಏನೂ ಮಾಡಿಲ್ಲ. ಅಡಿಕೆಗೆ ಪ್ರತ್ಯೇಕ ಮಂಡಳಿ ಬೇಡ ಎಂದು ನಾನು ಹೇಳುತ್ತಿಲ್ಲ. ನಾನು ಅದರ ವಿರೋಧಿಯೂ ಅಲ್ಲ. ಆದರೆ ಅದರಿಂದ ಏನು ಆಗುತ್ತದೆ. ಅಡಿಕೆಗೆ ಹೇಗೆ ರಕ್ಷಣೆ ಸಿಗುತ್ತದೆ ಎಂಬುದರ ಬಗ್ಗೆ ಚರ್ಚೆ ಆಗಬೇಕು’ ಎಂದು ಆರಗ ಒತ್ತಾಯಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>