ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ಕುಮಾರ್ ಎಸ್. ಭೂಮರೆಡ್ಡಿ, ‘ಹಿಂದೂ ಜಾಗರಣ ವೇದಿಕೆ ಬಂದ್ ಕುರಿತು ನಮ್ಮ ಬಳಿ ಯಾವುದೇ ಅನುಮತಿ ಪಡೆದಿಲ್ಲ. ಪ್ರತಿಭಟನೆ ಮಾಡಲು ಸಂವಿದಾನ ಬದ್ಧ ಹಕ್ಕಿದೆ. ಪ್ರತಿಭಟನೆಯ ವೇಳೆ ಪ್ರಚೋದನಕಾರಿ ಭಾಷಣ, ಅಹಿತಕರ ಘಟನೆ, ಬಲವಂತವಾಗಿ ಬಂದ್ಗೆ ಒತ್ತಾಯಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಭಿತ್ತಿ ಪತ್ರದಲ್ಲಿ ನಮೂದಿಸಿರುವ ಅಂಶಗಳ ಕುರಿತು ವಿವರ ಪಡೆಯಲಾಗುವುದು. ಸಾರ್ವಜನಿಕರು ಪೊಲೀಸ್ ಇಲಾಖೆಯ ಜತೆಗೆ ಶಾಂತಿಯಿಂದ ಸಹಕರಿಸಿ’ ಎಂದರು.