<p><strong>ಶಿಕಾರಿಪುರ:</strong> ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ಗೆ ತೆರಳುವ ರಸ್ತೆ ಗುಂಡಿಮಯವಾಗಿದ್ದು, ಮಳೆಗಾಲದಲ್ಲಿ ಮುಂದೆ ಸಾಗುವುದು ಬಹಳ ಕಷ್ಟವಾಗಿದೆ. </p>.<p>ರಸ್ತೆಯ ಉದ್ದಕ್ಕೂ ದೊಡ್ಡ ಕಲ್ಲುಗಳನ್ನು ಇಟ್ಟುಕೊಂಡು ಅದರ ಮೇಲೆಯೇ ಕಾಲಿಟ್ಟು ವಿದ್ಯಾರ್ಥಿನಿಯರು ಕಾಲೇಜಿಗೆ ತೆರಳುತ್ತಿದ್ದಾರೆ. ವಿದ್ಯಾರ್ಥಿನಿಯರು ಹಲವು ಬಾರಿ ಕಾಲು ಜಾರಿ ಬಿದ್ದು ಶಾಲೆಗೆ ಹೋಗದಂತೆ ಆಗಿರುವ ಘಟನೆಯೂ ನಡೆದಿದೆ.</p>.<p>ಹಾಸ್ಟೆಲ್ ಪಕ್ಕದ ರಸ್ತೆಯಲ್ಲಿ ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಬಾಲಕಿಯರು ವಿದ್ಯಾರ್ಥಿನಿಯರ ಹಾಸ್ಟೆಲ್ ಇದ್ದು ಅಲ್ಲಿಯ ರಸ್ತೆಯೂ ನೀರಿನ ಗುಂಡಿಗಳಿಂದ ತುಂಬಿದೆ ಸ್ವಲ್ಪ ದೂರದಲ್ಲೇ ಡಾಂಬರ್ ರಸ್ತೆ ಇರುವುದರಿಂದ ಸ್ವಲ್ಪ ನಿರಾಳವಾಗಿದ್ದಾರೆ.</p>.<p>ಈ ಎರಡೂ ಹಾಸ್ಟೆಲ್ ಸುತ್ತಲೂ ಗಿಡಗಂಟಿ ತುಂಬಿದ್ದು ಸೊಳ್ಳೆ ಕಾಟ ಹೆಚ್ಚಾಗಿದೆ. ಕ್ರಿಮಿ–ಕೀಟಗಳು, ವಿಷಜಂತುಗಳು ಕಂಡು ಬರುತ್ತಿದ್ದು ಸುತ್ತಲಿನ ಪರಿಸರ ಸ್ವಚ್ಛಗೊಳಿಸಬೇಕು ಎನ್ನುವುದು ಇಲ್ಲಿನ ವಿದ್ಯಾರ್ಥಿಗಳು, ನಿವಾಸಿಗಳ ಆಗ್ರಹವಾಗಿದೆ.</p>.<p>-ಮಂಜುನಾಥ್, ಸ್ಥಳೀಯ ನಿವಾಸಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಕಾರಿಪುರ:</strong> ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ಗೆ ತೆರಳುವ ರಸ್ತೆ ಗುಂಡಿಮಯವಾಗಿದ್ದು, ಮಳೆಗಾಲದಲ್ಲಿ ಮುಂದೆ ಸಾಗುವುದು ಬಹಳ ಕಷ್ಟವಾಗಿದೆ. </p>.<p>ರಸ್ತೆಯ ಉದ್ದಕ್ಕೂ ದೊಡ್ಡ ಕಲ್ಲುಗಳನ್ನು ಇಟ್ಟುಕೊಂಡು ಅದರ ಮೇಲೆಯೇ ಕಾಲಿಟ್ಟು ವಿದ್ಯಾರ್ಥಿನಿಯರು ಕಾಲೇಜಿಗೆ ತೆರಳುತ್ತಿದ್ದಾರೆ. ವಿದ್ಯಾರ್ಥಿನಿಯರು ಹಲವು ಬಾರಿ ಕಾಲು ಜಾರಿ ಬಿದ್ದು ಶಾಲೆಗೆ ಹೋಗದಂತೆ ಆಗಿರುವ ಘಟನೆಯೂ ನಡೆದಿದೆ.</p>.<p>ಹಾಸ್ಟೆಲ್ ಪಕ್ಕದ ರಸ್ತೆಯಲ್ಲಿ ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಬಾಲಕಿಯರು ವಿದ್ಯಾರ್ಥಿನಿಯರ ಹಾಸ್ಟೆಲ್ ಇದ್ದು ಅಲ್ಲಿಯ ರಸ್ತೆಯೂ ನೀರಿನ ಗುಂಡಿಗಳಿಂದ ತುಂಬಿದೆ ಸ್ವಲ್ಪ ದೂರದಲ್ಲೇ ಡಾಂಬರ್ ರಸ್ತೆ ಇರುವುದರಿಂದ ಸ್ವಲ್ಪ ನಿರಾಳವಾಗಿದ್ದಾರೆ.</p>.<p>ಈ ಎರಡೂ ಹಾಸ್ಟೆಲ್ ಸುತ್ತಲೂ ಗಿಡಗಂಟಿ ತುಂಬಿದ್ದು ಸೊಳ್ಳೆ ಕಾಟ ಹೆಚ್ಚಾಗಿದೆ. ಕ್ರಿಮಿ–ಕೀಟಗಳು, ವಿಷಜಂತುಗಳು ಕಂಡು ಬರುತ್ತಿದ್ದು ಸುತ್ತಲಿನ ಪರಿಸರ ಸ್ವಚ್ಛಗೊಳಿಸಬೇಕು ಎನ್ನುವುದು ಇಲ್ಲಿನ ವಿದ್ಯಾರ್ಥಿಗಳು, ನಿವಾಸಿಗಳ ಆಗ್ರಹವಾಗಿದೆ.</p>.<p>-ಮಂಜುನಾಥ್, ಸ್ಥಳೀಯ ನಿವಾಸಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>