ಆಗ ಮೈಸೂರು ಶಾಸನ ಸಭೆಗೆ ಸಾಗರ–ಹೊಸನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಉಮೇದುವಾರ ಎ.ಆರ್. ಬದರೀನಾರಾಯಣ್ ಹಾಗೂ ಶಿವಮೊಗ್ಗ ಜಿಲ್ಲಾ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದ್ದ ಕೆ.ಜಿ.ಒಡೆಯರ್ ಪರವಾಗಿ ಮತ ಯಾಚಿಸಿ ಕರಪತ್ರ ಮುದ್ರಿಸಲಾಗಿದೆ. 1952ರ ಜನವರಿ 13ರಂದು ಮತದಾನ ಎಂದು ಉಲ್ಲೇಖಿಸಿರುವ ಕರಪತ್ರದಲ್ಲಿ ತೀರ್ಥಹಳ್ಳಿಯ ಪ್ರಭಾತ್ ಪ್ರಿಂಟಿಂಗ್ ಪ್ರೆಸ್ ಹೆಸರು ಉಲ್ಲೇಖಿಸಲಾಗಿದೆ.