ಶಂಕರಘಟ್ಟ: ಕಳೆದ ವರ್ಷ ಭಾರತದಲ್ಲಿ ಹೆಚ್ಚು ವಯಸ್ಕ ತಾಯಂದಿರ ಆತ್ಮಹತ್ಯೆ, ಉದ್ಯೋಗಸ್ಥ ಮಹಿಳೆಯರ ಮೇಲೆ ಕಿರುಕುಳ, ಅತ್ಯಾಚಾರ ಹಾಗೂ ಸ್ವಾತಂತ್ರೋತ್ತರ ಅತಿ ಕನಿಷ್ಠ ಲಿಂಗಾನುಪಾತ ದಾಖಲಾದ ಘಟನಾವಳಿಗಳು ಬೆಳಕಿಗೆ ಬಂದಿದ್ದು, ಭಾರತದಲ್ಲಿ ಸ್ತ್ರೀ ವಿರೋಧಿ ಅಭಿವೃದ್ಧಿ ಮಾದರಿ ಅಸ್ಥಿತ್ವದಲ್ಲಿದೆ ಎನ್ನಲು ಪುರಾವೆಗಳನ್ನು ಒದಗಿಸಿದೆ ಎಂದು ತಿರುಪತಿಯ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಕಿರಣ್ ಪ್ರಸಾದ್ ಆಭಿಪ್ರಾಯಪಟ್ಟರು.