ಶಿವಮೊಗ್ಗ: ರಿಪ್ಪನ್ಪೇಟೆ–ಕೋಣಂದೂರು ಮಾರ್ಗದ ಸುಣ್ಣದ ಬಸ್ತಿ ಬಳಿ ಗುರುವಾರ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಿಪ್ಪನ್ಪೇಟೆ ವಿನಾಯಕ ನಗರದ ರಾಘವೇಂದ್ರ ಭಟ್ (48), ಅವರ ಪುತ್ರ ಲೋಹಿತ್ (14), ಅತ್ತೆ ಅಂಬಿಕಾ (65) ಮೃತಪಟ್ಟವರು.
ಧರ್ಮಸ್ಥಳಕ್ಕೆ ಹೋಗಿ ವಾಪಸ್ ಬರುವಾಗ ಈ ಘಟನೆ ನಡೆದಿದೆ. ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಂತಿಗೆ ವಿದ್ಯುತ್ ಹರಿದು ಮೂವರಿಗೆ ತಗುಲಿದೆ. ಉಳಿದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.