ಸಾಗರ: ಅಕ್ರಮ ಗೋ ಸಾಗಣೆ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಭಾನುವಾರ ಬಿಜೆಪಿ ಯುವ ಮೋರ್ಚಾದಿಂದ ನಗರಠಾಣೆ ಪೊಲೀಸರಿಗೆ ಮನವಿ ಸಲ್ಲಿಸಲಾಯಿತು.
ಶನಿವಾರ ಮಧ್ಯರಾತ್ರಿ ನಗರದ ಮಾರಿಕಾಂಬಾ ವೃತ್ತದ ಸಮೀಪ ಕಪ್ಪುಬಣ್ಣದ ಮಹೀಂದ್ರ ಸ್ಕಾರ್ಪಿಯೋ ಕಾರಿನಲ್ಲಿ ಮೂವರು ರಸ್ತೆಯಲ್ಲಿ ಮಲಗಿದ್ದ ಗೋವನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಗೋವು ಕಳ್ಳಸಾಗಣೆ ಮಾಡುತ್ತಿರುವ ದೃಶ್ಯ ದಾಖಲಾಗಿದೆ.ಹಿಂದಿನಿಂದಲೂ ಪಟ್ಟಣ ವ್ಯಾಪ್ತಿಯಲ್ಲಿ ಗೋವು ಕಳ್ಳತನ ಮಾಡುತ್ತಿರುವ ಬಗ್ಗೆ ಯುವ ಮೋರ್ಚಾದಿಂದ ದೂರು ನೀಡಲಾಗಿತ್ತು. ಆದರೂ ಕ್ರಮ ಕೈಗೊಂಡಿಲ್ಲ ಎಂದು ಪದಾಧಿಕಾರಿಗಳು ದೂರಿದರು.
ತಕ್ಷಣ ಗೋ ಕಳ್ಳಸಾಗಾಣಿಕೆ ಮಾಡುತ್ತಿರುವವರನ್ನು ಬಂಧಿಸಿ, ಕಾನೂನು ಕ್ರಮಜರುಗಿಸಬೇಕು ಎಂದು ಒತ್ತಾಯಿಸಿದರು.
ಬಳಿಕ ಬಿಜೆಪಿ ಯುವ ಮೋರ್ಚಾ ದಿಂದ ದೂರು ದಾಖಲಿಸಲಾಯಿತು.ಯುವಮೋರ್ಚಾ ನಗರ ಅಧ್ಯಕ್ಷ ಅರುಣ ಕುಗ್ವೆ, ನಗರ ಅಧ್ಯಕ್ಷ ಶ್ರೀರಾಮ್, ಪ್ರಮುಖರಾದ ಪರಶುರಾಮ್, ವಿನಯ್ ಪೂಜಾರಿ, ರಾಘವೇಂದ್ರ, ವಿನೋದ್ ರಾಜ್ ಶೆಟ್ಟಿ, ಸಂತೋಷ್ ಕೆ.ಜಿ., ಪ್ರದೀಪ್, ವಿನೋದ್ ಇದ್ದರು.