ವಿವಿಧ ಸಂಪ್ರದಾಯಗಳು ಮತ್ತು ಆಚರಣೆಗಳು ಇರುವ ಈ ದೇಶದಲ್ಲಿ ಇಡೀ ದೇಶಕ್ಕಾಗಿ ಇರುವ ಏಕೈಕ ಗ್ರಂಥವೆಂದರೆ ಅದು ಸಂವಿಧಾನ. ವಿವಿಧ ಧರ್ಮಗಳಿಗೆ ಅವರವರ ಪವಿತ್ರ ಧರ್ಮಗ್ರಂಥಗಳಿರಬಹುದು. ಆದರೆ ಇಡೀ ದೇಶದ ಜನರ ಹಕ್ಕುಗಳನ್ನು ರಕ್ಷಿಸುವ ಏಕೈಕ ಗ್ರಂಥ ಸಂವಿಧಾನ ಎಂದರು.
ಸಂವಿಧಾನ ಇಲ್ಲದಿದ್ದಲ್ಲಿ ಹಿಂದುಳಿದ ವರ್ಗದವರು ಮತ್ತು ಕಡು ಬಡವರು ಉನ್ನತ ಸ್ಥಾನಕ್ಕೆ ಏರುತ್ತಿರಲಿಲ್ಲ. ಪರಿಶಿಷ್ಟ ಸಮುದಾಯದ ಮಹಿಳೆಯೊಬ್ಬರು ರಾಷ್ಟ್ರಪತಿಯಾಗಲು ಸಂವಿಧಾನವೇ ಕಾರಣ. ಸಾಮಾಜಿಕ ನ್ಯಾಯ, ಹೆಣ್ಣು-ಗಂಡು ಎಲ್ಲರೂ ಸಮಾನರು ಎಂಬುದು ಸಂವಿಧಾನದ ತತ್ವ ಎಂದು ಹೇಳಿದರು.