ದಾನಪತ್ರದ ಖಾತೆ ಬದಲಾವಣೆ ಮಾಡಿಕೊಡಲು ₹ 30 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು ಎಂದು ಕೆದಲಗುಡ್ಡೆ ನಿವಾಸಿ ಸೇಲ್ವಿ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ ಅನ್ವಯ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ರಾಘವೇಂದ್ರ ಹಾಗೂ ಸಹಾಯಕ ಅಣ್ಣಪ್ಪ ಅವರನ್ನು ಎಸಿಬಿ ಡಿವೈಎಸ್ಪಿ ಲೋಕೇಶ್ ತಂಡ ಬಂಧಿಸಿದೆ.