ಶುಕ್ರವಾರ ರಾತ್ರಿ 10 ಗಂಟೆಗೆ ತಾಲ್ಲೂಕಿನ ಕೆಳಕೆರೆ ಗ್ರಾಮದಲ್ಲಿ ಆನೆ ಕಾಣಿಸಿಕೊಂಡಿದೆ. ನಂತರ ಸುಮಾರು 5 ಕಿ.ಮೀ. ನಡೆದು ಪಟ್ಟಣದ ಕುರುವಳ್ಳಿ, ತುಂಗಾ ನದಿಯ ದಡದ ಮೇಲೆ ನಡೆದು ಹುಣಸವಳ್ಳಿ ಗ್ರಾಮದಲ್ಲಿ ವಿಶ್ರಾಂತಿ ಪಡೆದಿದೆ. ಯಾವುದೇ ಅನಾಹುತ ಸಂಭವಿಸಿಲ್ಲ. ಆನೆ ನೋಡಿದ ಭಯದಲ್ಲಿ ಚರಂಡಿಗೆ ಬಿದ್ದು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.