<p><strong>ತೀರ್ಥಹಳ್ಳಿ: </strong>ಮಳೆಯ ತವರು ದಕ್ಷಿಣ ಭಾರತದ ಚಿರಾಪುಂಜಿ ಖ್ಯಾತಿಯ ಆಗುಂಬೆಯಲ್ಲಿ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕ್ಷೀಣಿಸುತ್ತಿದೆ. ಆಗುಂಬೆಯ ಮಳೆ ತನ್ನ ಗತ ವೈಭವವನ್ನು ಕೇವಲ ದಾಖಲೆಗಳಲ್ಲಿ ಉಳಿಸಿಕೊಳ್ಳುವಂತಾಗಿದೆ.<br /> <br /> ‘ಮಳೆ ಎಂದರೆ ಆಗುಂಬೆ, ಆಗುಂಬೆ ಎಂದರೆ ಮಳೆ’ ಎಂಬಂತಿದ್ದ ಪಶ್ಚಿಮ ಘಟ್ಟ ಸಾಲಿನ ಆಗುಂಬೆಯಲ್ಲಿ ಧೋ ಎಂದು ಸುರಿಯಬೇಕಿದ್ದ ಮಳೆಯ ಪ್ರಮಾಣ ವರ್ಷಗಳು ಸರಿದಂತೆ ಕಡಿಮೆ ಯಾಗುತ್ತಿರುವುದು ಆತಂಕ ಸೃಷ್ಟಿಸಿದೆ.<br /> <br /> ಇಲ್ಲಿ ಮಳೆಯ ಪ್ರಮಾಣ ಕಡಿಮೆ ಯಾದರೂ ಹೊಸನಗರ ಭಾಗದ ಯಡೂರು, ಮಾಸ್ತಿಕಟ್ಟೆ, ಕೊಡಚಾದ್ರಿ ಭಾಗದಲ್ಲಿ ಹೆಚ್ಚಾಗಿರುವುದು ಮಳೆರಾಯನ ಚಿತ್ತ ಅತ್ತ ಹರಿದಿರುವುದನ್ನು ಖಾತರಿಪಡಿಸುತ್ತದೆ.<br /> <br /> ಆಗುಂಬೆಯಲ್ಲಿ ಬೀಳುವ ಮಳೆ ಪ್ರಮಾಣಕ್ಕಿಂತ ಹೆಚ್ಚಾಗಿ ಯಡೂರು, ಮಾಸ್ತಿಕಟ್ಟೆ, ಕೊಡಚಾದ್ರಿ ತಪ್ಪಲಿನಲ್ಲಿ ಬೀಳುತ್ತಿರುವುದು ಇತ್ತೀಚಿನ ಸಮೀಕ್ಷೆಗಳಿಂದ ವ್ಯಕ್ತವಾಗಿದೆ.<br /> <br /> ಹಿಂದೆ ಅರಣ್ಯ ಪ್ರದೇಶದ ವಿಸ್ತೀರ್ಣ ಹೆಚ್ಚಾಗಿತ್ತು. ಈಗ ಅರಣ್ಯವು ಮೇಲ್ನೋಟಕ್ಕೆ ಕಂಡುಬಂದರೂ ದಟ್ಟ ಅರಣ್ಯ (ಸಾಂದ್ರತೆ) ಪ್ರದೇಶದ ಪ್ರಮಾಣ ಕಡಿಮೆಯಾಗಿದೆ.<br /> <br /> ಬೃಹತ್ ಗಾತ್ರದ ಗಗನಚುಂಬಿ ಮರಗಳ ಸಂಖ್ಯೆ ಕ್ಷೀಣಿಸುತ್ತಿದೆ. ಬಗರ್ ಹುಕುಂ ಸಾಗುವಳಿ, ಪಾರಂಪರಿಕ ಅರಣ್ಯವಾಸಿ ಗರ ಅರಣ್ಯ ಮಾನ್ಯ ಹಕ್ಕು, ಒತ್ತುವರಿ ಮುಂತಾದ ಕಾರಣಗಳಿಂದ ಅರಣ್ಯದ ಪ್ರಮಾಣ ಕಡಿಮೆಯಾಗುತ್ತಿರುವುದೇ ಮಳೆ ಪ್ರಮಾಣ ತಗ್ಗಲು ಕಾರಣವಾಗಿದೆ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.<br /> <br /> ಆಗುಂಬೆಯಲ್ಲಿ ಜುಲೈ ಅಂತ್ಯಕ್ಕೆ 1,828 ಮಿ.ಮೀ. ಮಳೆ ಬಿದ್ದಿದ್ದು, 2,477 ಮಿ.ಮೀ. ವಾಡಿಕೆ ಮಳೆಯಾಗಿದೆ. ಶೇ 74ರಷ್ಟು ಮಳೆಯಾಗಿದ್ದು, ಶೇ 26ರಷ್ಟು ಕೊರತೆ ಇದು. ಮಳೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿತ ಕಾಣುತ್ತಿರುವುದರಿಂದಾಗಿ ಕೃಷಿ ಸೇರಿದಂತೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.</p>.<p>ಮಲೆನಾಡು ಭಾಗದಲ್ಲಿ ಬೀಳುತ್ತಿದ್ದ ಮಳೆ ನಿಧಾನಕ್ಕೆ ಬಯಲು ಪ್ರದೇಶಗಳತ್ತ ಸರಿಯುತ್ತಿರುವುದು ಏಕೆ ಎಂಬ ಪ್ರಶ್ನೆ ಎದುರಾಗಿದ್ದು, ಈ ಕುರಿತು ಅಧ್ಯಯನದ ಅವಶ್ಯಕತೆ ಇದೆ ಎನ್ನುತ್ತಾರೆ ಸ್ಥಳೀಯರು.<br /> <br /> ‘ಹಿಂದೆ ದೇಶದಲ್ಲಿ ಶೇ 33ರಷ್ಟು ಅರಣ್ಯ ಪ್ರದೇಶವಿತ್ತು. ಈಗ ಶೇ 19ಕ್ಕೆ ಕುಸಿದಿದೆ. ಜನರು ಅರಣ್ಯವನ್ನು ಅತಿಕ್ರಮಿಸುತ್ತಿರುವುದರಿಂದ ಹೀಗೆ ಆಗಿದೆ. ಸಮುದ್ರದ ಒತ್ತಡಗಳಿಂದ ಆಗುತ್ತಿರುವ ವೈಪರೀತ್ಯದಿಂದ ಮಳೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ.<br /> <br /> 1900ರಲ್ಲಿ ದೇಶದಲ್ಲಿ 20 ಕೋಟಿ ಜನಸಂಖ್ಯೆ ಇತ್ತು. ಈಗ 128 ಕೋಟಿ ಆಗಿದೆ. ಅರಣ್ಯದಲ್ಲಿನ ಸಾಂದ್ರತೆ ಕೂಡ ಕುಂಠಿತಗೊಂಡಿದೆ. ಈ ಎಲ್ಲಾ ಕಾರಣಗಳಿಂದ ಮಳೆಯ ಪ್ರಮಾಣ ಕ್ಷೀಣಿಸುತ್ತಿದೆ’ ಎನ್ನುತ್ತಾರೆ ಶಾಸಕ ಕಿಮ್ಮನೆ ರತ್ನಾಕರ.</p>.<p><strong>ಹಿಂದಿನ ದಿನಗಳ ನೆನಪು...</strong><br /> ಹವಾಮಾನ ಇಲಾಖೆ ಸಿದ್ಧಪಡಿಸಿರುವ ದಾಖಲೆ ಪ್ರಕಾರ ಅತಿ ಹೆಚ್ಚು 11,343.5 ಮಿಲಿ ಮೀಟರ್ ಮಳೆ ಆಗುಂಬೆಯಲ್ಲಿ 1962ರಲ್ಲಿ ಬಿದ್ದಿದೆ. ಈ ಪ್ರಮಾಣದ ಮಳೆ ಮತ್ತೆ ಆಗುಂಬೆಯಲ್ಲಿ ಇಂದಿನವರೆಗೂ ಸುರಿದಿಲ್ಲ. ಅಂದು ಸುರಿದ ಮಳೆಯ ಪ್ರಮಾಣವನ್ನು ಈಗ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.</p>.<p>ಆ ಪ್ರಮಾಣದಲ್ಲಿ ಬಿದ್ದ ಮಳೆ 1963ರಲ್ಲಿ ಕೇವಲ 6,664 ಮಿ.ಮೀ.ಗೆ ಮಿತಿಗೊಂಡಿತು. ನಂತರ ಒಮ್ಮೆ ಮಾತ್ರ ಮಳೆಯ ಪ್ರಮಾಣ 10,000 ಮಿ.ಮೀ. ಗಡಿ ದಾಟಿತ್ತು. ಅದು 1978ರಲ್ಲಿ. ಆ ವರ್ಷ 10,464 ಮಿ.ಮೀ. ಮಳೆಯಾಯಿತು.<br /> <br /> ಈ ವರ್ಷ ಕೇವಲ 6,000 ಮಿ.ಮೀ. ಅಷ್ಟೇ ಮಳೆಯಾಗಿದೆ. ಆಗುಂಬೆ ಮಳೆಯ ಅಂಕಿಅಂಶ ಗಮನಿಸಿದರೆ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕುಸಿಯುತ್ತಿರುವುದು ಸ್ಪಷ್ಟ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೀರ್ಥಹಳ್ಳಿ: </strong>ಮಳೆಯ ತವರು ದಕ್ಷಿಣ ಭಾರತದ ಚಿರಾಪುಂಜಿ ಖ್ಯಾತಿಯ ಆಗುಂಬೆಯಲ್ಲಿ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕ್ಷೀಣಿಸುತ್ತಿದೆ. ಆಗುಂಬೆಯ ಮಳೆ ತನ್ನ ಗತ ವೈಭವವನ್ನು ಕೇವಲ ದಾಖಲೆಗಳಲ್ಲಿ ಉಳಿಸಿಕೊಳ್ಳುವಂತಾಗಿದೆ.<br /> <br /> ‘ಮಳೆ ಎಂದರೆ ಆಗುಂಬೆ, ಆಗುಂಬೆ ಎಂದರೆ ಮಳೆ’ ಎಂಬಂತಿದ್ದ ಪಶ್ಚಿಮ ಘಟ್ಟ ಸಾಲಿನ ಆಗುಂಬೆಯಲ್ಲಿ ಧೋ ಎಂದು ಸುರಿಯಬೇಕಿದ್ದ ಮಳೆಯ ಪ್ರಮಾಣ ವರ್ಷಗಳು ಸರಿದಂತೆ ಕಡಿಮೆ ಯಾಗುತ್ತಿರುವುದು ಆತಂಕ ಸೃಷ್ಟಿಸಿದೆ.<br /> <br /> ಇಲ್ಲಿ ಮಳೆಯ ಪ್ರಮಾಣ ಕಡಿಮೆ ಯಾದರೂ ಹೊಸನಗರ ಭಾಗದ ಯಡೂರು, ಮಾಸ್ತಿಕಟ್ಟೆ, ಕೊಡಚಾದ್ರಿ ಭಾಗದಲ್ಲಿ ಹೆಚ್ಚಾಗಿರುವುದು ಮಳೆರಾಯನ ಚಿತ್ತ ಅತ್ತ ಹರಿದಿರುವುದನ್ನು ಖಾತರಿಪಡಿಸುತ್ತದೆ.<br /> <br /> ಆಗುಂಬೆಯಲ್ಲಿ ಬೀಳುವ ಮಳೆ ಪ್ರಮಾಣಕ್ಕಿಂತ ಹೆಚ್ಚಾಗಿ ಯಡೂರು, ಮಾಸ್ತಿಕಟ್ಟೆ, ಕೊಡಚಾದ್ರಿ ತಪ್ಪಲಿನಲ್ಲಿ ಬೀಳುತ್ತಿರುವುದು ಇತ್ತೀಚಿನ ಸಮೀಕ್ಷೆಗಳಿಂದ ವ್ಯಕ್ತವಾಗಿದೆ.<br /> <br /> ಹಿಂದೆ ಅರಣ್ಯ ಪ್ರದೇಶದ ವಿಸ್ತೀರ್ಣ ಹೆಚ್ಚಾಗಿತ್ತು. ಈಗ ಅರಣ್ಯವು ಮೇಲ್ನೋಟಕ್ಕೆ ಕಂಡುಬಂದರೂ ದಟ್ಟ ಅರಣ್ಯ (ಸಾಂದ್ರತೆ) ಪ್ರದೇಶದ ಪ್ರಮಾಣ ಕಡಿಮೆಯಾಗಿದೆ.<br /> <br /> ಬೃಹತ್ ಗಾತ್ರದ ಗಗನಚುಂಬಿ ಮರಗಳ ಸಂಖ್ಯೆ ಕ್ಷೀಣಿಸುತ್ತಿದೆ. ಬಗರ್ ಹುಕುಂ ಸಾಗುವಳಿ, ಪಾರಂಪರಿಕ ಅರಣ್ಯವಾಸಿ ಗರ ಅರಣ್ಯ ಮಾನ್ಯ ಹಕ್ಕು, ಒತ್ತುವರಿ ಮುಂತಾದ ಕಾರಣಗಳಿಂದ ಅರಣ್ಯದ ಪ್ರಮಾಣ ಕಡಿಮೆಯಾಗುತ್ತಿರುವುದೇ ಮಳೆ ಪ್ರಮಾಣ ತಗ್ಗಲು ಕಾರಣವಾಗಿದೆ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.<br /> <br /> ಆಗುಂಬೆಯಲ್ಲಿ ಜುಲೈ ಅಂತ್ಯಕ್ಕೆ 1,828 ಮಿ.ಮೀ. ಮಳೆ ಬಿದ್ದಿದ್ದು, 2,477 ಮಿ.ಮೀ. ವಾಡಿಕೆ ಮಳೆಯಾಗಿದೆ. ಶೇ 74ರಷ್ಟು ಮಳೆಯಾಗಿದ್ದು, ಶೇ 26ರಷ್ಟು ಕೊರತೆ ಇದು. ಮಳೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿತ ಕಾಣುತ್ತಿರುವುದರಿಂದಾಗಿ ಕೃಷಿ ಸೇರಿದಂತೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.</p>.<p>ಮಲೆನಾಡು ಭಾಗದಲ್ಲಿ ಬೀಳುತ್ತಿದ್ದ ಮಳೆ ನಿಧಾನಕ್ಕೆ ಬಯಲು ಪ್ರದೇಶಗಳತ್ತ ಸರಿಯುತ್ತಿರುವುದು ಏಕೆ ಎಂಬ ಪ್ರಶ್ನೆ ಎದುರಾಗಿದ್ದು, ಈ ಕುರಿತು ಅಧ್ಯಯನದ ಅವಶ್ಯಕತೆ ಇದೆ ಎನ್ನುತ್ತಾರೆ ಸ್ಥಳೀಯರು.<br /> <br /> ‘ಹಿಂದೆ ದೇಶದಲ್ಲಿ ಶೇ 33ರಷ್ಟು ಅರಣ್ಯ ಪ್ರದೇಶವಿತ್ತು. ಈಗ ಶೇ 19ಕ್ಕೆ ಕುಸಿದಿದೆ. ಜನರು ಅರಣ್ಯವನ್ನು ಅತಿಕ್ರಮಿಸುತ್ತಿರುವುದರಿಂದ ಹೀಗೆ ಆಗಿದೆ. ಸಮುದ್ರದ ಒತ್ತಡಗಳಿಂದ ಆಗುತ್ತಿರುವ ವೈಪರೀತ್ಯದಿಂದ ಮಳೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ.<br /> <br /> 1900ರಲ್ಲಿ ದೇಶದಲ್ಲಿ 20 ಕೋಟಿ ಜನಸಂಖ್ಯೆ ಇತ್ತು. ಈಗ 128 ಕೋಟಿ ಆಗಿದೆ. ಅರಣ್ಯದಲ್ಲಿನ ಸಾಂದ್ರತೆ ಕೂಡ ಕುಂಠಿತಗೊಂಡಿದೆ. ಈ ಎಲ್ಲಾ ಕಾರಣಗಳಿಂದ ಮಳೆಯ ಪ್ರಮಾಣ ಕ್ಷೀಣಿಸುತ್ತಿದೆ’ ಎನ್ನುತ್ತಾರೆ ಶಾಸಕ ಕಿಮ್ಮನೆ ರತ್ನಾಕರ.</p>.<p><strong>ಹಿಂದಿನ ದಿನಗಳ ನೆನಪು...</strong><br /> ಹವಾಮಾನ ಇಲಾಖೆ ಸಿದ್ಧಪಡಿಸಿರುವ ದಾಖಲೆ ಪ್ರಕಾರ ಅತಿ ಹೆಚ್ಚು 11,343.5 ಮಿಲಿ ಮೀಟರ್ ಮಳೆ ಆಗುಂಬೆಯಲ್ಲಿ 1962ರಲ್ಲಿ ಬಿದ್ದಿದೆ. ಈ ಪ್ರಮಾಣದ ಮಳೆ ಮತ್ತೆ ಆಗುಂಬೆಯಲ್ಲಿ ಇಂದಿನವರೆಗೂ ಸುರಿದಿಲ್ಲ. ಅಂದು ಸುರಿದ ಮಳೆಯ ಪ್ರಮಾಣವನ್ನು ಈಗ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.</p>.<p>ಆ ಪ್ರಮಾಣದಲ್ಲಿ ಬಿದ್ದ ಮಳೆ 1963ರಲ್ಲಿ ಕೇವಲ 6,664 ಮಿ.ಮೀ.ಗೆ ಮಿತಿಗೊಂಡಿತು. ನಂತರ ಒಮ್ಮೆ ಮಾತ್ರ ಮಳೆಯ ಪ್ರಮಾಣ 10,000 ಮಿ.ಮೀ. ಗಡಿ ದಾಟಿತ್ತು. ಅದು 1978ರಲ್ಲಿ. ಆ ವರ್ಷ 10,464 ಮಿ.ಮೀ. ಮಳೆಯಾಯಿತು.<br /> <br /> ಈ ವರ್ಷ ಕೇವಲ 6,000 ಮಿ.ಮೀ. ಅಷ್ಟೇ ಮಳೆಯಾಗಿದೆ. ಆಗುಂಬೆ ಮಳೆಯ ಅಂಕಿಅಂಶ ಗಮನಿಸಿದರೆ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕುಸಿಯುತ್ತಿರುವುದು ಸ್ಪಷ್ಟ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>