<p>ಕಾರ್ಗಲ್: ತಾಳಗುಪ್ಪ- ಬೆಂಗಳೂರು ಮಧ್ಯದ ರೈಲು ಸೇವೆ ಇನ್ನೂ ಮರೀಚಿಕೆ ಆಗಿದೆ.<br /> ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾಗಿದ್ದ ತಾಳಗುಪ್ಪ, ಶಿವಮೊಗ್ಗ ರೈಲು ಸಂಚಾರ ಮೀಟರ್ಗೇಜ್ ಮಾರ್ಗದಲ್ಲಿ ಸೇವೆ ಸಲ್ಲಿಸುತ್ತಾ 2005ನೇ ಇಸವಿಯವರೆಗೂ ಸಾಗಿ ಬಂದಿತ್ತು. ಈ ಮಧ್ಯೆ ಸಂಚಾರ ಮಾರ್ಗವನ್ನು ಬ್ರಾಡ್ಗೇಜ್ ಆಗಿ ಪರಿವರ್ತಿಸುವಂತೆ ಅನೇಕ ಜನಪರ ಹೋರಾಟಗಳು ನಾಡಿನ ಪ್ರಖ್ಯಾತ ಸಾಹಿತಿ ನಾ. ಡಿಸೋಜ ನೇತೃತ್ವದಲ್ಲಿ ನಡೆದವು.<br /> <br /> ಹೋರಾಟಗಳ ಪರಿಣಾಮ ಮತ್ತು ಸರ್ಕಾರಗಳ ಸಂಕಲ್ಪವೇನೋ ಎಂಬಂತೆ 2011ರಲ್ಲಿ ಶಿವಮೊಗ್ಗ ತಾಳುಗುಪ್ಪ ರೈಲ್ವೆ ಮಾರ್ಗ ಬ್ರಾಡ್ಗೇಜ್ ಆಗಿ ಪರಿವರ್ತನೆಗೊಂಡು ಆರಂಭದಲ್ಲಿ ಮೈಸೂರು ತಾಳಗುಪ್ಪ ರೈಲು ಸಂಚಾರ ಆರಂಭವಾಯಿತು. ಆದರೆ, ಈ ಭಾಗದ ಜನರ ಬಹುನಿರೀಕ್ಷಿತ ತಾಳುಗುಪ್ಪ, ಬೆಂಗಳೂರು ಸಂಚಾರ ಮಾತ್ರ ಮರೀಚಿಕೆಯಾಗಿಯೇ ಉಳಿದು ಹೋಗಿದೆ!<br /> <br /> 3-4 ತಿಂಗಳುಗಳಿಂದ ಇನ್ನೇನು ಬೆಂಗಳೂರು, ತಾಳಗುಪ್ಪ ರೈಲ್ವೆ ಸಂಚಾರ ನಾಳೆಯಿಂದ ಆರಂಭ, ಮುಂದಿನ ವಾರದಿಂದ ಆರಂಭ, 1ನೇ ತಾರೀಕಿನಿಂದ ಆರಂಭ ಹೀಗೆ ಅನೇಕ ಊಹಾಪೋಹಗಳು ಗಾಳಿ ಸುದ್ದಿಯಾಗಿ ಹರಡಿಕೊಂಡಿತ್ತು.<br /> <br /> ತಾಳಗುಪ್ಪದ ರೈಲುನಿಲ್ದಾಣದ ವ್ಯವಸ್ಥಾಪಕರಲ್ಲಿ ಈ ಬಗ್ಗೆ ವಿಚಾರಿಸಿದರೆ ತಮಗೇ ಯಾವುದೇ ಆದೇಶಗಳು ಅಥವಾ ಮುನ್ಸೂಚನೆಗಳು ಈವರೆಗೂ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.<br /> <br /> ಈವರೆಗೂ ಈ ಭಾಗದ ನಾಗರಿಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅವಶ್ಯಕತೆಯಿರುವ ಬೆಂಗಳೂರು ಸಂಪರ್ಕದ ಸಂಚಾರ ಮಾರ್ಗ ಆರಂಭವಾಗದೇ ಭಾರೀ ನಿರಾಸೆಯನ್ನು ರೈಲು ಇಲಾಖೆ ಉಂಟು ಮಾಡಿರುವುದು ಸತ್ಯವಾದ ವಿಚಾರ ಆಗಿದೆ ಎಂದು ಈ ಭಾಗದ ಹೋರಾಟಗಾರರು ತಿಳಿಸಿದ್ದಾರೆ. <br /> <br /> ಜೋಗ ಜಲಪಾತ ಧುಮ್ಮಿಕ್ಕುತ್ತಿದ್ದು, ನಾಡಿನ ಎಲ್ಲೆಡೆಯಿಂದ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಇವರಲ್ಲಿ ಮುಖ್ಯವಾಗಿ ಶಿವಮೊಗ್ಗ, ತುಮಕೂರು, ಬೆಂಗಳೂರು ಸುತ್ತಮುತ್ತಲಿನ ಭಾಗದವರೇ ಹೆಚ್ಚು. <br /> <br /> ಪ್ರವಾಸಿಗರ ಹಿತದೃಷ್ಟಿಯಿಂದಲಾದರೂ ಬೆಂಗಳೂರು ತಾಳಗುಪ್ಪ ರೈಲು ಸಂಚಾರವನ್ನು ರೈಲ್ವೆ ಇಲಾಖೆ ಕೂಡಲೇ ಆರಂಭಿಸಲಿ ಎಂಬುದು ಈ ಭಾಗದ ಜನರ ಆಶಯ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾರ್ಗಲ್: ತಾಳಗುಪ್ಪ- ಬೆಂಗಳೂರು ಮಧ್ಯದ ರೈಲು ಸೇವೆ ಇನ್ನೂ ಮರೀಚಿಕೆ ಆಗಿದೆ.<br /> ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾಗಿದ್ದ ತಾಳಗುಪ್ಪ, ಶಿವಮೊಗ್ಗ ರೈಲು ಸಂಚಾರ ಮೀಟರ್ಗೇಜ್ ಮಾರ್ಗದಲ್ಲಿ ಸೇವೆ ಸಲ್ಲಿಸುತ್ತಾ 2005ನೇ ಇಸವಿಯವರೆಗೂ ಸಾಗಿ ಬಂದಿತ್ತು. ಈ ಮಧ್ಯೆ ಸಂಚಾರ ಮಾರ್ಗವನ್ನು ಬ್ರಾಡ್ಗೇಜ್ ಆಗಿ ಪರಿವರ್ತಿಸುವಂತೆ ಅನೇಕ ಜನಪರ ಹೋರಾಟಗಳು ನಾಡಿನ ಪ್ರಖ್ಯಾತ ಸಾಹಿತಿ ನಾ. ಡಿಸೋಜ ನೇತೃತ್ವದಲ್ಲಿ ನಡೆದವು.<br /> <br /> ಹೋರಾಟಗಳ ಪರಿಣಾಮ ಮತ್ತು ಸರ್ಕಾರಗಳ ಸಂಕಲ್ಪವೇನೋ ಎಂಬಂತೆ 2011ರಲ್ಲಿ ಶಿವಮೊಗ್ಗ ತಾಳುಗುಪ್ಪ ರೈಲ್ವೆ ಮಾರ್ಗ ಬ್ರಾಡ್ಗೇಜ್ ಆಗಿ ಪರಿವರ್ತನೆಗೊಂಡು ಆರಂಭದಲ್ಲಿ ಮೈಸೂರು ತಾಳಗುಪ್ಪ ರೈಲು ಸಂಚಾರ ಆರಂಭವಾಯಿತು. ಆದರೆ, ಈ ಭಾಗದ ಜನರ ಬಹುನಿರೀಕ್ಷಿತ ತಾಳುಗುಪ್ಪ, ಬೆಂಗಳೂರು ಸಂಚಾರ ಮಾತ್ರ ಮರೀಚಿಕೆಯಾಗಿಯೇ ಉಳಿದು ಹೋಗಿದೆ!<br /> <br /> 3-4 ತಿಂಗಳುಗಳಿಂದ ಇನ್ನೇನು ಬೆಂಗಳೂರು, ತಾಳಗುಪ್ಪ ರೈಲ್ವೆ ಸಂಚಾರ ನಾಳೆಯಿಂದ ಆರಂಭ, ಮುಂದಿನ ವಾರದಿಂದ ಆರಂಭ, 1ನೇ ತಾರೀಕಿನಿಂದ ಆರಂಭ ಹೀಗೆ ಅನೇಕ ಊಹಾಪೋಹಗಳು ಗಾಳಿ ಸುದ್ದಿಯಾಗಿ ಹರಡಿಕೊಂಡಿತ್ತು.<br /> <br /> ತಾಳಗುಪ್ಪದ ರೈಲುನಿಲ್ದಾಣದ ವ್ಯವಸ್ಥಾಪಕರಲ್ಲಿ ಈ ಬಗ್ಗೆ ವಿಚಾರಿಸಿದರೆ ತಮಗೇ ಯಾವುದೇ ಆದೇಶಗಳು ಅಥವಾ ಮುನ್ಸೂಚನೆಗಳು ಈವರೆಗೂ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.<br /> <br /> ಈವರೆಗೂ ಈ ಭಾಗದ ನಾಗರಿಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅವಶ್ಯಕತೆಯಿರುವ ಬೆಂಗಳೂರು ಸಂಪರ್ಕದ ಸಂಚಾರ ಮಾರ್ಗ ಆರಂಭವಾಗದೇ ಭಾರೀ ನಿರಾಸೆಯನ್ನು ರೈಲು ಇಲಾಖೆ ಉಂಟು ಮಾಡಿರುವುದು ಸತ್ಯವಾದ ವಿಚಾರ ಆಗಿದೆ ಎಂದು ಈ ಭಾಗದ ಹೋರಾಟಗಾರರು ತಿಳಿಸಿದ್ದಾರೆ. <br /> <br /> ಜೋಗ ಜಲಪಾತ ಧುಮ್ಮಿಕ್ಕುತ್ತಿದ್ದು, ನಾಡಿನ ಎಲ್ಲೆಡೆಯಿಂದ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಇವರಲ್ಲಿ ಮುಖ್ಯವಾಗಿ ಶಿವಮೊಗ್ಗ, ತುಮಕೂರು, ಬೆಂಗಳೂರು ಸುತ್ತಮುತ್ತಲಿನ ಭಾಗದವರೇ ಹೆಚ್ಚು. <br /> <br /> ಪ್ರವಾಸಿಗರ ಹಿತದೃಷ್ಟಿಯಿಂದಲಾದರೂ ಬೆಂಗಳೂರು ತಾಳಗುಪ್ಪ ರೈಲು ಸಂಚಾರವನ್ನು ರೈಲ್ವೆ ಇಲಾಖೆ ಕೂಡಲೇ ಆರಂಭಿಸಲಿ ಎಂಬುದು ಈ ಭಾಗದ ಜನರ ಆಶಯ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>