<p><strong>ಭದ್ರಾವತಿ: </strong>ಐವತ್ತು ವರ್ಷದ ಇತಿಹಾಸ ಹೊತ್ತಿರುವ ಇಲ್ಲಿನ ನ್ಯಾಯಾಲಯ ಕಟ್ಟಡ ಇನ್ನು ಕೆಲವೇ ದಿನದಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡು ಕಾಲಗರ್ಭ ಸೇರಲಿದೆ...<br /> <br /> ಹೌದು. ಇಲ್ಲಿನ ಹಳೇನಗರ ತಾಲ್ಲೂಕು ಕಚೇರಿ ರಸ್ತೆಯಲ್ಲಿರುವ ಕೋರ್ಟ್ ಕಾಂಪ್ಲೆಕ್ಸ್ನಲ್ಲಿ `ಟಿ~ ಆಕಾರ ಹೊತ್ತಿರುವ ಕಟ್ಟಡವನ್ನು ಕೆಡವಿ, ಅಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ನ್ಯಾಯಾಲಯ ನಿರ್ಮಾಣ ನಡೆಯಲಿದೆ.<br /> <br /> ಹಾಲಿ ಪ್ರವೇಶ ಸ್ಥಳದ ಎರಡು ಬದಿಯಲ್ಲಿ ವಿಶಾಲವಾದ ನ್ಯಾಯಾಲಯ ಸಭಾಂಗಣ, ಇದರ ಮಧ್ಯದಲ್ಲಿ ಪ್ರಾಂಗಣ ಅದರ ಹಿಂದೆ ಸಾಲು ಕಚೇರಿಗಳನ್ನು ಹೊಂದಿದ್ದ ಕಟ್ಟಡ ಧರೆಗೆ ಉರುಳಲಿದೆ.<br /> <br /> ಇತಿಹಾಸ: ಇಲ್ಲಿನ ತರೀಕೆರೆ ರಸ್ತೆ ಕೃಷಿ ಇಲಾಖೆ ಹಿಂಭಾಗದ ಈಗಿನ ತಮಿಳು ಶಾಲೆಯಲ್ಲಿ ಮೊಟ್ಟ ಮೊದಲಿಗೆ 1928ರಿಂದ ನ್ಯಾಯಾಲಯ ಕಲಾಪ ನಡೆದಿತ್ತು. ನಂತರ 1963ರಲ್ಲಿ ಹಾಲಿ ಇರುವ ಸ್ಥಳದಲ್ಲಿ ಕಟ್ಟಡ ನಿರ್ಮಾಣವಾಗಿತ್ತು.<br /> <br /> ಮೊದಲ ಕೋರ್ಟ್ ಸ್ಥಳದಲ್ಲಿ ಬಿ. ಕೃಷ್ಣಭಟ್, ಗುರುಲಿಂಗ ಮೂರ್ತಿ, ಎಂ. ಸತ್ಯನಾರಾಯಣ ಕೆಲಸ ಮಾಡಿದ್ದರು ಎಂಬುದು ಹೆಮ್ಮೆಯ ಸಂಗತಿ. ನಂತರ ಇವರ ಪ್ರಯತ್ನ ಫಲವಾಗಿ 1963ರಲ್ಲಿ ನಿರ್ಮಾಣವಾದ `ಟಿ~ ಮಾದರಿ ಕಟ್ಟಡದಲ್ಲಿ ಈ ಹಿರಿಯ ವಕೀಲರ ಜತೆಗೆ ಮಂಗೋಟೆ ಮುರಿಗೆಪ್ಪ, ಹೆಬ್ಬಂಡಿ ಪ. ಬಸವರಾಜಪ್ಪ ಸೇರ್ಪಡೆಯಾಗುವ ಮೂಲಕ ತಮ್ಮ ವೃತ್ತಿ ಬದುಕಿನ 50 ವಸಂತಗಳನ್ನು ಪೂರೈಸಿರುವುದು ಇಲ್ಲಿಯೇ ಎಂಬುದು ವಿಶೇಷ. <br /> <br /> 1963ರಲ್ಲಿ ಆರಂಭವಾದ ಕಟ್ಟಡವನ್ನು ಅಂದಿನ ಮೈಸೂರು ರಾಜ್ಯದ ಮುಖ್ಯ ನ್ಯಾಯಾಧೀಶ ಎಚ್. ಹೊಂಬೇಗೌಡ ಉದ್ಘಾಟಿಸಿದ್ದರು. ಆಗ ಮುನ್ಸೀಫ್ ನ್ಯಾಯಾಧೀಶ ಬಿ.ಆರ್. ಅಶ್ವತ್ಥರಾಮ್ ಉಪಸ್ಥಿತರಿದ್ದರು.<br /> <br /> ವರ್ಷ ಕಳೆದಂತೆ ವಕೀಲರು, ಪ್ರಕರಣಗಳು ಹಾಗೂ ಜನಸಂಖ್ಯೆ ಹೆಚ್ಚಾದಂತೆ ಹಾಲಿ ಇರುವ ಸ್ಥಳದಲ್ಲೇ 1987ರಲ್ಲಿ 2ನೇ ಹಂತದ ಕಟ್ಟಡ ನಿರ್ಮಾಣ ನಡೆದು, 3ನೇ ಕೋರ್ಟ್ ಆರಂಭವಾಯಿತು. 2010-11ನೇ ಸಾಲಿನಲ್ಲಿ 3ನೇ ಹಂತದ ಕಟ್ಟಡ ಕಾಮಗಾರಿ ನಡೆದು ಪುನಃ 4ನ್ಯಾಯಾಲಯಗಳು ತಮ್ಮ ಕೆಲಸ ಆರಂಭಿಸಿದವು.<br /> <br /> ಈ ರೀತಿಯ ನ್ಯಾಯಾಲಯ ಸಂಕೀರ್ಣಕ್ಕೆ ಮುಕುಟವಿಟ್ಟ ರೀತಿ ವೃತ್ತಾಕಾರದ ಕಂಬಗಳ ಸಾಲು, ವಿಶಾಲ ಪ್ರಾಂಗಣ, ಹಾಗೂ ಇನ್ನಿತರೆ ವಿಶೇಷ ವಿನ್ಯಾಸ ಹೊತ್ತಿದ್ದ ಕಟ್ಟಡಕ್ಕೆ ಈಗ ಮುಕ್ತಿಕೊಟ್ಟು, ನವೀನ ಮಾದರಿ ಕಟ್ಟಡ ನಿರ್ಮಿಸಲು ಲೋಕೋಪಯೋಗಿ ಇಲಾಖೆ ಅಡಿಯಿಟ್ಟಿದ್ದು, ಅದರ ಭಾಗವಾಗಿ ತೆರವುಕಾರ್ಯ ನಡೆದಿದೆ.<br /> <br /> ತೆರವು ಕಾರ್ಯ ನಡೆಯುವ ಜಾಗದಲ್ಲಿನ ಎರಡು ನ್ಯಾಯಾಲಯಗಳು ಹಳೇನಗರ ಬಸವೇಶ್ವರ ವೃತ್ತದಲ್ಲಿನ ವೀರಭದ್ರೇಶ್ವರ ಕಾಂಪ್ಲೆಕ್ಸ್ನಲ್ಲಿ ಸೋಮವಾರದಿಂದ ಕಾರ್ಯ ಮಾಡಲಿದ್ದು, ಉಳಿದ ನಾಲ್ಕು ನ್ಯಾಯಾಲಯಗಳು ಹಾಲಿ ಸ್ಥಳದಲ್ಲೇ ತಮ್ಮ ಕೆಲಸ ನಿರ್ವಹಿಸಲಿವೆ.<br /> <br /> ಒಟ್ಟಿನಲ್ಲಿ ಹಲವು ದಶಕದ ಇತಿಹಾಸ ಹೊತ್ತಿದ್ದ ನ್ಯಾಯಾಲಯ ಕಟ್ಟಡ ಕಲವೇ ದಿನದಲ್ಲಿ ಇತಿಹಾಸದ ಪುಟ ಸೇರಲಿದೆ. ಆದರೆ, ಅದರೊಂದಿಗೆ ಕಾಲಕಳೆದ ಅನೇಕ ಮನಸ್ಸುಗಳ, ಮಾಸದ ನೆನಪು ಮಾತ್ರ ನಿರಂತರವಾಗಿ ಉಳಿಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದ್ರಾವತಿ: </strong>ಐವತ್ತು ವರ್ಷದ ಇತಿಹಾಸ ಹೊತ್ತಿರುವ ಇಲ್ಲಿನ ನ್ಯಾಯಾಲಯ ಕಟ್ಟಡ ಇನ್ನು ಕೆಲವೇ ದಿನದಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡು ಕಾಲಗರ್ಭ ಸೇರಲಿದೆ...<br /> <br /> ಹೌದು. ಇಲ್ಲಿನ ಹಳೇನಗರ ತಾಲ್ಲೂಕು ಕಚೇರಿ ರಸ್ತೆಯಲ್ಲಿರುವ ಕೋರ್ಟ್ ಕಾಂಪ್ಲೆಕ್ಸ್ನಲ್ಲಿ `ಟಿ~ ಆಕಾರ ಹೊತ್ತಿರುವ ಕಟ್ಟಡವನ್ನು ಕೆಡವಿ, ಅಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ನ್ಯಾಯಾಲಯ ನಿರ್ಮಾಣ ನಡೆಯಲಿದೆ.<br /> <br /> ಹಾಲಿ ಪ್ರವೇಶ ಸ್ಥಳದ ಎರಡು ಬದಿಯಲ್ಲಿ ವಿಶಾಲವಾದ ನ್ಯಾಯಾಲಯ ಸಭಾಂಗಣ, ಇದರ ಮಧ್ಯದಲ್ಲಿ ಪ್ರಾಂಗಣ ಅದರ ಹಿಂದೆ ಸಾಲು ಕಚೇರಿಗಳನ್ನು ಹೊಂದಿದ್ದ ಕಟ್ಟಡ ಧರೆಗೆ ಉರುಳಲಿದೆ.<br /> <br /> ಇತಿಹಾಸ: ಇಲ್ಲಿನ ತರೀಕೆರೆ ರಸ್ತೆ ಕೃಷಿ ಇಲಾಖೆ ಹಿಂಭಾಗದ ಈಗಿನ ತಮಿಳು ಶಾಲೆಯಲ್ಲಿ ಮೊಟ್ಟ ಮೊದಲಿಗೆ 1928ರಿಂದ ನ್ಯಾಯಾಲಯ ಕಲಾಪ ನಡೆದಿತ್ತು. ನಂತರ 1963ರಲ್ಲಿ ಹಾಲಿ ಇರುವ ಸ್ಥಳದಲ್ಲಿ ಕಟ್ಟಡ ನಿರ್ಮಾಣವಾಗಿತ್ತು.<br /> <br /> ಮೊದಲ ಕೋರ್ಟ್ ಸ್ಥಳದಲ್ಲಿ ಬಿ. ಕೃಷ್ಣಭಟ್, ಗುರುಲಿಂಗ ಮೂರ್ತಿ, ಎಂ. ಸತ್ಯನಾರಾಯಣ ಕೆಲಸ ಮಾಡಿದ್ದರು ಎಂಬುದು ಹೆಮ್ಮೆಯ ಸಂಗತಿ. ನಂತರ ಇವರ ಪ್ರಯತ್ನ ಫಲವಾಗಿ 1963ರಲ್ಲಿ ನಿರ್ಮಾಣವಾದ `ಟಿ~ ಮಾದರಿ ಕಟ್ಟಡದಲ್ಲಿ ಈ ಹಿರಿಯ ವಕೀಲರ ಜತೆಗೆ ಮಂಗೋಟೆ ಮುರಿಗೆಪ್ಪ, ಹೆಬ್ಬಂಡಿ ಪ. ಬಸವರಾಜಪ್ಪ ಸೇರ್ಪಡೆಯಾಗುವ ಮೂಲಕ ತಮ್ಮ ವೃತ್ತಿ ಬದುಕಿನ 50 ವಸಂತಗಳನ್ನು ಪೂರೈಸಿರುವುದು ಇಲ್ಲಿಯೇ ಎಂಬುದು ವಿಶೇಷ. <br /> <br /> 1963ರಲ್ಲಿ ಆರಂಭವಾದ ಕಟ್ಟಡವನ್ನು ಅಂದಿನ ಮೈಸೂರು ರಾಜ್ಯದ ಮುಖ್ಯ ನ್ಯಾಯಾಧೀಶ ಎಚ್. ಹೊಂಬೇಗೌಡ ಉದ್ಘಾಟಿಸಿದ್ದರು. ಆಗ ಮುನ್ಸೀಫ್ ನ್ಯಾಯಾಧೀಶ ಬಿ.ಆರ್. ಅಶ್ವತ್ಥರಾಮ್ ಉಪಸ್ಥಿತರಿದ್ದರು.<br /> <br /> ವರ್ಷ ಕಳೆದಂತೆ ವಕೀಲರು, ಪ್ರಕರಣಗಳು ಹಾಗೂ ಜನಸಂಖ್ಯೆ ಹೆಚ್ಚಾದಂತೆ ಹಾಲಿ ಇರುವ ಸ್ಥಳದಲ್ಲೇ 1987ರಲ್ಲಿ 2ನೇ ಹಂತದ ಕಟ್ಟಡ ನಿರ್ಮಾಣ ನಡೆದು, 3ನೇ ಕೋರ್ಟ್ ಆರಂಭವಾಯಿತು. 2010-11ನೇ ಸಾಲಿನಲ್ಲಿ 3ನೇ ಹಂತದ ಕಟ್ಟಡ ಕಾಮಗಾರಿ ನಡೆದು ಪುನಃ 4ನ್ಯಾಯಾಲಯಗಳು ತಮ್ಮ ಕೆಲಸ ಆರಂಭಿಸಿದವು.<br /> <br /> ಈ ರೀತಿಯ ನ್ಯಾಯಾಲಯ ಸಂಕೀರ್ಣಕ್ಕೆ ಮುಕುಟವಿಟ್ಟ ರೀತಿ ವೃತ್ತಾಕಾರದ ಕಂಬಗಳ ಸಾಲು, ವಿಶಾಲ ಪ್ರಾಂಗಣ, ಹಾಗೂ ಇನ್ನಿತರೆ ವಿಶೇಷ ವಿನ್ಯಾಸ ಹೊತ್ತಿದ್ದ ಕಟ್ಟಡಕ್ಕೆ ಈಗ ಮುಕ್ತಿಕೊಟ್ಟು, ನವೀನ ಮಾದರಿ ಕಟ್ಟಡ ನಿರ್ಮಿಸಲು ಲೋಕೋಪಯೋಗಿ ಇಲಾಖೆ ಅಡಿಯಿಟ್ಟಿದ್ದು, ಅದರ ಭಾಗವಾಗಿ ತೆರವುಕಾರ್ಯ ನಡೆದಿದೆ.<br /> <br /> ತೆರವು ಕಾರ್ಯ ನಡೆಯುವ ಜಾಗದಲ್ಲಿನ ಎರಡು ನ್ಯಾಯಾಲಯಗಳು ಹಳೇನಗರ ಬಸವೇಶ್ವರ ವೃತ್ತದಲ್ಲಿನ ವೀರಭದ್ರೇಶ್ವರ ಕಾಂಪ್ಲೆಕ್ಸ್ನಲ್ಲಿ ಸೋಮವಾರದಿಂದ ಕಾರ್ಯ ಮಾಡಲಿದ್ದು, ಉಳಿದ ನಾಲ್ಕು ನ್ಯಾಯಾಲಯಗಳು ಹಾಲಿ ಸ್ಥಳದಲ್ಲೇ ತಮ್ಮ ಕೆಲಸ ನಿರ್ವಹಿಸಲಿವೆ.<br /> <br /> ಒಟ್ಟಿನಲ್ಲಿ ಹಲವು ದಶಕದ ಇತಿಹಾಸ ಹೊತ್ತಿದ್ದ ನ್ಯಾಯಾಲಯ ಕಟ್ಟಡ ಕಲವೇ ದಿನದಲ್ಲಿ ಇತಿಹಾಸದ ಪುಟ ಸೇರಲಿದೆ. ಆದರೆ, ಅದರೊಂದಿಗೆ ಕಾಲಕಳೆದ ಅನೇಕ ಮನಸ್ಸುಗಳ, ಮಾಸದ ನೆನಪು ಮಾತ್ರ ನಿರಂತರವಾಗಿ ಉಳಿಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>