<p><strong>ಸಾಗರ:</strong> ತಮ್ಮ ವಿಶಿಷ್ಟ ಕ್ರಿಯಾಶೀಲತೆಯ ಮೂಲಕ ಒಂದು ಪ್ರದೇಶದ ಸಂಸ್ಕೃತಿಯನ್ನೆ ಬದಲಿಸಿದ್ದು ಕೆ.ವಿ.ಸುಬ್ಬಣ್ಣ ಅವರ ಮಹತ್ವದ ಸಾಧನೆಯಾಗಿದೆ ಎಂದು ಸುಬ್ಬಣ್ಣ ಅವರ ಒಡನಾಡಿ ತೀರ್ಥಹಳ್ಳಿಯ ಗಂಗಾಧರ್ ಹೇಳಿದರು.<br /> <br /> ಇಲ್ಲಿಗೆ ಸಮೀಪದ ಹೆಗ್ಗೋಡಿನ ನೀನಾಸಂ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆ.ವಿ.ಸುಬ್ಬಣ್ಣ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹಿಡಿದ ಕೆಲಸವನ್ನು ಆದಷ್ಟು ಶೀಘ್ರವಾಗಿ ಮತ್ತು ಅಚ್ಚುಕಟ್ಟಾಗಿ ಮುಗಿಸಬೇಕು ಎಂಬ ತುಡಿತವನ್ನು ಸುಬ್ಬಣ್ಣ ಅವರಲ್ಲಿ ಸದಾ ಕಾಣಬಹುದಿತ್ತು ಎಂದರು.<br /> <br /> `ಹೆಗ್ಗೋಡು ಹಾಗೂ ನೀನಾಸಂನ ಪ್ರತಿ ಚಟುವಟಿಕೆಗಳ ಹಿಂದೆ ಸುಬ್ಬಣ್ಣ ಅವರ ಇರುವಿಕೆಯನ್ನ ಗುರುತಿಸಬಹುದು. ಭೌತಿಕವಾಗಿ ಅವರು ನಮ್ಮ ಜೊತೆ ಇಲ್ಲದೆ ಇದ್ದರೂ ನೀನಾಸಂನ ಮೂಲಕ ಇಂದಿಗೂ ಜೀವಂತವಾಗಿದ್ದಾರೆ' ಎಂದು ಅವರು ಹೇಳಿದರು.<br /> <br /> `ಬದುಕಿನ ಸಣ್ಣಪುಟ್ಟ ಸಂಗತಿಗಳನ್ನು ಅಲಕ್ಷಿಸದೇ ಸೂಕ್ಷ್ಮವಾಗಿ ವಿಶ್ಲೇಷಿಸುವ ಗುಣವನ್ನು ಸುಬ್ಬಣ್ಣ ಹೊಂದಿದ್ದರು. ಅವರ ಈ ದೃಷ್ಟಿಕೋನವೇ ರಂಗ ಭೂಮಿ, ಸಾಹಿತ್ಯ ಸೇರಿದಂತೆ ಹಲವು ರಚನಾತ್ಮಕ ಚಟುವಟಿಕೆಗಳಿಗೆ ದಾರಿಯಾಯಿತು' ಎಂದು ಅಭಿಪ್ರಾಯಪಟ್ಟರು.<br /> <br /> ಲೇಖಕ ಡಾ.ಎಂ.ಎಸ್.ಶ್ರೀರಾಮ್ ಮಾತನಾಡಿ ನಿಷ್ಠುರತೆ, ವಿನಯ, ವಿಶಿಷ್ಟ ಒಳನೋಟ, ಅಂತಕರಣವನ್ನು ತಟ್ಟುವ ಅನುಭವ ದ್ರವ್ಯ ಸುಬ್ಬಣ್ಣ ಅವರ ಕೃತಿ ಹಾಗೂ ಚಿಂತನೆಗಳನ್ನು ಜೀವಂತ ವಾಗಿಟ್ಟಿವೆ ಎಂದು ಹೇಳಿದರು.<br /> <br /> ನೀನಾಸಂನ ಎಚ್.ವಿ.ಚಂದ್ರಶೇಖರ್, ಕೆ.ವಿ.ಅಕ್ಷರ, ಟಿ.ಪಿ.ಅಶೋಕ್, ಲೇಖಕ ಡಿ.ಎಸ್.ನಾಗಭೂಷಣ್, ಕವಯತ್ರಿ ಸವಿತಾ ನಾಗಭೂಷಣ್, ರಂಗಕರ್ಮಿ ಪ್ರಕಾಶ್ ಬೆಳವಾಡಿ, ರೈತ ಮುಖಂಡ ಕಡಿದಾಳು ಶಾಮಣ್ಣ, ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗಡೆ ಹಾಜರಿದ್ದರು .</p>.<p><strong>ಪ್ರೇಮ ಪತ್ರ ಸ್ಪರ್ಧೆ ಮತ್ತು ಸುಬ್ಬಣ್ಣ</strong></p>.<p>ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ನಡೆದ ಹಲವು ಸ್ವಾರಸ್ಯಕರ ಘಟನೆಗಳನ್ನು ಸುಬ್ಬಣ್ಣ ಅವರ ಒಡನಾಡಿ ಗಂಗಾಧರ್ ನೆನಪಿಸಿಕೊಂಡರು.<br /> <br /> ಪ್ರತಿ ವರ್ಷ ಹಾಸ್ಟೆಲ್ ದಿನಾಚರಣೆ ಅಂಗವಾಗಿ ಏರ್ಪಡಿಸುತ್ತಿದ್ದ ಪ್ರೇಮ ಪತ್ರ ಬರೆಯುವ ಸ್ಪರ್ಧೆಯಲ್ಲಿ ಕೆ.ವಿ.ಸುಬ್ಬಣ್ಣ ಅವರಿಗೆ ಪ್ರಥಮ ಬಹುಮಾನ ಬರುತ್ತಿತ್ತಂತೆ. ಒಂದು ವರ್ಷ ಇದನ್ನು ಗಮನಿಸಿದ ಯು.ಆರ್.ಅನಂತಮೂರ್ತಿ , ಯಾವುದಾದರೂ ಹುಡುಗಿ ಈ ಪ್ರೇಮ ಪತ್ರ ಓದಿ ಸುಬ್ಬಣ್ಣ ಅವರನ್ನು ಪ್ರೀತಿಸಿದರೆ ಮಾತ್ರ ನೀವು ಬಹುಮಾನ ನೀಡಿದ್ದು ಸಾರ್ಥಕ ಎಂದು ಪ್ರತಿಕ್ರಿಯಿಸಿದ್ದರಂತೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ:</strong> ತಮ್ಮ ವಿಶಿಷ್ಟ ಕ್ರಿಯಾಶೀಲತೆಯ ಮೂಲಕ ಒಂದು ಪ್ರದೇಶದ ಸಂಸ್ಕೃತಿಯನ್ನೆ ಬದಲಿಸಿದ್ದು ಕೆ.ವಿ.ಸುಬ್ಬಣ್ಣ ಅವರ ಮಹತ್ವದ ಸಾಧನೆಯಾಗಿದೆ ಎಂದು ಸುಬ್ಬಣ್ಣ ಅವರ ಒಡನಾಡಿ ತೀರ್ಥಹಳ್ಳಿಯ ಗಂಗಾಧರ್ ಹೇಳಿದರು.<br /> <br /> ಇಲ್ಲಿಗೆ ಸಮೀಪದ ಹೆಗ್ಗೋಡಿನ ನೀನಾಸಂ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆ.ವಿ.ಸುಬ್ಬಣ್ಣ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹಿಡಿದ ಕೆಲಸವನ್ನು ಆದಷ್ಟು ಶೀಘ್ರವಾಗಿ ಮತ್ತು ಅಚ್ಚುಕಟ್ಟಾಗಿ ಮುಗಿಸಬೇಕು ಎಂಬ ತುಡಿತವನ್ನು ಸುಬ್ಬಣ್ಣ ಅವರಲ್ಲಿ ಸದಾ ಕಾಣಬಹುದಿತ್ತು ಎಂದರು.<br /> <br /> `ಹೆಗ್ಗೋಡು ಹಾಗೂ ನೀನಾಸಂನ ಪ್ರತಿ ಚಟುವಟಿಕೆಗಳ ಹಿಂದೆ ಸುಬ್ಬಣ್ಣ ಅವರ ಇರುವಿಕೆಯನ್ನ ಗುರುತಿಸಬಹುದು. ಭೌತಿಕವಾಗಿ ಅವರು ನಮ್ಮ ಜೊತೆ ಇಲ್ಲದೆ ಇದ್ದರೂ ನೀನಾಸಂನ ಮೂಲಕ ಇಂದಿಗೂ ಜೀವಂತವಾಗಿದ್ದಾರೆ' ಎಂದು ಅವರು ಹೇಳಿದರು.<br /> <br /> `ಬದುಕಿನ ಸಣ್ಣಪುಟ್ಟ ಸಂಗತಿಗಳನ್ನು ಅಲಕ್ಷಿಸದೇ ಸೂಕ್ಷ್ಮವಾಗಿ ವಿಶ್ಲೇಷಿಸುವ ಗುಣವನ್ನು ಸುಬ್ಬಣ್ಣ ಹೊಂದಿದ್ದರು. ಅವರ ಈ ದೃಷ್ಟಿಕೋನವೇ ರಂಗ ಭೂಮಿ, ಸಾಹಿತ್ಯ ಸೇರಿದಂತೆ ಹಲವು ರಚನಾತ್ಮಕ ಚಟುವಟಿಕೆಗಳಿಗೆ ದಾರಿಯಾಯಿತು' ಎಂದು ಅಭಿಪ್ರಾಯಪಟ್ಟರು.<br /> <br /> ಲೇಖಕ ಡಾ.ಎಂ.ಎಸ್.ಶ್ರೀರಾಮ್ ಮಾತನಾಡಿ ನಿಷ್ಠುರತೆ, ವಿನಯ, ವಿಶಿಷ್ಟ ಒಳನೋಟ, ಅಂತಕರಣವನ್ನು ತಟ್ಟುವ ಅನುಭವ ದ್ರವ್ಯ ಸುಬ್ಬಣ್ಣ ಅವರ ಕೃತಿ ಹಾಗೂ ಚಿಂತನೆಗಳನ್ನು ಜೀವಂತ ವಾಗಿಟ್ಟಿವೆ ಎಂದು ಹೇಳಿದರು.<br /> <br /> ನೀನಾಸಂನ ಎಚ್.ವಿ.ಚಂದ್ರಶೇಖರ್, ಕೆ.ವಿ.ಅಕ್ಷರ, ಟಿ.ಪಿ.ಅಶೋಕ್, ಲೇಖಕ ಡಿ.ಎಸ್.ನಾಗಭೂಷಣ್, ಕವಯತ್ರಿ ಸವಿತಾ ನಾಗಭೂಷಣ್, ರಂಗಕರ್ಮಿ ಪ್ರಕಾಶ್ ಬೆಳವಾಡಿ, ರೈತ ಮುಖಂಡ ಕಡಿದಾಳು ಶಾಮಣ್ಣ, ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗಡೆ ಹಾಜರಿದ್ದರು .</p>.<p><strong>ಪ್ರೇಮ ಪತ್ರ ಸ್ಪರ್ಧೆ ಮತ್ತು ಸುಬ್ಬಣ್ಣ</strong></p>.<p>ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ನಡೆದ ಹಲವು ಸ್ವಾರಸ್ಯಕರ ಘಟನೆಗಳನ್ನು ಸುಬ್ಬಣ್ಣ ಅವರ ಒಡನಾಡಿ ಗಂಗಾಧರ್ ನೆನಪಿಸಿಕೊಂಡರು.<br /> <br /> ಪ್ರತಿ ವರ್ಷ ಹಾಸ್ಟೆಲ್ ದಿನಾಚರಣೆ ಅಂಗವಾಗಿ ಏರ್ಪಡಿಸುತ್ತಿದ್ದ ಪ್ರೇಮ ಪತ್ರ ಬರೆಯುವ ಸ್ಪರ್ಧೆಯಲ್ಲಿ ಕೆ.ವಿ.ಸುಬ್ಬಣ್ಣ ಅವರಿಗೆ ಪ್ರಥಮ ಬಹುಮಾನ ಬರುತ್ತಿತ್ತಂತೆ. ಒಂದು ವರ್ಷ ಇದನ್ನು ಗಮನಿಸಿದ ಯು.ಆರ್.ಅನಂತಮೂರ್ತಿ , ಯಾವುದಾದರೂ ಹುಡುಗಿ ಈ ಪ್ರೇಮ ಪತ್ರ ಓದಿ ಸುಬ್ಬಣ್ಣ ಅವರನ್ನು ಪ್ರೀತಿಸಿದರೆ ಮಾತ್ರ ನೀವು ಬಹುಮಾನ ನೀಡಿದ್ದು ಸಾರ್ಥಕ ಎಂದು ಪ್ರತಿಕ್ರಿಯಿಸಿದ್ದರಂತೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>