ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಕಲಾ ಮತ್ತು ವಿಜ್ಞಾನ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿ ವಿದ್ಯಾರ್ಥಿಗಳಿಗೂ ಸಹ ಸರ್ಕಾರ ಲ್ಯಾಪ್ಟಾಪ್ಗಳನ್ನು ವಿತರಿಸ ಬೇಕು ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಈ ಕಾಲೇಜುಗಳನ್ನು ಮಹಾರಾಜ ಕಾಲೇಜು, ಸಹ್ಯಾದ್ರಿ ಕಾಲೇಜುಗಳಂತೆ ವಿಶ್ವವಿದ್ಯಾನಿಲಯದ ಘಟಕ ವಿದ್ಯಾಸಂಸ್ಥೆಗಳೆಂದು ಪರಿಗಣಿಸಿದ್ದಾರೆ. ಇದರಿಂದ 1,300 ವಿದ್ಯಾರ್ಥಿಗಳು ಲ್ಯಾಪ್ಟಾಪ್ಗಳಿಂದ ವಂಚಿತರಾಗುತ್ತಿದ್ದಾರೆ. ಎಲ್ಲ ಪ್ರಥಮ ದರ್ಜೆ ಕಾಲೇಜುಗಳ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ವಿತರಿಸಿದಂತೆ ಘಟಕ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಉನ್ನತ ಶಿಕ್ಷಣ ಸಚಿವರು ಈ ತಾರತಮ್ಯದ ಕುರಿತು ಗಮನ ಹರಿಸಬೇಕು. ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ಯೋಜನೆಗಳನ್ನು ಬಜೆಟ್ನಲ್ಲಿ ಘೋಷಿಸಬೇಕು ಎಂದು ಒತ್ತಾಯ ಮಾಡಿದರು.
ಎಬಿವಿಪಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಪ್ಪುಪಾಟೀಲ್, ಶಶಿಕುಮಾರ್, ರಾಮೇಗೌಡ, ಜಗದೀಶ್, ಕುಮಾರಸ್ವಾಮಿ, ಗುರು, ಸಂದೀಪ್, ಶಿವಪ್ರಸಾದ್, ವಿಜಯ್, ಹರೀಶ್, ಶ್ರೀಲಕ್ಷ್ಮಿ, ಅಂಕಿತಾ, ಅನುಪಮ, ಮನಸ್ವಿ, ರಕ್ಷಿತಾ, ಹಂಸ, ಹರ್ಷಿತ ಸಂಪತ್ಕುಮಾರ್, ಜನಾರ್ದನ್, ನಾಗರಾಜ್, ಮನೋಜ್ ಪ್ರತಿಭಟನೆಯಲ್ಲಿ ಇದ್ದರು.