‘ನಾನು ತಹಶೀಲ್ದಾರ್ ಮೋಹನ್’ ಎಂದು ಮಧ್ಯವರ್ತಿಯಾದ ಶಿವಕುಮಾರ್, ರಂಗನಾಥ್ ಅವರ ಜತೆ ಸಂಭಾಷಣೆ ನಡೆಸಿದ್ದರು ಎನ್ನಲಾಗುತ್ತಿದೆ. ಪ್ರಕರಣ ಸಂಬಂಧ ಎಸಿಬಿ ಎದುರು ತಹಶೀಲ್ದಾರ್ ಹೇಳಿಕೆ ನೀಡಬೇಕಿದೆ. ಹೇಳಿಕೆ ನೀಡಲು ಗುರುವಾರ ತಹಶೀಲ್ದಾರ್ ಬರಬೇಕಿತ್ತು. ಆದರೆ ಅವರು ಹಾಜರಾಗಲಿಲ್ಲ. ಶುಕ್ರವಾರವೂ ಹಾಜರಾಗಿಲ್ಲ. ಅಲ್ಲದೆ ಅವರ ಮೊಬೈಲ್ ಸ್ವಿಚ್ ಆಪ್ ಆಗಿದೆ. ಇದು ಸಾರ್ವಜನಿಕ ಮತ್ತು ಅಧಿಕಾರಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.