<p><strong>ಗುಬ್ಬಿ: </strong>ತಾಲ್ಲೂಕಿನ ನಿಟ್ಟೂರು ಗ್ರಾಮದ ಬೆಸ್ಕಾಂ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿ<br />ಯರ್(ಎಇಇ) ಮಾಯಕಣ್ಣ ನಾಯಕ್ ಅವರು ಹಾಲಿನ ಶಿಥಿಲೀಕರಣ ಘಟಕಕ್ಕೆ ವಿದ್ಯುತ್ ಸಂರ್ಪಕದ ಮಂಜೂರಾತಿ ನೀಡಲು ₹ 4,000 ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ(ಎ.ಸಿ.ಬಿ.) ಬಲೆಗೆ ಬಿದ್ದಿದ್ದಾರೆ.</p>.<p>ಮದನಘಟ್ಟದಲ್ಲಿ ದಾಕ್ಷಾಯಿಣಮ್ಮ ಎಂಬುವರು ಹಾಲಿನ ಶಿಥಿಲೀಕರಣ ಘಟಕ ಆರಂಭಿಸುತ್ತಿದ್ದಾರೆ. ಅದಕ್ಕೆ 38 ಎಚ್.ಪಿ. ಸಾಮರ್ಥ್ಯದ ವಿದ್ಯುತ್ ಸಂಪರ್ಕ ಕಲ್ಪಿಸುವ ಗುತ್ತಿಗೆಯನ್ನು ಕಡಬ ಹೋಬಳಿಯ ತೊಗರಿಘಟ್ಟದ ಬಿ.ಸಿದ್ದೇಶ್ವರ ಅವರಿಗೆ ನೀಡಿದ್ದರು.</p>.<p>ಸಿದ್ದೇಶ್ವರ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದಾಗ, ಎ.ಇ.ಇ. ಅವರು ₹ 10,000ಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲ ಕಂತಿನಲ್ಲಿ ₹ 4000 ಪಡಿದಿದ್ದರು. ಉಳಿದ ಮೊತ್ತದಲ್ಲಿ ಮತ್ತೆ ₹ 4,000 ಅನ್ನು ಶುಕ್ರವಾರ ಪಡೆಯುತ್ತಿದ್ದಾಗ, ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು.</p>.<p>ಡಿ.ವೈ.ಎಸ್.ಪಿ. ಉಮಾಶಂಕರ್, ಪಿಎಸ್ಐ ರಮೇಶ್, ಸಿಬ್ಬಂದಿಗಳಾದ ಚಂದ್ರಶೇಖರ್, ನರಸಿಂಹರಾಜು, ಇದ್ದರು ಎಂದು ಎ.ಸಿ.ಬಿ. ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಬ್ಬಿ: </strong>ತಾಲ್ಲೂಕಿನ ನಿಟ್ಟೂರು ಗ್ರಾಮದ ಬೆಸ್ಕಾಂ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿ<br />ಯರ್(ಎಇಇ) ಮಾಯಕಣ್ಣ ನಾಯಕ್ ಅವರು ಹಾಲಿನ ಶಿಥಿಲೀಕರಣ ಘಟಕಕ್ಕೆ ವಿದ್ಯುತ್ ಸಂರ್ಪಕದ ಮಂಜೂರಾತಿ ನೀಡಲು ₹ 4,000 ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ(ಎ.ಸಿ.ಬಿ.) ಬಲೆಗೆ ಬಿದ್ದಿದ್ದಾರೆ.</p>.<p>ಮದನಘಟ್ಟದಲ್ಲಿ ದಾಕ್ಷಾಯಿಣಮ್ಮ ಎಂಬುವರು ಹಾಲಿನ ಶಿಥಿಲೀಕರಣ ಘಟಕ ಆರಂಭಿಸುತ್ತಿದ್ದಾರೆ. ಅದಕ್ಕೆ 38 ಎಚ್.ಪಿ. ಸಾಮರ್ಥ್ಯದ ವಿದ್ಯುತ್ ಸಂಪರ್ಕ ಕಲ್ಪಿಸುವ ಗುತ್ತಿಗೆಯನ್ನು ಕಡಬ ಹೋಬಳಿಯ ತೊಗರಿಘಟ್ಟದ ಬಿ.ಸಿದ್ದೇಶ್ವರ ಅವರಿಗೆ ನೀಡಿದ್ದರು.</p>.<p>ಸಿದ್ದೇಶ್ವರ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದಾಗ, ಎ.ಇ.ಇ. ಅವರು ₹ 10,000ಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲ ಕಂತಿನಲ್ಲಿ ₹ 4000 ಪಡಿದಿದ್ದರು. ಉಳಿದ ಮೊತ್ತದಲ್ಲಿ ಮತ್ತೆ ₹ 4,000 ಅನ್ನು ಶುಕ್ರವಾರ ಪಡೆಯುತ್ತಿದ್ದಾಗ, ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು.</p>.<p>ಡಿ.ವೈ.ಎಸ್.ಪಿ. ಉಮಾಶಂಕರ್, ಪಿಎಸ್ಐ ರಮೇಶ್, ಸಿಬ್ಬಂದಿಗಳಾದ ಚಂದ್ರಶೇಖರ್, ನರಸಿಂಹರಾಜು, ಇದ್ದರು ಎಂದು ಎ.ಸಿ.ಬಿ. ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>