ಉಮೇಶ್ ಶನಿವಾರ ಸಹ ಬೆಳಿಗ್ಗೆ 7.40ಕ್ಕೆ ಬರಬೇಕಿದ್ದು 8.40ಕ್ಕೆ ಶಾಲೆಗೆ ಬಂದಿದ್ದಾರೆ. ಆಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಾಂತರಾಜು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪಾತಯ್ಯ, ಗ್ರಾಮಸ್ಥರಾದ ಗಂಗಾಧರ್, ಜಯಣ್ಣ, ಗಿರೀಶ, ಕೃಷ್ಣಮೂರ್ತಿ, ಭದ್ರಣ್ಣ, ಮಂಜುನಾಥ್ ಮುಂತಾದವರು ಅವರನ್ನು ಶಾಲೆಯ ಒಳಗೆ ಹೋಗದಂತೆ ಕೆಲಕಾಲ ತಡೆದು ನಿಲ್ಲಿಸಿದರು.