ಈ ಗೌರವ ನಮ್ಮ ಜಿಲ್ಲೆ, ನಮ್ಮ ನಾಡಿಗೆ ಸಂದ ಗೌರವ ಎಂದು ಭಾವಿಸುತ್ತೇನೆ. ಸೇನೆ ಸೇರಬೇಕು ಎಂಬ ಉತ್ಕಟ ಬಯಕೆಇತ್ತು. ಹಾಗೆಯೇ ಸೇನೆ ಸೇರಿದೆ. ಭಯೋತ್ಪಾದಕರ ವಿರುದ್ಧ ಉದ್ದಕ್ಕೂ ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಹೋರಾಟ ಮಾಡಿದ್ದೇನೆ’ ‘ಸೇನೆಯಲ್ಲಿ ನಾನು ಮಾಡಿದ, ಮಾಡುತ್ತಿರುವ ಹೋರಾಟ ಗುರುತಿಸಿ ಶೌರ್ಯ ಸಾಧನೆಗೆ ನೀಡುವ ಸೇನಾ ಮೆಡಲ್ ಗೌರವ ಪ್ರದಾನ ಮಾಡಲಾಗುತ್ತಿದೆ’ ಎಂದು ಹೇಳಿದರು.