<p><strong>ತುಮಕೂರು:</strong> ಏಲಕ್ಕಿ ಬಾಳೆಹಣ್ಣು ಸೇರಿದಂತೆ ಹಣ್ಣುಗಳು ದುಬಾರಿಯಾಗಿದ್ದು, ಟೊಮೆಟೊ ಗಗನಮುಖಿಯಾಗಿದೆ. ಸಕ್ಕರೆ, ಬೇಳೆ, ಧಾನ್ಯಗಳ ಬೆಲೆ ಹೆಚ್ಚಳವಾಗಿದ್ದರೆ, ಕೋಳಿ ಮಾಂಸ, ಮೀನು ತುಸು ಅಗ್ಗವಾಗಿದೆ.</p>.<p>ಎರಡು ವಾರದಿಂದ ಟೊಮೆಟೊ ಬೆಲೆ ಆಕಾಶದತ್ತ ಮುಖ ಮಾಡಿದ್ದು, ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಕೆ.ಜಿ ₹30–35ಕ್ಕೆ ಏರಿಕೆಯಾಗಿದೆ. ಚಿಲ್ಲರೆಯಾಗಿ ₹50ರ ವರೆಗೂ ಮಾರಾಟ ಮಾಡಲಾಗುತ್ತಿದೆ. ಕಳೆದ ಹಲವು ತಿಂಗಳಿಂದ ಚೇತರಿಕೆ ಕಾಣದ ಟೊಮೆಟೊ ಈಗ ಒಮ್ಮೆಲೆ ದುಪ್ಪಟ್ಟಾಗಿದೆ. ಬೆಳೆ ಇಲ್ಲದೆ ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.</p>.<p>ದುಬಾರಿಯಾಗಿದ್ದ ಹಸಿರು ಮೆಣಸಿನಕಾಯಿ, ಕ್ಯಾಪ್ಸಿಕಂ ದರ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಗಡ್ಡೆಕೋಸು, ಬೆಳ್ಳುಳ್ಳಿ, ಬದನೆಕಾಯಿ, ಎಲೆಕೋಸು, ಹೂಕೋಸು ಕೊಂಚ ಅಗ್ಗವಾಗಿದೆ. ಬೀನ್ಸ್, ಬೀಟ್ರೂಟ್, ತೊಂಡೆಕಾಯಿ, ಹಾಗಲಕಾಯಿ ಧಾರಣೆ ಏರಿಕೆಯಾಗಿದೆ.</p>.<p>ಸೊಪ್ಪು ಚೇತರಿಕೆ: ಸೊಪ್ಪು ದರ ಅಲ್ಪ ಪ್ರಮಾಣದಲ್ಲಿ ಚೇತರಿಸಿಕೊಂಡಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹25–30, ಸಬ್ಬಕ್ಕಿ ಕೆ.ಜಿ ₹20–25, ಮೆಂತ್ಯ ಸೊಪ್ಪು ಕೆ.ಜಿ ₹20–25, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಏರಿಕೆಯಾಗಿದೆ.</p>.<p>ಹಣ್ಣು ದುಬಾರಿ: ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಹಣ್ಣುಗಳು ದುಬಾರಿಯಾಗಿದ್ದು, ಏಲಕ್ಕಿ ಬಾಳೆಹಣ್ಣು ಕೆ.ಜಿ ₹100ರ ಗಡಿಗೆ ಸಮೀಪಿಸಿದೆ. ಕಿತ್ತಳೆ, ಪಪ್ಪಾಯ, ಡ್ರ್ಯಾಗನ್ ಫ್ರೂಟ್ ಬೆಲೆ ಹೆಚ್ಚಳವಾಗಿದೆ. ದಾಳಿಂಬೆ, ಸೀಬೆ, ಕಲ್ಲಂಗಡಿ, ಸೀತಾಫಲ ಕಡಿಮೆಯಾಗಿದೆ.</p>.<p>ಅಡುಗೆ ಎಣ್ಣೆ: ಅಡುಗೆ ಎಣ್ಣೆ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಗೋಲ್ಡ್ವಿನ್ನರ್ ಕೆ.ಜಿ ₹144–146, ಪಾಮಾಯಿಲ್ ಕೆ.ಜಿ ₹114–115, ಕಡಲೆಕಾಯಿ ಎಣ್ಣೆ ಕೆ.ಜಿ ₹160–165ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ.</p>.<p>ಬೇಳೆ ಧಾನ್ಯ ಏರಿಕೆ: ಆಷಾಢ ಮಾಸದಲ್ಲಿ ಅಲ್ಪ ಕಡಿಮೆಯಾಗಿದ್ದ ಬೇಳೆ, ಧಾನ್ಯ, ಗೋಧಿ, ಸಕ್ಕರೆ ಧಾರಣೆ ಶ್ರಾವಣದಲ್ಲಿ ಏರಿಕೆಯತ್ತ ಮುಖ ಮಾಡಿದೆ. ಸಕ್ಕರೆ ಕೆ.ಜಿ ₹43–45ಕ್ಕೆ ಜಿಗಿದಿದೆ. ಬಟಾಣಿ ಒಮ್ಮೆಲೆ ಕೆ.ಜಿಗೆ ₹25 ಏರಿಕೆಯಾಗಿದ್ದು, ₹140–145ಕ್ಕೆ ತಲುಪಿದೆ.</p>.<p>ಮಸಾಲೆ ಪದಾರ್ಥ: ಮೆಣಸಿನಕಾಯಿ, ಮೆಣಸು ತುಸು ಇಳಿದಿದ್ದರೆ, ಜೀರಿಗೆ, ಏಲಕ್ಕಿ ಕೊಂಚ ಹೆಚ್ಚಳವಾಗಿದೆ. ಒಣ ಹಣ್ಣುಗಳು ಆಕಾಶದತ್ತ ಮುಖ ಮಾಡಿವೆ.</p>.<p>ಧನ್ಯ ಕೆ.ಜಿ ₹110–125, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹200–220, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹160–170, ಹುಣಸೆಹಣ್ಣು ₹150–180, ಬೆಲ್ಲ ಕೆ.ಜಿ ₹50–55, ಕಾಳುಮೆಣಸು ಕೆ.ಜಿ ₹720–750, ಜೀರಿಗೆ ಕೆ.ಜಿ ₹250–260, ಚಕ್ಕೆ ಕೆ.ಜಿ ₹240–250, ಲವಂಗ ಕೆ.ಜಿ ₹800–820, ಗುಣಮಟ್ಟದ ಗಸಗಸೆ ಕೆ.ಜಿ ₹1,300–1,600, ಏಲಕ್ಕಿ ಕೆ.ಜಿ ₹3,200–3,300, ಬಾದಾಮಿ ಕೆ.ಜಿ ₹760–800, ಗೋಡಂಬಿ ಕೆ.ಜಿ ₹750–950, ಒಣದ್ರಾಕ್ಷಿ ಕೆ.ಜಿ ₹480–500ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.</p>.<p>ಕೋಳಿ ಇಳಿಕೆ: ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಕೋಳಿ ಮಾಂಸದ ಬೆಲೆ ಕಡಿಮೆಯಾಗುತ್ತಿದ್ದು, ಬ್ರಾಯ್ಲರ್ ಕೋಳಿ ಕೆ.ಜಿ ₹120, ರೆಡಿ ಚಿಕನ್ ಕೆ.ಜಿ ₹180, ಸ್ಕಿನ್ಲೆಸ್ ಕೆ.ಜಿ ₹200, ಮೊಟ್ಟೆಕೋಳಿ (ಫಾರಂ) ಕೆ.ಜಿ ₹110ಕ್ಕೆ ಇಳಿದಿದೆ.</p>.<p>ಮೀನು: ಮೀನಿನ ಬೆಲೆಯಲ್ಲಿ ಅಲ್ಪ ಏರಿಳಿತವಾಗಿದೆ. ಬಂಗುಡೆ ಕೆ.ಜಿ ₹460, ಬೂತಾಯಿ ₹320, ಬೊಳಿಂಜರ್ ₹250, ಅಂಜಲ್ ಕೆ.ಜಿ ₹1,380, ಬಿಳಿಮಾಂಜಿ ಕೆ.ಜಿ 1,440, ಕಪ್ಪುಮಾಂಜಿ ₹1,000, ಇಂಡಿಯನ್ ಸಾಲ್ಮನ್ ₹1,060, ಸೀಗಡಿ ಕೆ.ಜಿ ₹500–680, ಏಡಿ ಕೆ.ಜಿ ₹610ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ಏಲಕ್ಕಿ ಬಾಳೆಹಣ್ಣು ಸೇರಿದಂತೆ ಹಣ್ಣುಗಳು ದುಬಾರಿಯಾಗಿದ್ದು, ಟೊಮೆಟೊ ಗಗನಮುಖಿಯಾಗಿದೆ. ಸಕ್ಕರೆ, ಬೇಳೆ, ಧಾನ್ಯಗಳ ಬೆಲೆ ಹೆಚ್ಚಳವಾಗಿದ್ದರೆ, ಕೋಳಿ ಮಾಂಸ, ಮೀನು ತುಸು ಅಗ್ಗವಾಗಿದೆ.</p>.<p>ಎರಡು ವಾರದಿಂದ ಟೊಮೆಟೊ ಬೆಲೆ ಆಕಾಶದತ್ತ ಮುಖ ಮಾಡಿದ್ದು, ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಕೆ.ಜಿ ₹30–35ಕ್ಕೆ ಏರಿಕೆಯಾಗಿದೆ. ಚಿಲ್ಲರೆಯಾಗಿ ₹50ರ ವರೆಗೂ ಮಾರಾಟ ಮಾಡಲಾಗುತ್ತಿದೆ. ಕಳೆದ ಹಲವು ತಿಂಗಳಿಂದ ಚೇತರಿಕೆ ಕಾಣದ ಟೊಮೆಟೊ ಈಗ ಒಮ್ಮೆಲೆ ದುಪ್ಪಟ್ಟಾಗಿದೆ. ಬೆಳೆ ಇಲ್ಲದೆ ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.</p>.<p>ದುಬಾರಿಯಾಗಿದ್ದ ಹಸಿರು ಮೆಣಸಿನಕಾಯಿ, ಕ್ಯಾಪ್ಸಿಕಂ ದರ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಗಡ್ಡೆಕೋಸು, ಬೆಳ್ಳುಳ್ಳಿ, ಬದನೆಕಾಯಿ, ಎಲೆಕೋಸು, ಹೂಕೋಸು ಕೊಂಚ ಅಗ್ಗವಾಗಿದೆ. ಬೀನ್ಸ್, ಬೀಟ್ರೂಟ್, ತೊಂಡೆಕಾಯಿ, ಹಾಗಲಕಾಯಿ ಧಾರಣೆ ಏರಿಕೆಯಾಗಿದೆ.</p>.<p>ಸೊಪ್ಪು ಚೇತರಿಕೆ: ಸೊಪ್ಪು ದರ ಅಲ್ಪ ಪ್ರಮಾಣದಲ್ಲಿ ಚೇತರಿಸಿಕೊಂಡಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹25–30, ಸಬ್ಬಕ್ಕಿ ಕೆ.ಜಿ ₹20–25, ಮೆಂತ್ಯ ಸೊಪ್ಪು ಕೆ.ಜಿ ₹20–25, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಏರಿಕೆಯಾಗಿದೆ.</p>.<p>ಹಣ್ಣು ದುಬಾರಿ: ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಹಣ್ಣುಗಳು ದುಬಾರಿಯಾಗಿದ್ದು, ಏಲಕ್ಕಿ ಬಾಳೆಹಣ್ಣು ಕೆ.ಜಿ ₹100ರ ಗಡಿಗೆ ಸಮೀಪಿಸಿದೆ. ಕಿತ್ತಳೆ, ಪಪ್ಪಾಯ, ಡ್ರ್ಯಾಗನ್ ಫ್ರೂಟ್ ಬೆಲೆ ಹೆಚ್ಚಳವಾಗಿದೆ. ದಾಳಿಂಬೆ, ಸೀಬೆ, ಕಲ್ಲಂಗಡಿ, ಸೀತಾಫಲ ಕಡಿಮೆಯಾಗಿದೆ.</p>.<p>ಅಡುಗೆ ಎಣ್ಣೆ: ಅಡುಗೆ ಎಣ್ಣೆ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಗೋಲ್ಡ್ವಿನ್ನರ್ ಕೆ.ಜಿ ₹144–146, ಪಾಮಾಯಿಲ್ ಕೆ.ಜಿ ₹114–115, ಕಡಲೆಕಾಯಿ ಎಣ್ಣೆ ಕೆ.ಜಿ ₹160–165ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ.</p>.<p>ಬೇಳೆ ಧಾನ್ಯ ಏರಿಕೆ: ಆಷಾಢ ಮಾಸದಲ್ಲಿ ಅಲ್ಪ ಕಡಿಮೆಯಾಗಿದ್ದ ಬೇಳೆ, ಧಾನ್ಯ, ಗೋಧಿ, ಸಕ್ಕರೆ ಧಾರಣೆ ಶ್ರಾವಣದಲ್ಲಿ ಏರಿಕೆಯತ್ತ ಮುಖ ಮಾಡಿದೆ. ಸಕ್ಕರೆ ಕೆ.ಜಿ ₹43–45ಕ್ಕೆ ಜಿಗಿದಿದೆ. ಬಟಾಣಿ ಒಮ್ಮೆಲೆ ಕೆ.ಜಿಗೆ ₹25 ಏರಿಕೆಯಾಗಿದ್ದು, ₹140–145ಕ್ಕೆ ತಲುಪಿದೆ.</p>.<p>ಮಸಾಲೆ ಪದಾರ್ಥ: ಮೆಣಸಿನಕಾಯಿ, ಮೆಣಸು ತುಸು ಇಳಿದಿದ್ದರೆ, ಜೀರಿಗೆ, ಏಲಕ್ಕಿ ಕೊಂಚ ಹೆಚ್ಚಳವಾಗಿದೆ. ಒಣ ಹಣ್ಣುಗಳು ಆಕಾಶದತ್ತ ಮುಖ ಮಾಡಿವೆ.</p>.<p>ಧನ್ಯ ಕೆ.ಜಿ ₹110–125, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹200–220, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹160–170, ಹುಣಸೆಹಣ್ಣು ₹150–180, ಬೆಲ್ಲ ಕೆ.ಜಿ ₹50–55, ಕಾಳುಮೆಣಸು ಕೆ.ಜಿ ₹720–750, ಜೀರಿಗೆ ಕೆ.ಜಿ ₹250–260, ಚಕ್ಕೆ ಕೆ.ಜಿ ₹240–250, ಲವಂಗ ಕೆ.ಜಿ ₹800–820, ಗುಣಮಟ್ಟದ ಗಸಗಸೆ ಕೆ.ಜಿ ₹1,300–1,600, ಏಲಕ್ಕಿ ಕೆ.ಜಿ ₹3,200–3,300, ಬಾದಾಮಿ ಕೆ.ಜಿ ₹760–800, ಗೋಡಂಬಿ ಕೆ.ಜಿ ₹750–950, ಒಣದ್ರಾಕ್ಷಿ ಕೆ.ಜಿ ₹480–500ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.</p>.<p>ಕೋಳಿ ಇಳಿಕೆ: ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಕೋಳಿ ಮಾಂಸದ ಬೆಲೆ ಕಡಿಮೆಯಾಗುತ್ತಿದ್ದು, ಬ್ರಾಯ್ಲರ್ ಕೋಳಿ ಕೆ.ಜಿ ₹120, ರೆಡಿ ಚಿಕನ್ ಕೆ.ಜಿ ₹180, ಸ್ಕಿನ್ಲೆಸ್ ಕೆ.ಜಿ ₹200, ಮೊಟ್ಟೆಕೋಳಿ (ಫಾರಂ) ಕೆ.ಜಿ ₹110ಕ್ಕೆ ಇಳಿದಿದೆ.</p>.<p>ಮೀನು: ಮೀನಿನ ಬೆಲೆಯಲ್ಲಿ ಅಲ್ಪ ಏರಿಳಿತವಾಗಿದೆ. ಬಂಗುಡೆ ಕೆ.ಜಿ ₹460, ಬೂತಾಯಿ ₹320, ಬೊಳಿಂಜರ್ ₹250, ಅಂಜಲ್ ಕೆ.ಜಿ ₹1,380, ಬಿಳಿಮಾಂಜಿ ಕೆ.ಜಿ 1,440, ಕಪ್ಪುಮಾಂಜಿ ₹1,000, ಇಂಡಿಯನ್ ಸಾಲ್ಮನ್ ₹1,060, ಸೀಗಡಿ ಕೆ.ಜಿ ₹500–680, ಏಡಿ ಕೆ.ಜಿ ₹610ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>