<p><strong>ತುಮಕೂರು</strong>: ಪ್ರೊ.ಬಿ.ಕೃಷ್ಣಪ್ಪ ಗುಡಿಸಲುಗಳಲ್ಲಿ ಹೋರಾಟದ ಹಣತೆ ಹಚ್ಚಿದವರು ಎಂದು ಸ್ಲಂ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ ಹೇಳಿದರು.</p>.<p>ನಗರದಲ್ಲಿ ಸೋಮವಾರ ಸ್ಲಂ ಜನಾಂದೋಲನ ಕರ್ನಾಟಕ, ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರೊ.ಬಿ.ಕೃಷ್ಣಪ್ಪ ಅವರ 87ನೇ ವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ದಲಿತ ಚಳವಳಿ ಹುಟ್ಟು ಹಾಕುವಲ್ಲಿ ಕೃಷ್ಣಪ್ಪ ಶ್ರಮಿಸಿದ್ದರು. ಬಿ.ಆರ್.ಅಂಬೇಡ್ಕರ್ ಚಳವಳಿಯ ನೊಗ ಹೊತ್ತು, ಚಳವಳಿಯನ್ನು ಪ್ರತಿ ಮನೆಗೆ ತಲುಪಿಸಿದರು. ದೇವದಾಸಿ ಪದ್ಧತಿ, ಬೆತ್ತಲೆ ಸೇವೆ, ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆ ಅಟ್ಟಹಾಸ ಮೆರೆಯುತ್ತಿದ್ದ ಸಮಯದಲ್ಲಿ ಹೋರಾಟ ಕಟ್ಟಿದರು ಎಂದರು.</p>.<p>ಸ್ಲಂ ಸಮಿತಿ ಪದಾಧಿಕಾರಿಗಳಾದ ಅರುಣ್, ಶಂಕ್ರಯ್ಯ, ಕಣ್ಣನ್, ಕೃಷ್ಣಮೂರ್ತಿ, ಜಾಬೀರ್ ಖಾನ್, ತಿರುಮಲಯ್ಯ, ಕೆಂಪಣ್ಣ, ದೊಡ್ಡರಂಗಯ್ಯ, ಶಾರದಮ್ಮ, ಮಂಗಳಮ್ಮ, ಪೂರ್ಣಿಮಾ, ವಸಂತಮ್ಮ, ಸಂಧ್ಯಾ, ಹನುಮಕ್ಕ, ರತ್ನಮ್ಮ, ಲಕ್ಷ್ಮಮ್ಮ, ಶಂಕರೇಗೌಡ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಪ್ರೊ.ಬಿ.ಕೃಷ್ಣಪ್ಪ ಗುಡಿಸಲುಗಳಲ್ಲಿ ಹೋರಾಟದ ಹಣತೆ ಹಚ್ಚಿದವರು ಎಂದು ಸ್ಲಂ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ ಹೇಳಿದರು.</p>.<p>ನಗರದಲ್ಲಿ ಸೋಮವಾರ ಸ್ಲಂ ಜನಾಂದೋಲನ ಕರ್ನಾಟಕ, ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರೊ.ಬಿ.ಕೃಷ್ಣಪ್ಪ ಅವರ 87ನೇ ವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ದಲಿತ ಚಳವಳಿ ಹುಟ್ಟು ಹಾಕುವಲ್ಲಿ ಕೃಷ್ಣಪ್ಪ ಶ್ರಮಿಸಿದ್ದರು. ಬಿ.ಆರ್.ಅಂಬೇಡ್ಕರ್ ಚಳವಳಿಯ ನೊಗ ಹೊತ್ತು, ಚಳವಳಿಯನ್ನು ಪ್ರತಿ ಮನೆಗೆ ತಲುಪಿಸಿದರು. ದೇವದಾಸಿ ಪದ್ಧತಿ, ಬೆತ್ತಲೆ ಸೇವೆ, ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆ ಅಟ್ಟಹಾಸ ಮೆರೆಯುತ್ತಿದ್ದ ಸಮಯದಲ್ಲಿ ಹೋರಾಟ ಕಟ್ಟಿದರು ಎಂದರು.</p>.<p>ಸ್ಲಂ ಸಮಿತಿ ಪದಾಧಿಕಾರಿಗಳಾದ ಅರುಣ್, ಶಂಕ್ರಯ್ಯ, ಕಣ್ಣನ್, ಕೃಷ್ಣಮೂರ್ತಿ, ಜಾಬೀರ್ ಖಾನ್, ತಿರುಮಲಯ್ಯ, ಕೆಂಪಣ್ಣ, ದೊಡ್ಡರಂಗಯ್ಯ, ಶಾರದಮ್ಮ, ಮಂಗಳಮ್ಮ, ಪೂರ್ಣಿಮಾ, ವಸಂತಮ್ಮ, ಸಂಧ್ಯಾ, ಹನುಮಕ್ಕ, ರತ್ನಮ್ಮ, ಲಕ್ಷ್ಮಮ್ಮ, ಶಂಕರೇಗೌಡ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>