ಸಂವಿಧಾನ ಬದಲಾಯಿಸಲು ಮುಂದಾದವರು ಮೀಸಲಾತಿ ವರ್ಗೀಕರಣದ ಪರವಾಗಿ ಇರುತ್ತಾರಾ? ಸಂವಿಧಾನ ಉಳಿದರೆ ತಾನೇ ವರ್ಗೀಕರಣ ಸಾಧ್ಯವಾಗಲಿದೆ? ಸಮುದಾಯದ ಮಕ್ಕಳು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರ ಮಾದಿಗರ ಸೌಲಭ್ಯಗಳಿಗೆ ಕತ್ತರಿ ಹಾಕುತ್ತಿದೆ. ಎಲ್ಲ ಕ್ಷೇತ್ರಗಳನ್ನು ಖಾಸಗೀಕರಣ ಮಾಡಿದ್ದು, ಮೀಸಲಾತಿಯ ಪ್ರಶ್ನೆ ಇಲ್ಲದಂತೆ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.