ಜನರಿಂದ ಅಹವಾಲು ಬಂದ ಕಡೆಯೆಲ್ಲ ಬೋನು ಅಳವಡಿಸಿ ಚಿರತೆಯನ್ನು ಸೆರೆ ಹಿಡಿಯುವುದರಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಈಚೆಗೆ ಎರಡು ತಿಂಗಳ ಅಂತರದಲ್ಲಿ ರಾಜೇಂದ್ರಪುರದಲ್ಲಿ ಎರಡು, ಉಜ್ಜನಿ, ಹುನಗನಹಳ್ಳಿ, ಕೆ. ಹೊನ್ನಮಾಚನಹಳ್ಳಿ, ಸಿದ್ದಯ್ಯನಕೆರೆ ಪಾಳ್ಯ, ಹಾಗೂ ನಾಗತಿಹಳ್ಳಿಯ ಭಾಗಗಳಲ್ಲಿ ತಲಾ ಒಂದು ಚಿರತೆ ಸೆರೆ ಹಿಡಿದು ದೂರದ ರಕ್ಷಿತಾರಣ್ಯಗಳಲ್ಲಿ ಬಿಟ್ಟಿರುವುದಾಗಿ ಉಪ ವಲಯ ಅರಣ್ಯಾಧಿಕಾರಿ ಮಹೇಶ್ ಹೇಳುತ್ತಾರೆ.