ತಿಪಟೂರು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿರುವ ಎಸ್.ಎನ್. ಶಿವಕುಮಾರ್ ಅಂಡ್ ಸನ್ ಎಂಬ ಕೊಬ್ಬರಿ ಅಂಗಡಿಯಲ್ಲಿ ₹ 2.20 ಲಕ್ಷ ನಗದು ಹಾಗೂ ಕಬ್ಬಿಣದ ಪೆಟ್ಟಿಗೆಯನ್ನು ಕಳವು ಮಾಡಲಾಗಿದೆ.
ಈ ಸಂಬಂಧ ಅಂಗಡಿ ಮಾಲೀಕ ಎಸ್.ಎನ್. ಶಿವಕುಮಾರ್ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ದುಷ್ಕರ್ಮಿಗಳ ಪತ್ತೆಗಾಗಿ ತುಮಕೂರಿನಿಂದ ಶ್ವಾನದಳ ಕರೆಸಲಾಗಿದೆ. ನಗರ ಠಾಣೆಯ ಸಿಪಿಐ ಶಿವಕುಮಾರ್ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.