ತುಮಕೂರಿನಲ್ಲಿ 6 ಮಂದಿ: ಶ್ರೀನಗರದ 55 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. ಬಿಎಂಟಿಸಿ ಚಾಲಕರಾಗಿದ್ದು, ಕೆಮ್ಮಿನ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಮಂಗಳವಾರ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ಪ್ರವಾಸ ಕೈಗೊಂಡಿದ್ದ ಚಿಕ್ಕಪೇಟೆ ಬಾಲಾಜಿ ರಸ್ತೆಯ 47 ವರ್ಷದ ಪುರುಷ, 47 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಇನ್ನೂ ತಮಿಳುನಾಡು, ಆಂಧ್ರಪ್ರದೇಶ ಪ್ರವಾಸ ಮಾಡಿದ್ದ ಗಾಂಧಿನಗರದ 33 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಬೆಂಗಳೂರು ದೊಡ್ಡಮಲ್ಲಸಂದ್ರದ 53 ವರ್ಷದ ವ್ಯಕ್ತಿ ತುಮಕೂರಿನಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡಿದ್ದು, ಇವರಿಗೂ ಸೋಂಕು ದೃಢಪಟ್ಟಿದೆ.