ಸೋಂಕು ದೃಢಪಟ್ಟ ಇನ್ನೊಬ್ಬರು ತಿಪಟೂರಿನ 50 ವರ್ಷದ ವ್ಯಕ್ತಿಯಾಗಿದ್ದು, ಇವರು ಇತ್ತೀಚೆಗೆ ಮಹರಾಷ್ಟ್ರದ ನಾಂದೇಡ್ನಿಂದ ಬಂದಿದ್ದರು. ಇವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಭಾನುವಾರದ ಫಲಿತಾಂಶದಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಈ ವ್ಯಕ್ತಿ ವಾಸವಾಗಿದ್ದ ತಿಪಟೂರಿನ ಗಾಂಧಿನಗರದಲ್ಲಿ ನಿರ್ಬಂಧಿತ ವಲಯವನ್ನಾಗಿ ಮಾಡಲಾಗಿದೆ ಎಂದು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮಾಹಿತಿ ನೀಡಿದರು.