<p><strong>ಚಿಕ್ಕನಾಯಕನಹಳ್ಳಿ:</strong> ಪೋಷಕರು ಮಕ್ಕಳಿಗೆ ಆಸ್ತಿ ಮಾಡಿಕೊಟ್ಟರೆ ಜೀವನದಲ್ಲಿ ಸ್ವಾವಲಂಬಿ ಬದುಕು ಎನಿಸಿಕೊಳ್ಳುವುದಿಲ್ಲ. ಉತ್ತಮ ಶಿಕ್ಷಣ ಕೊಡಿಸಿದರಷ್ಟೇ ಸ್ವಾಭಿಮಾನದ ಬದುಕು ಸೃಷ್ಟಿಯಾಗುತ್ತದೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.</p>.<p>ಪಟ್ಟಣದಲ್ಲಿ ಭಾನುವಾರ ವೀರಶೈವ ಲಿಂಗಾಯಿತ ನೌಕರರ ಸಂಘದಿಂದ ಆಯೋಜಿಸಿದ್ದ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.</p>.<p>ಶಿಕ್ಷಣ ದುಬಾರಿಯಾಗಿದ್ದು ಎಂಬಿಬಿಎಸ್ ಓದಿಸಲು ಸುಮಾರು ₹2ಕೋಟಿ, ಎಂಜಿನಿಯರಿಂಗ್ ಓದಿಸಲು ಕನಿಷ್ಠ ₹10ರಿಂದ ₹15ಲಕ್ಷ ಖರ್ಚು ಬರುತ್ತಿದೆ. ಸಮಾಜದಲ್ಲಿ ವೀರಶೈವ ಲಿಂಗಾಯಿತ ಸಮುದಾಯ ಮುಂದುವರೆದ ಸಮಾಜ ಎನಿಸಿಕೊಂಡರು ತೋಟ, ಹೊಲ ನೆಚ್ಚಿಕೊಂಡು ಹಿಂದುಳಿದ ಸಮುದಾಯವಾಗಿದೆ ಎಂದರು.</p>.<p>ಕೊಬ್ಬರಿ ದರ ₹30 ಸಾವಿರ ತಲುಪಿದರೂ ದಾಸ್ತಾನು ಉಳಿಸಿಕೊಂಡ ವರ್ತಕರಿಗೆ ಲಾಭವಾಗಿದೆ ಹೊರತು ತೆಂಗು ಬೆಳೆಗಾರರಿಗೆ ಬೆಲೆ ಸಿಕ್ಕಿಲ್ಲ ಎಂದರು.</p>.<p>ಮಕ್ಕಳ ಶಿಕ್ಷಣ ಬದುಕಿಗೆ ಒತ್ತು ನೀಡದೆ ಆಸ್ತಿ ಮಾಡಲು ಮುಂದಾದಾಗ ಬಂಡವಾಳ ಆಸ್ತಿ ಮೇಲೆರುತ್ತದೆ. ಶಿಕ್ಷಣಕ್ಕೆ ಹಣದ ಕೊರತೆ ಉಂಟಾಗುತ್ತದೆ. ಇದರಿಂದ ಮಕ್ಕಳ ಭವಿಷ್ಯಕ್ಕೆ ಪೆಟ್ಟು ಬೀಳುತ್ತಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. </p>.<p>ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಎಸ್.ಪಿ.ಷಡಾಕ್ಷರಿಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆ ಜತೆಗೆ ಪ್ರತಿನಿತ್ಯ ದಿನಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು.ಲೇಖನ, ರಾಜಕೀಯ, ಆರ್ಥಿಕತೆ ಮತ್ತು ದಿನದ ವಿದ್ಯಮಾನಗಳ ಮಾಹಿತಿ ದೊರಕುತ್ತದೆ. ಇದರಿಂದ ಪ್ರಾಪಂಚಿಕ ಜ್ಞಾನ ಬೆಳೆಯುತ್ತದೆ ಎಂದರು.</p>.<p>ಹಂಪಿ ವಿಶ್ವವಿದ್ಯಾಲಯದ ಪ್ರೊ.ಡಿ.ವಿ.ಪರಶಿವಮೂರ್ತಿ ಮಾತನಾಡಿ, ಶಿಕ್ಷಣ ಸ್ಪರ್ಧಾತ್ಮಕವಾಗಿದೆ. ಸ್ವ ಬೆಳವಣಿಗೆಯಿಂದ ಸಮಾಜದ ಬೆಳವಣಿಗೆವರೆಗೆ ಆಸಕ್ತಿ ವಹಿಸಿದರೆ ಮಕ್ಕಳು ಸಾಧಕರಾಗುತ್ತಾರೆ ಎಂದರು.</p>.<p>ಕುಪ್ಪೂರು ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ, ಕುಪ್ಪೂರು ವೀರಶೈವ ಲಿಂಗಾಯಿತ ನೌಕರರ ಸಂಘದ ಅಧ್ಯಕ್ಷ ಎಸ್.ಸಿ.ದಿನೇಶ್ ಮಾತನಾಡಿದರು.</p>.<p>ಕುಪ್ಪುರು ಗದ್ದಿಗೆ ಮಠದ ವಾಗೀಶ್ ಪಂಡಿತಾರಾಧ್ಯ, ತುಮುಲ್ ನಿರ್ದೇಶಕ ಬಿ.ಎನ್.ಶಿವಪ್ರಕಾಶ್, ರವಿ ಶ್ಯಾಮಿಯಾನ, ಹೊನ್ನೇಬಾಗಿ ಬಸವರಾಜು, ಎನ್.ಶ್ರೀಧರ್, ಸಿ.ಮಲ್ಲಿಕಾರ್ಜುನಸ್ವಾಮಿ, ಅನುಪಮ ನಾಗರಾಜು, ಬೆಸ್ಕಾಂ ಸ್ವಾಮಿ, ಮೇಲನಹಳ್ಳಿ ಗಂಗಾಧರ್, ಮರುಳಸಿದ್ದಯ್ಯ, ರಾಜಕುಮಾರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕನಾಯಕನಹಳ್ಳಿ:</strong> ಪೋಷಕರು ಮಕ್ಕಳಿಗೆ ಆಸ್ತಿ ಮಾಡಿಕೊಟ್ಟರೆ ಜೀವನದಲ್ಲಿ ಸ್ವಾವಲಂಬಿ ಬದುಕು ಎನಿಸಿಕೊಳ್ಳುವುದಿಲ್ಲ. ಉತ್ತಮ ಶಿಕ್ಷಣ ಕೊಡಿಸಿದರಷ್ಟೇ ಸ್ವಾಭಿಮಾನದ ಬದುಕು ಸೃಷ್ಟಿಯಾಗುತ್ತದೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.</p>.<p>ಪಟ್ಟಣದಲ್ಲಿ ಭಾನುವಾರ ವೀರಶೈವ ಲಿಂಗಾಯಿತ ನೌಕರರ ಸಂಘದಿಂದ ಆಯೋಜಿಸಿದ್ದ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.</p>.<p>ಶಿಕ್ಷಣ ದುಬಾರಿಯಾಗಿದ್ದು ಎಂಬಿಬಿಎಸ್ ಓದಿಸಲು ಸುಮಾರು ₹2ಕೋಟಿ, ಎಂಜಿನಿಯರಿಂಗ್ ಓದಿಸಲು ಕನಿಷ್ಠ ₹10ರಿಂದ ₹15ಲಕ್ಷ ಖರ್ಚು ಬರುತ್ತಿದೆ. ಸಮಾಜದಲ್ಲಿ ವೀರಶೈವ ಲಿಂಗಾಯಿತ ಸಮುದಾಯ ಮುಂದುವರೆದ ಸಮಾಜ ಎನಿಸಿಕೊಂಡರು ತೋಟ, ಹೊಲ ನೆಚ್ಚಿಕೊಂಡು ಹಿಂದುಳಿದ ಸಮುದಾಯವಾಗಿದೆ ಎಂದರು.</p>.<p>ಕೊಬ್ಬರಿ ದರ ₹30 ಸಾವಿರ ತಲುಪಿದರೂ ದಾಸ್ತಾನು ಉಳಿಸಿಕೊಂಡ ವರ್ತಕರಿಗೆ ಲಾಭವಾಗಿದೆ ಹೊರತು ತೆಂಗು ಬೆಳೆಗಾರರಿಗೆ ಬೆಲೆ ಸಿಕ್ಕಿಲ್ಲ ಎಂದರು.</p>.<p>ಮಕ್ಕಳ ಶಿಕ್ಷಣ ಬದುಕಿಗೆ ಒತ್ತು ನೀಡದೆ ಆಸ್ತಿ ಮಾಡಲು ಮುಂದಾದಾಗ ಬಂಡವಾಳ ಆಸ್ತಿ ಮೇಲೆರುತ್ತದೆ. ಶಿಕ್ಷಣಕ್ಕೆ ಹಣದ ಕೊರತೆ ಉಂಟಾಗುತ್ತದೆ. ಇದರಿಂದ ಮಕ್ಕಳ ಭವಿಷ್ಯಕ್ಕೆ ಪೆಟ್ಟು ಬೀಳುತ್ತಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. </p>.<p>ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಎಸ್.ಪಿ.ಷಡಾಕ್ಷರಿಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆ ಜತೆಗೆ ಪ್ರತಿನಿತ್ಯ ದಿನಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು.ಲೇಖನ, ರಾಜಕೀಯ, ಆರ್ಥಿಕತೆ ಮತ್ತು ದಿನದ ವಿದ್ಯಮಾನಗಳ ಮಾಹಿತಿ ದೊರಕುತ್ತದೆ. ಇದರಿಂದ ಪ್ರಾಪಂಚಿಕ ಜ್ಞಾನ ಬೆಳೆಯುತ್ತದೆ ಎಂದರು.</p>.<p>ಹಂಪಿ ವಿಶ್ವವಿದ್ಯಾಲಯದ ಪ್ರೊ.ಡಿ.ವಿ.ಪರಶಿವಮೂರ್ತಿ ಮಾತನಾಡಿ, ಶಿಕ್ಷಣ ಸ್ಪರ್ಧಾತ್ಮಕವಾಗಿದೆ. ಸ್ವ ಬೆಳವಣಿಗೆಯಿಂದ ಸಮಾಜದ ಬೆಳವಣಿಗೆವರೆಗೆ ಆಸಕ್ತಿ ವಹಿಸಿದರೆ ಮಕ್ಕಳು ಸಾಧಕರಾಗುತ್ತಾರೆ ಎಂದರು.</p>.<p>ಕುಪ್ಪೂರು ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ, ಕುಪ್ಪೂರು ವೀರಶೈವ ಲಿಂಗಾಯಿತ ನೌಕರರ ಸಂಘದ ಅಧ್ಯಕ್ಷ ಎಸ್.ಸಿ.ದಿನೇಶ್ ಮಾತನಾಡಿದರು.</p>.<p>ಕುಪ್ಪುರು ಗದ್ದಿಗೆ ಮಠದ ವಾಗೀಶ್ ಪಂಡಿತಾರಾಧ್ಯ, ತುಮುಲ್ ನಿರ್ದೇಶಕ ಬಿ.ಎನ್.ಶಿವಪ್ರಕಾಶ್, ರವಿ ಶ್ಯಾಮಿಯಾನ, ಹೊನ್ನೇಬಾಗಿ ಬಸವರಾಜು, ಎನ್.ಶ್ರೀಧರ್, ಸಿ.ಮಲ್ಲಿಕಾರ್ಜುನಸ್ವಾಮಿ, ಅನುಪಮ ನಾಗರಾಜು, ಬೆಸ್ಕಾಂ ಸ್ವಾಮಿ, ಮೇಲನಹಳ್ಳಿ ಗಂಗಾಧರ್, ಮರುಳಸಿದ್ದಯ್ಯ, ರಾಜಕುಮಾರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>