ಕಿಬ್ಬನಹಳ್ಳಿ ಹೋಬಳಿಯ ತಿಮ್ಲಾಪುರ, ಲಕ್ಮಗೊಂಡನಹಳ್ಳಿ, ಬಿಳಿಗೆರೆ, ಕಟ್ಟಿಗೇನಹಳ್ಳಿಯ ರೈತರ ತೋಟದಲ್ಲಿ ತೆಂಗಿನ ಮರಗಳು ನೆಲಕ್ಕುರುಳಿವೆ. ಮಧು ಬಿಳಿಗೆರೆ, ಪ್ರಭುಸ್ವಾಮಿ ತಿಮ್ಲಾಪುರ ಅವರ ತೋಟಗಳಲ್ಲಿ ನೂರಾರು ತೆಂಗಿನಮರಗಳು ಬಿದ್ದು ಹೋಗಿವೆ. ತಾಲ್ಲೂಕಿನ ವಿವಿಧೆಡೆ ದನ ಮತ್ತು ಕುರಿಗಳಿಗೆ ನಿರ್ಮಿಸಿಕೊಂಡಿದ್ದ ಶೆಡ್ಗಳು ಸಹ ಗಾಳಿಯ ರಭಸಕ್ಕೆ ಕಿತ್ತು ಹೋಗಿದ್ದು, ಜನರು ಸರ್ಕಾರ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದಾರೆ.