<p><strong>ತುಮಕೂರು: </strong>ಜಿಲ್ಲಾಡಳಿತವು ಮಧುಗಿರಿ ತಾಲ್ಲೂಕು ಬ್ಯಾಲ್ಯ ಗ್ರಾಮದ ಬಡ ಜನರಿಗೆ ನಿವೇಶನ ನೀಡಲು ಸ್ಪಂದಿಸಿದ ಹಿನ್ನೆಲೆಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸದಸ್ಯರುಅನಿರ್ದಿಷ್ಟ ಕಾಲ ಅಹೋರಾತ್ರಿ ಪ್ರತಿಭಟನೆ ಕೈಬಿಟ್ಟಿದ್ದಾರೆ.</p>.<p>ನಿವೇಶನ ನೀಡುವಂತೆ ಒತ್ತಾಯಿಸಿ ಸಂತ್ರಸ್ತರು ಕಳೆದ 14 ದಿನಗಳಿಂದ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ತುಮಕೂರು ಜಿಲ್ಲಾ ಘಟಕದ ನೇತೃತ್ವದಲ್ಲಿ ಅನಿರ್ದಿಷ್ಟ ಕಾಲ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರು.</p>.<p>ಈ ನಡುವೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ನಿವೇಶನ ರಹಿತರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಲು ದೊಡ್ಡಹೊಸಹಳ್ಳಿ ಗ್ರಾಮದ ಸರ್ವೆ ನಂ.127 ರಲ್ಲಿ 1 ಎಕರೆ 31 ಗುಂಟೆ ಹಾಗೂ ಸರ್ವೆ ನಂ.129 ರಲ್ಲಿ 2 ಎಕರೆ 31 ಗುಂಟೆ ಜಮೀನು ಮಂಜೂರು ಮಾಡಿ ಆದೇಶಿಸಿದ್ದರು. ಆದರೆ, ಈ ಜಾಗದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿದ್ದಲ್ಲದೆ, ತುಂಬಾ ತಗ್ಗಾದ ಪ್ರದೇಶವಾಗಿದೆ ಎಂದು ಸಂತ್ರಸ್ತರು ಒಪ್ಪಲು ನಿರಾಕರಿಸಿದ್ದರು.</p>.<p>ಅಲ್ಲದೆ, ಈ ಜಾಗದಲ್ಲಿ ಚಿರತೆ, ಕರಡಿಗಳ ಕಾಟವಿದೆ. ಮುಖ್ಯವಾಗಿ ಈ ಸರ್ವೆ ನಂ ಪಕ್ಕದಲ್ಲಿ ಈ ಹಿಂದೆ ಇದೇ ಗ್ರಾಮದ ಜನರಿಗೆ ನಿವೇಶನ ನೀಡಿದ್ದು, ಜನರು ಯೋಗ್ಯವಾದ ಸ್ಥಳವಲ್ಲವಾದ್ದರಿಂದ ಈ ಸ್ಥಳಕ್ಕೆ ಹೋಗಿಲ್ಲ ಹಾಗೂ ಈ ಸ್ಥಳ ಬ್ಯಾಲ್ಯ ಗ್ರಾಮದಿಂದ 3 ಕಿ.ಮೀ ದೂರವಿದೆ. ಹಾಗಾಗಿ ಬಡವರಾದ ನಾವು ಹೋಗುವುದಿಲ್ಲ ಎಂದು ಪಟ್ಟು ಹಿಡಿದು, ಪ್ರತಿಭಟನೆ ಮುಂದುವರೆಸಿದ್ದರು.</p>.<p>ಇದೀಗ ಜಿಲ್ಲಾಡಳಿತ ಸ್ಪಂದಿಸಿ ನಿವೇಶನ ವಂಚಿತರು ಒತ್ತಾಯಿಸಿದ ಬ್ಯಾಲ್ಯ ಗ್ರಾಮದ ಗ್ರಾಮಠಾಣ ಜಾಗದಲ್ಲೇ 30 ಕುಂಟೆ ಜಾಗ ಗುರುತಿಸಿ ಒತ್ತುವರಿ ಜಾಗ ತೆರವುಗೊಳಿಸಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಕ್ರಮವಹಿಸಿದೆ. ಈ ಸಂಬಂಧ ಪತ್ರ ಮುಖೇನ ಜಿಲ್ಲಾ ಪಂಚಾಯಿತಿ ಸಿಇಒಗೆ ಸೂಚಿಸಿರುವುದು ಹಾಗೂ ಇದರ ಪ್ರತಿಯನ್ನು ಪ್ರತಿಭಟನಾಕಾರರಿಗೆ ನೀಡಿದ ಹಿನ್ನೆಲೆಯಲ್ಲಿ ಬುಧವಾರ ಸಂಜೆ 6.30 ಕ್ಕೆ ಪ್ರತಿಭಟನೆ ಕೈ ಬಿಡಲಾಗಿದೆ.</p>.<p>ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ಮಧುಗಿರಿ, ತಹಸಿಲ್ದಾರ್ ನಂದೀಶ್, ಭೂಮಿ ಹೋರಾಟಗಾರ ಹಂದ್ರಾಳ್ ನಾಗಭೂಷಣ್, ಜೆಸಿಬಿ ವೆಂಕಟೇಶ್, ಟಿ.ಸಿ.ರಾಮಯ್ಯ, ಪ್ರಮುಖರಾದ ಭರತ್ ಕುಮಾರ್, ಮೋಹನ್ ಕುಮಾರ್, ಯೋಗೀಶ್ ಮೆಳೆಕಲ್ಲಹಳ್ಳಿ, ರಾಮಮೂರ್ತಿ, ಶಿವರಾಜು, ಮಲ್ಲಿಕಾರ್ಜುನ್, ತಿಮ್ಮಯ್ಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ಜಿಲ್ಲಾಡಳಿತವು ಮಧುಗಿರಿ ತಾಲ್ಲೂಕು ಬ್ಯಾಲ್ಯ ಗ್ರಾಮದ ಬಡ ಜನರಿಗೆ ನಿವೇಶನ ನೀಡಲು ಸ್ಪಂದಿಸಿದ ಹಿನ್ನೆಲೆಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸದಸ್ಯರುಅನಿರ್ದಿಷ್ಟ ಕಾಲ ಅಹೋರಾತ್ರಿ ಪ್ರತಿಭಟನೆ ಕೈಬಿಟ್ಟಿದ್ದಾರೆ.</p>.<p>ನಿವೇಶನ ನೀಡುವಂತೆ ಒತ್ತಾಯಿಸಿ ಸಂತ್ರಸ್ತರು ಕಳೆದ 14 ದಿನಗಳಿಂದ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ತುಮಕೂರು ಜಿಲ್ಲಾ ಘಟಕದ ನೇತೃತ್ವದಲ್ಲಿ ಅನಿರ್ದಿಷ್ಟ ಕಾಲ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರು.</p>.<p>ಈ ನಡುವೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ನಿವೇಶನ ರಹಿತರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಲು ದೊಡ್ಡಹೊಸಹಳ್ಳಿ ಗ್ರಾಮದ ಸರ್ವೆ ನಂ.127 ರಲ್ಲಿ 1 ಎಕರೆ 31 ಗುಂಟೆ ಹಾಗೂ ಸರ್ವೆ ನಂ.129 ರಲ್ಲಿ 2 ಎಕರೆ 31 ಗುಂಟೆ ಜಮೀನು ಮಂಜೂರು ಮಾಡಿ ಆದೇಶಿಸಿದ್ದರು. ಆದರೆ, ಈ ಜಾಗದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿದ್ದಲ್ಲದೆ, ತುಂಬಾ ತಗ್ಗಾದ ಪ್ರದೇಶವಾಗಿದೆ ಎಂದು ಸಂತ್ರಸ್ತರು ಒಪ್ಪಲು ನಿರಾಕರಿಸಿದ್ದರು.</p>.<p>ಅಲ್ಲದೆ, ಈ ಜಾಗದಲ್ಲಿ ಚಿರತೆ, ಕರಡಿಗಳ ಕಾಟವಿದೆ. ಮುಖ್ಯವಾಗಿ ಈ ಸರ್ವೆ ನಂ ಪಕ್ಕದಲ್ಲಿ ಈ ಹಿಂದೆ ಇದೇ ಗ್ರಾಮದ ಜನರಿಗೆ ನಿವೇಶನ ನೀಡಿದ್ದು, ಜನರು ಯೋಗ್ಯವಾದ ಸ್ಥಳವಲ್ಲವಾದ್ದರಿಂದ ಈ ಸ್ಥಳಕ್ಕೆ ಹೋಗಿಲ್ಲ ಹಾಗೂ ಈ ಸ್ಥಳ ಬ್ಯಾಲ್ಯ ಗ್ರಾಮದಿಂದ 3 ಕಿ.ಮೀ ದೂರವಿದೆ. ಹಾಗಾಗಿ ಬಡವರಾದ ನಾವು ಹೋಗುವುದಿಲ್ಲ ಎಂದು ಪಟ್ಟು ಹಿಡಿದು, ಪ್ರತಿಭಟನೆ ಮುಂದುವರೆಸಿದ್ದರು.</p>.<p>ಇದೀಗ ಜಿಲ್ಲಾಡಳಿತ ಸ್ಪಂದಿಸಿ ನಿವೇಶನ ವಂಚಿತರು ಒತ್ತಾಯಿಸಿದ ಬ್ಯಾಲ್ಯ ಗ್ರಾಮದ ಗ್ರಾಮಠಾಣ ಜಾಗದಲ್ಲೇ 30 ಕುಂಟೆ ಜಾಗ ಗುರುತಿಸಿ ಒತ್ತುವರಿ ಜಾಗ ತೆರವುಗೊಳಿಸಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಕ್ರಮವಹಿಸಿದೆ. ಈ ಸಂಬಂಧ ಪತ್ರ ಮುಖೇನ ಜಿಲ್ಲಾ ಪಂಚಾಯಿತಿ ಸಿಇಒಗೆ ಸೂಚಿಸಿರುವುದು ಹಾಗೂ ಇದರ ಪ್ರತಿಯನ್ನು ಪ್ರತಿಭಟನಾಕಾರರಿಗೆ ನೀಡಿದ ಹಿನ್ನೆಲೆಯಲ್ಲಿ ಬುಧವಾರ ಸಂಜೆ 6.30 ಕ್ಕೆ ಪ್ರತಿಭಟನೆ ಕೈ ಬಿಡಲಾಗಿದೆ.</p>.<p>ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ಮಧುಗಿರಿ, ತಹಸಿಲ್ದಾರ್ ನಂದೀಶ್, ಭೂಮಿ ಹೋರಾಟಗಾರ ಹಂದ್ರಾಳ್ ನಾಗಭೂಷಣ್, ಜೆಸಿಬಿ ವೆಂಕಟೇಶ್, ಟಿ.ಸಿ.ರಾಮಯ್ಯ, ಪ್ರಮುಖರಾದ ಭರತ್ ಕುಮಾರ್, ಮೋಹನ್ ಕುಮಾರ್, ಯೋಗೀಶ್ ಮೆಳೆಕಲ್ಲಹಳ್ಳಿ, ರಾಮಮೂರ್ತಿ, ಶಿವರಾಜು, ಮಲ್ಲಿಕಾರ್ಜುನ್, ತಿಮ್ಮಯ್ಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>