<p><strong>ಕುಣಿಗಲ್:</strong> ತಾಲ್ಲೂಕಿನ ಎಡೆಯೂರು ದಾಸೋಹದ ಮಹಾಮನೆಯಲ್ಲಿ ಭಾನುವಾರ ದಾವಣಗೆರೆ ಭಕ್ತವೃಂದದಿಂದ ಭಕ್ತರಿಗೆ ಬಿಸಿಬಿಸಿ ದಾವಣಗೆರೆಯ ಬೆಣ್ಣೆದೋಸೆ ಸೇವೆ ನಡೆಯಿತು. ನೂರಾರು ಭಕ್ತರು ಬೆಣ್ಣೆ ದೋಸೆ ಸವಿದು ತೃಪ್ತರಾದರು.</p>.<p>ದಾವಣಗೆರೆಯ ಪುಟ್ಟರಾಜು ಗವಾಯಿ ಆಶ್ರಮದ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶಿವಮೂರ್ತಿಸ್ವಾಮಿ ಮತ್ತು ಸಹ ಕಾರ್ಯದರ್ಶಿ ಜಿ. ಕರಿಬಸಪ್ಪ ತಂಡದವರು, ಕಳೆದ ಎರಡುವರ್ಷದಿಂದ ಧನರ್ಮಾಸದ ವಿಶೇಷ ದಿನದಂದು ಎಡೆಯೂರು ಸಿದ್ದಲಿಂಗೇಶ್ವರಸ್ವಾಮಿ ಕ್ಷೇತ್ರದ ಭಕ್ತರಿಗೆ ದಾವಣಗೆರೆಯ ಬೆಣ್ಣೆ ದೋಸೆ ರುಚಿ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ನಡೆಸುತ್ತಿದ್ದಾರೆ.</p>.<p>ದಾವಣಗೆರೆಯಿಂದಲೇ ಬೆಣ್ಣೆ, ದೋಸೆಗೆ ಬೇಕಾದ ಸಾಮಗ್ರಿಗಳು, ಬಾಣಸಿಗರ ಕರೆತಂದು ದೋಸೆ ಸಿದ್ಧಪಡಿಸಿ ಬೆಳಗಿನ ತಿಂಡಿಗೆ ಭಕ್ತರಿಗೆ ದಾವಣಗೆರೆ ಬೆಣ್ಣೆದೋಸೆ ಹಂಚುತ್ತಿದ್ದಾರೆ. ಭಾನುವಾರ ಬೆಳ್ಳಗೆ ದಾಸೋಹ ಮಹಾಮನೆಯಲ್ಲಿ ಸಾವಿರಕ್ಕೂ ಹೆಚ್ಚು ಭಕ್ತರು ಬೆಣ್ಣೆ ದೋಸೆ ಸವಿದರು.</p>.<p>ದಾವಣಗೆರೆಯ ಟಿ.ಕೆ.ಕರಿಬಸವಯ್ಯ ಸಹ ಮಧ್ಯಾಹ್ನದ ಊಟಕ್ಕೆ 2 ಸಾವಿರ ಭಕ್ತರಿಗೆ ಮೆಣಸಿನಕಾಯಿ ಬಜ್ಜಿ ಹಂಚಿ ತಮ್ಮ ಸೇವೆ ಸಮರ್ಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಣಿಗಲ್:</strong> ತಾಲ್ಲೂಕಿನ ಎಡೆಯೂರು ದಾಸೋಹದ ಮಹಾಮನೆಯಲ್ಲಿ ಭಾನುವಾರ ದಾವಣಗೆರೆ ಭಕ್ತವೃಂದದಿಂದ ಭಕ್ತರಿಗೆ ಬಿಸಿಬಿಸಿ ದಾವಣಗೆರೆಯ ಬೆಣ್ಣೆದೋಸೆ ಸೇವೆ ನಡೆಯಿತು. ನೂರಾರು ಭಕ್ತರು ಬೆಣ್ಣೆ ದೋಸೆ ಸವಿದು ತೃಪ್ತರಾದರು.</p>.<p>ದಾವಣಗೆರೆಯ ಪುಟ್ಟರಾಜು ಗವಾಯಿ ಆಶ್ರಮದ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶಿವಮೂರ್ತಿಸ್ವಾಮಿ ಮತ್ತು ಸಹ ಕಾರ್ಯದರ್ಶಿ ಜಿ. ಕರಿಬಸಪ್ಪ ತಂಡದವರು, ಕಳೆದ ಎರಡುವರ್ಷದಿಂದ ಧನರ್ಮಾಸದ ವಿಶೇಷ ದಿನದಂದು ಎಡೆಯೂರು ಸಿದ್ದಲಿಂಗೇಶ್ವರಸ್ವಾಮಿ ಕ್ಷೇತ್ರದ ಭಕ್ತರಿಗೆ ದಾವಣಗೆರೆಯ ಬೆಣ್ಣೆ ದೋಸೆ ರುಚಿ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ನಡೆಸುತ್ತಿದ್ದಾರೆ.</p>.<p>ದಾವಣಗೆರೆಯಿಂದಲೇ ಬೆಣ್ಣೆ, ದೋಸೆಗೆ ಬೇಕಾದ ಸಾಮಗ್ರಿಗಳು, ಬಾಣಸಿಗರ ಕರೆತಂದು ದೋಸೆ ಸಿದ್ಧಪಡಿಸಿ ಬೆಳಗಿನ ತಿಂಡಿಗೆ ಭಕ್ತರಿಗೆ ದಾವಣಗೆರೆ ಬೆಣ್ಣೆದೋಸೆ ಹಂಚುತ್ತಿದ್ದಾರೆ. ಭಾನುವಾರ ಬೆಳ್ಳಗೆ ದಾಸೋಹ ಮಹಾಮನೆಯಲ್ಲಿ ಸಾವಿರಕ್ಕೂ ಹೆಚ್ಚು ಭಕ್ತರು ಬೆಣ್ಣೆ ದೋಸೆ ಸವಿದರು.</p>.<p>ದಾವಣಗೆರೆಯ ಟಿ.ಕೆ.ಕರಿಬಸವಯ್ಯ ಸಹ ಮಧ್ಯಾಹ್ನದ ಊಟಕ್ಕೆ 2 ಸಾವಿರ ಭಕ್ತರಿಗೆ ಮೆಣಸಿನಕಾಯಿ ಬಜ್ಜಿ ಹಂಚಿ ತಮ್ಮ ಸೇವೆ ಸಮರ್ಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>