<p><strong>ಚಿಕ್ಕನಾಯಕನಹಳ್ಳಿ</strong>: ತಾಲ್ಲೂಕಿನ ಕಂದಿಕೆರೆ ಹೋಬಳಿ ಕಾತ್ರಿಕೆಹಾಳ್ನಲ್ಲಿ ಡಿಸಿಸಿ ಬ್ಯಾಂಕ್ 34ನೇ ಶಾಖೆಗೆ ಸಚಿವ ಜೆ.ಸಿ.ಮಾಧುಸ್ವಾಮಿ ಚಾಲನೆ ನೀಡಿದರು.</p>.<p>ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ, ಕಾತ್ರಿಕೆಹಾಳ್ ಸೇರಿದಂತೆ ಗುಡ್ಡಗಾಡು ಭಾಗದಲ್ಲಿ 3500ಕ್ಕೂ ಹೆಚ್ಚು ರೈತರ ಖಾತೆಗಳು ಪಟ್ಟಣದ ಬ್ಯಾಂಕ್ಗಳಲ್ಲಿವೆ. ತೀರ್ಥಪುರ, ಸಿಂಗದಹಳ್ಳಿ, ಸಿದ್ದನಕಟ್ಟೆ, ಜಾಣೆಹಾರ್ ಸುತ್ತಮುತ್ತಲಿನ ಹಳ್ಳಿಗಳಿಗೆ ಕಾತ್ರಿಕೆಹಾಲ್ ಕೇಂದ್ರ. ಹಾಗಾಗಿ ಇಲ್ಲಿ ಡಿಸಿಸಿ ಬ್ಯಾಂಕ್ ಶಾಖೆ ತೆರೆಯಲಾಗಿದೆ ಎಂದರು.</p>.<p>ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಕುಬೇಂದ್ರನಾಯ್ಕ್, ರೈತರನ್ನು ಖಾಸಗಿ ಬಡ್ಡಿ ವ್ಯಾಪಾರಿಗಳ ಹಿಡಿತದಿಂದ ತಪ್ಪಿಸಿ ನೆಮ್ಮದಿಯ ಜೀವನ ನಡೆಸುವಂತೆ ಮಾಡಲು ಬ್ಯಾಂಕ್ ತೆರೆಯಲಾಗಿದೆ ಎಂದರು.</p>.<p>ತೀರ್ಥಪುರ ಗ್ರಾ.ಪಂ ಅಧ್ಯಕ್ಷ ನಾಗರಾಜು, ರಾಮನಹಳ್ಳಿಯ ನರಸಿಂಹಮೂರ್ತಿ, ಕುಮಾರಸ್ವಾಮಿ, ರಾಮ ಕೃಷ್ಣ, ಎಸ್.ಆರ್.ರಂಗ ಸ್ವಾಮಿ, ಸಿಡಿಒ ಮಾಂತೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕನಾಯಕನಹಳ್ಳಿ</strong>: ತಾಲ್ಲೂಕಿನ ಕಂದಿಕೆರೆ ಹೋಬಳಿ ಕಾತ್ರಿಕೆಹಾಳ್ನಲ್ಲಿ ಡಿಸಿಸಿ ಬ್ಯಾಂಕ್ 34ನೇ ಶಾಖೆಗೆ ಸಚಿವ ಜೆ.ಸಿ.ಮಾಧುಸ್ವಾಮಿ ಚಾಲನೆ ನೀಡಿದರು.</p>.<p>ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ, ಕಾತ್ರಿಕೆಹಾಳ್ ಸೇರಿದಂತೆ ಗುಡ್ಡಗಾಡು ಭಾಗದಲ್ಲಿ 3500ಕ್ಕೂ ಹೆಚ್ಚು ರೈತರ ಖಾತೆಗಳು ಪಟ್ಟಣದ ಬ್ಯಾಂಕ್ಗಳಲ್ಲಿವೆ. ತೀರ್ಥಪುರ, ಸಿಂಗದಹಳ್ಳಿ, ಸಿದ್ದನಕಟ್ಟೆ, ಜಾಣೆಹಾರ್ ಸುತ್ತಮುತ್ತಲಿನ ಹಳ್ಳಿಗಳಿಗೆ ಕಾತ್ರಿಕೆಹಾಲ್ ಕೇಂದ್ರ. ಹಾಗಾಗಿ ಇಲ್ಲಿ ಡಿಸಿಸಿ ಬ್ಯಾಂಕ್ ಶಾಖೆ ತೆರೆಯಲಾಗಿದೆ ಎಂದರು.</p>.<p>ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಕುಬೇಂದ್ರನಾಯ್ಕ್, ರೈತರನ್ನು ಖಾಸಗಿ ಬಡ್ಡಿ ವ್ಯಾಪಾರಿಗಳ ಹಿಡಿತದಿಂದ ತಪ್ಪಿಸಿ ನೆಮ್ಮದಿಯ ಜೀವನ ನಡೆಸುವಂತೆ ಮಾಡಲು ಬ್ಯಾಂಕ್ ತೆರೆಯಲಾಗಿದೆ ಎಂದರು.</p>.<p>ತೀರ್ಥಪುರ ಗ್ರಾ.ಪಂ ಅಧ್ಯಕ್ಷ ನಾಗರಾಜು, ರಾಮನಹಳ್ಳಿಯ ನರಸಿಂಹಮೂರ್ತಿ, ಕುಮಾರಸ್ವಾಮಿ, ರಾಮ ಕೃಷ್ಣ, ಎಸ್.ಆರ್.ರಂಗ ಸ್ವಾಮಿ, ಸಿಡಿಒ ಮಾಂತೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>