ಶನಿವಾರ ಮಧ್ಯಾಹ್ನ ವಿದ್ಯುತ್ ಪ್ರವಹಿಸಿ ಗಾಯಗೊಂಡಿದ್ದ ಅವಿನಾಶ್ನನ್ನು ಸ್ನೇಹಿತರಾದ ನಿಂಗರಾಜು, ಕಾರ್ತಿಕ್ ಗೌಡ ಬೈಕ್ನಲ್ಲಿ ಸಮೀಪದ ಚೌಡನಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ವೈದ್ಯರು ಸಭೆಗೆ ಹೋಗಿದ್ದು, ದಾದಿಯರು ಇಲ್ಲದೆ, ಅಟೆಂಡರ್ ಮಾತ್ರ ಇದ್ದರು. ಅವರು ಅಸಹಾಯಕನಾಗಿ ಕೈಚೆಲ್ಲಿದಾಗ, ಸ್ನೇಹಿತರ ಕಾರು ಪಡೆದು ಕುಣಿಗಲ್ ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮೃತಪಟ್ಟಿದ್ದಾರೆ. ತುರ್ತು ಚಿಕಿತ್ಸೆಗಾಗಿ ‘108’ ಸಂಪರ್ಕ ಮಾಡಲಾಗಿದ್ದು ಅದೂ ತಡವಾಗಿ ಬಂದಿದೆ. ಈ ಭಾಗದಲ್ಲಿ ಈ ರೀತಿಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಸಂಬಂಧಪಟ್ಟವರು ಗಮನ ಹರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.